ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ
ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ ಇತ್ತೀಚೆಗೆ ಸಾಣೆಹಳ್ಳಿ ಶ್ರೀಗಳು ಕೊಟ್ಟಿರುವ ಹೇಳಿಕೆಗೆ ವೈದಿಕವಾದಿಗಳು, ಪುರೋಹಿತಶಾಹಿಗಳಿಂದ ವಿರೋಧ ವ್ಯಕ್ತವಾಯಿತು. ಲಿಂಗಾಯತರಾದವರು ವೇದಿಕೆ ಮೇಲೆ ಅಥವಾ ಮನೆಗಳಲ್ಲಿ ಗಣಪತಿ ಪೂಜೆ ಮಾಡುವ ಬದಲು ವಚನ ಪಠಣ ಹಾಗೂ ಪ್ರಾರ್ಥನೆ ಮಾಡಬೇಕು ಎಂದು ಶ್ರೀಗಳು ಹೇಳಿದ್ದರು. ಅವರ ಈ ಹೇಳಿಕೆ *ಬಸವತತ್ವ* ಕ್ಕೇ ಅನುಸಾರವಾಗಿ ಇದೆ. ಶ್ರೀಗಳು ಈ ಹೇಳಿಕೆ ಕೊಟ್ಟಿದ್ದು ಲಿಂಗಾಯತರಿಗೆ ಮಾತ್ರ. ಆದ್ದರಿಂದ ಲಿಂಗಾಯತರಲ್ಲದವರು ಇವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಲಿಂಗಾಯತ ಧರ್ಮದಲ್ಲಿ ಬಹು ದೇವತಾ ಉಪಾಸನೆಗೆ ಅವಕಾಶವಿಲ್ಲ. ಲಿಂಗಾಯತರಾದವರು *ಇಷ್ಟಲಿಂಗ* ಬಿಟ್ಟು ಬೇರೆ ಯಾವುದೇ *ಅನ್ಯದೈವ* ವನ್ನೂ ಪೂಜಿಸಬಾರದು ಎಂದು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ರೀತಿ ಹೇಳಿ ದಾರಿ ತಪ್ಪಿಸ್ತಾ ಇದ್ದಾರೆ "ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ ಇದೆ. ಅವರು ಅರ್ಚಕರಾಗಿದ್ದರು. ಬಸವಣ್ಣನವರು ಕೂಡಲಸಂಗಮದ ದೇವಸ್ಥಾನದಲ್ಲಿರುವ ಸಂಗಮೇಶ್ವರ (ಶಿವಲಿಂಗದ) ಹೆಸರಿನ ಮೇಲೆಯೇ ತಮ್ಮ ಎಲ್ಲ ವಚನಗಳು ಬರೆದಿದ್ದಾರೆ" ಎಂದು ವಾದಿಸುತ್ತಿದ್ದಾರೆ. ಈ ರೀತಿ ವೈದಿಕರು ಲಿಂಗಾಯತ ಧರ್ಮದ ಬುಡಕ್ಕೆ ದಾಳಿ ಮಾಡ್ತಾ ಇದ್ದಾರೆ. ಈ ರೀತಿಯ ದಾಳಿಗಳಿಗೆ ಪ್ರತ್ಯುತ್ತರ ಕೊಡಲು ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿ ಅವರು 30 ವರ್ಷಗಳ