ಪೋಸ್ಟ್‌ಗಳು

ಫೆಬ್ರವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ

ಇಮೇಜ್
 * ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ:* *ಸನ್ಮಾನ್ಯಶ್ರೀ ಜಗದೀಶ, ಮಾನ್ಯ ಕಾರ್ಯದರ್ಶಿ, ಹಿಂದುಳಿದ ಆಯೋಗ ಅವರನ್ನು ಕರ್ನಾಟಕ ರಾಜ್ಯ ಸರಕಾರ ಮನವಿ ಸ್ವೀಕರಿಸಲು ಕಳಿಸಿತ್ತು:* *ಶ್ರೀ ಜಗದೀಶ ಮಾತನಾಡಿ ನನಗೆ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಸಚಿವರು  ನಿಮ್ಮ ಮನವಿ ಸ್ವೀಕರಿಸಿ ಆಶ್ವಾಸನೆ ನೀಡಲು ಕಳಿಸಿದ್ದಾರೆ ಎಂದು ಮನವಿ ಸ್ವೀಕರಿಸಿ ಮಾತನಾಡಿದರು.* *ಸಂಪೂರ್ಣ ಸಫಲವಾದ ಲಿಂಗಾಯತ ಧರ್ಮದ ಮಾನ್ಯತೆ ಸಾಂಕೇತಿಕ ಧರಣಿ: ಸಮಯ ಕೂಡಿ ಬಂದರೆ, ನಿಸ್ವಾರ್ಥ ಮನಸಿನಿಂದ ಯೋಜನೆ ಬದ್ದ ಕೆಲಸ ಮಾಡಿದರೆ ಎಂತಹ ಕೆಲಸ ಕೂಡ ಆಗುತ್ತವೆ ಎಂಬುದಕ್ಕೆ ಇಂದಿನ ದಿನ ಹಾಗೂ ಮುಂಬಯಿ ರಾಲಿ ಉದಾಹರಣೆ.* *ಫ್ರೀಡಂ ಪಾರ್ಕ್ ಬೆಂಗಳೂರು: ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ.* *ಧರಣಿಯಲ್ಲಿ ಭಾಗವಹಿಸಿದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಲಿಂಗಾಯತ ಧರ್ಮದ ಪೂಜ್ಯರು, ಮುಖಂಡರು ಮತ್ತು ಶರಣ ಶರಣೆಯರು.* *ಕೆಲವೇ ದಿವಸಗಳ ಹಿಂದೆ ಮುಂಬಯಿಯಲ್ಲಿ ಘೋಷಣೆ ಮಾಡಿದ್ದ ಹಾಗೆ, ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸೌಲಭ್ಯ ಕೊಡಲು ಹಾಗೂ ವಿವಿಧ ಬೇಡಿಕೆಗೆ ಸಾಂಕೇತಿಕ ಧರಣಿ ನಿರ್ಧರಿಸಲಾಗಿತ್ತು.* *ಸುಮಾರು 2018ರಿಂದ ಇಲ್ಲಿಯವರೆಗೆ ಯಾವ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿಲ್ಲಾ, ಒಂದು ಸಮಾವೇಶ ಅಥವಾ ರಾಲಿ ಕೂಡ ಮಾಡಿಲ್ಲ.* *ಆದರಿಂದ ನಮ್ಮ ಅಖಿಲ ಭಾರತ ಲಿಂಗಾಯತ ಸಮನ್...

ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ

ಇಮೇಜ್
ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ ಪೂಜ್ಯ ಮಾತಾಜಿಯವರ ಬಲಿಷ್ಠ ನಾಯಕತ್ವದಲ್ಲಿ ಎಲ್ಲಾ ರಾ.ಬ.ದಳಗಳು ಸುಗಮವಾಗಿ ಸಾಗುತಿದ್ದವು. ಆದರೆ ಪೂಜ್ಯ ಮಾತಾಜಿ ಲಿಂಗೈಕ್ಯ ಆದ ಮೇಲೆ ಬೀದರ್ ರಾ.ಬ.ದಳ ಸಂಘಟನೆಯಲ್ಲಿ ಕೆಲವರು ಒಳಗಿಂದೊಳಗೆ  ಚಟುವಟಿಕೆಗಳನ್ನು ಪ್ರಾರಂಭಿಸಿದರು. ಲಿಂಗದೇವ ನೆಪ ಮಾಡಿಕೊಂಡು ಸಂಘಟನೆಯನ್ನು ಒಡೆಯಲು ಶುರು ಮಾಡಿದರು.  ಲಿಂಗಾಯತ ಧರ್ಮ ಮಾನ್ಯತೆ ಕೊಡಿಸುತ್ತೇವೆ ಎಂಬ ಸುಳ್ಳು ಕನಸುಗಳನ್ನು ತೋರಿಸಿ ರಾ.ಬ.ದಳ ಸಂಘಟನೆಯನ್ನು ಒಡೆದು ಜಾ.ಲಿ.ಮಾಹಸಭಾ ಸಂಘಟನೆಯನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು. ಇದರ ಫಲವಾಗಿ ಒಂದು ವರ್ಷದ ಹಿಂದೆ ಮಾತೆಗಂಗಾದೇವಿ ಯವರು ಕೆಲವರ ಒತ್ತಡಕ್ಕೆ ಮಣಿದು ಪೂಜ್ಯ ಲಿಂ. ಮಾತಾಜಿಯವರ ಶ್ರೇಷ್ಠ ಸಂಶೋಧನೆ ಲಿಂಗದೇವ  ವಚನಾಂಕಿತವನ್ನು ಹಿಂಪಡೆಯುತ್ತೇನೆ ಎಂದು ಹೇಳಿಕೆ ಕೊಟ್ಟರು (ಕೊಡಿಸಲಾಯಿತು). ಇದಾದ ನಂತರ ಬೀದರಿನ ಕೆಲವರು ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ ಅವರ ಮೇಲೆ ಹಾಗೂ ಶರಣರ ಮೇಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಲಿಂಗದೇವ ಬಳಸಬಾರದು ಎಂದು ಒತ್ತಡ ತರಲು ಪ್ರಾರಂಭಿಸಿದರು. ಆದರೆ ಬೀದರ್ ನ ತತ್ವ ನಿಷ್ಠ ಶರಣರು ಯಾವುದೇ ಒತ್ತಡಕ್ಕೆ, ಬೆದರಿಕೆಗೆ ಬಗ್ಗದೆ ಪೂಜ್ಯ ಲಿಂಗೈಕ್ಯ ಮಾತಾಜಿ ಅವರ ಸಂಕಲ್ಪದಂತೆ, ಅವರು ಹಾಕಿಕೊಟ್ಟ ದಾರಿಯಂತೆ, ವಾರದ ಪ್ರಾರ್ಥನೆಯನ್ನು ಮುಂದುವರಿಸ್ಕೊಂಡು ಬರಲಾಯಿತು.  ಅವಾಗ ಆ ಸ್ವಾರ್ಥ ಶಕ್ತ...

ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.

ಇಮೇಜ್
ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು. 1 * ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು *. 2 ಲಿಂಗಾಯತ ಧರ್ಮೀಯರಿಗೆ * ಧಾರ್ಮಿಕ ಅಲ್ಪಸಂಖ್ಯಾತ * ಸ್ಥಾನ ಸಿಗಬೇಕು 3 ಲಿಂಗಾಯತ ಯುವಕರ ವಿಕಾಸಕ್ಕಾಗಿ * ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ * ಮಹಾಮಂಡಳಿ ಸ್ಥಾಪನೆಯಾಗ ಬೇಕು 4 ಮಂಗಳವೇಡೆಯಲ್ಲಿ ಮಂಜೂರಾದ *ಮಹಾತ್ಮ ಬಸವೇಶ್ವರರ ಸ್ಮಾರಕ ಕೆಲಸ ತ್ವರಿತವಾಗಿ ಆರಂಭಿಸಬೇಕು* 5 ವಿಧಾನ ಭವನದ ಪರಿಸರದಲ್ಲಿ * ಮಾಹತ್ಮ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಯಾಗಬೇಕು* 6 ಪ್ರತಿಯೊಂದು ಊರಿನಲ್ಲಿ * ಲಿಂಗಾಯತ ರುದ್ರಭೂಮಿ * ಗೆ ಜಾಗ ಮೀಸಲಿಡಬೇಕು. 7 ಪ್ರತಿಯೊಂದು ಊರಿನಲ್ಲಿ * ಅನುಭವ ಮಂಟಪ * ಎಂಬ ಸಭಾಗೃಹ ನಿರ್ಮಿಸಿ ಕೊಡಬೇಕು. 8 ರಾಷ್ಟ್ರೀಯ * ಧರ್ಮವಾರು ಜನಗಣತಿಯಲ್ಲಿ ಲಿಂಗಾಯತರಿಗಾಗಿ ಪ್ರತ್ಯೇಕ ಧರ್ಮ ಕಾಲಂ * ಇರಬೇಕು 9 ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೋಸ್ಕರ ಪ್ರತಿಯೊಂದು ಜಿಲ್ಲೆಯಲ್ಲಿಯೂ * ವಸತಿ ನಿಲಯಗಳನ್ನು * ನಿರ್ಮಿಸಬೇಕು. 10 ಮೀರಜ್ ರೈಲ್ವೆ ಜಂಕ್ಷನ್ಗೆ * ಮಹಾತ್ಮಾ ಬಸವೇಶ್ವರ ರೈಲ್ವೆ ಜಂಕ್ಷನ್ * ಎಂದು ನಾಮಕರಣ ಮಾಡಬೇಕು.