ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಲ್ಕಿ ಶ್ರೀಗಳೇ ತಮಗೆ ಲಿಂಗೈಕ್ಯ ಮಾತಾಜಿಯವರ ಸಂಶೋಧನೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?

ಇಮೇಜ್
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರೆ, ಕಲ್ಯಾಣ ಕಿರಣದಲ್ಲಿ ಪ್ರಕಟವಾದ  ಅಭಿನಂದನೆಗಳು ಎಂಬ ಲೇಖನದಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಪ್ರಾರಂಭದಲ್ಲಿ ಹಾಡಿ ಹೊಗಳಿ, ನಂತರ ಪರೋಕ್ಷವಾಗಿ ಅವಮಾನಿಸುವ ಕೃತ್ಯ ಮಾಡಿದ್ದೀರಿ. ಲಿಂಗದೇವವು ದೇವರ ಹೆಸರು ಎಂದು ಒಪ್ಪಿಕೊಳ್ಳಲು ತಮಗೆ 25 ವರ್ಷಗಳು ಬೇಕಾದವೇ??? ಹಾಗಾದರೆ ತಮಗೆ ಮಾತಾಜಿ ಅವರ ಸಂಶೋಧನೆ ಲಿಂಗದೇವ  ವಚನಾಂಕಿತ ಅರ್ಥ ಮಾಡಿಕೊಳ್ಳಲು ಇನ್ನು 25 ವರ್ಷಗಳು ಬೇಕಾಗುತ್ತವೆ ಎಂದೆನಿಸುತ್ತದೆ.  ಇತ್ತೀಚಿಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ * ನಂದಿ ಮೂರ್ತಿ* ಯ ಭಾವಚಿತ್ರವನ್ನು  ಹಾಕಿ ಕಾರ್ಯಕ್ರಮ ಮಾಡಲಾಗಿತ್ತು. ಗುರು ಬಸವಣ್ಣನವರಿಗೆ ಅಪಚಾರ ವಾಗಿದ್ದ ಆ ಒಂದು ಕಾರ್ಯಕ್ರಮದಲ್ಲಿ  *ಯಾವುದೇ ಚಕಾರವೇತ್ತದೆ ಮೌನವಾಗಿ * ಭಾಗವಹಿಸಿ ಬಂದಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ  ???  * ಪ್ರಶ್ನೆ ಮಾಡಿದರೆ ಸರಕಾರದಿಂದ ಬರುವ ಅನುದಾನಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವೇ??? * ಅನೇಕ ಶಾಲಾ ಕಾಲೇಜುಗಳನ್ನು ತೆಗೆದು ಲಾಭ ನಷ್ಟದ ವ್ಯವಹಾರಗಳಲ್ಲಿ (ಚಿಂತೆಗಳಲ್ಲಿ) ಮುಳುಗಿಹೋಗಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ???  ಈ ಲೇಖನದಲ್ಲಿ ತಾವು " 12 ವರ್ಷಗಳ ಚಿಂತೆ ಇಂದು ನಿಶ್ಚಿಂತೆ ಆಯಿತು" ಎಂಬ ಗುರು ಬಸವಣ್ಣನವರ ...

ಮಾತಾಜಿ ನಮ್ಮನ್ನು ಕ್ಷಮಿಸಿ

ಇಮೇಜ್
🙏🏼 ಮಾತಾಜಿ ನಮ್ಮನ್ನು ಕ್ಷಮಿಸಿ 🙏🏼 ನಿಮ್ಮ ಅನರ್ಘ್ಯ ರತ್ನದ ಕೊಡಗೆಯನ್ನು ಕಳೆದು ಕೊಂಡೆವು, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಬೆವರಿನಿಂದ ಕಟ್ಟಿದ ಸಂಸ್ಥೆಯು ಒಡೆದು ಹನ್ನೊಂದಾಯಿತು , ಕಾಪಾಡಿಕೊಳ್ಳಲು ನಮಗೆ ಆಗಲಿಲ್ಲಾ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ. 🙏🏼 ಅಂದು, * ಧನವಂತರ ಮನೆಯಿಂದ ಬಂದು * ಬಸವ ಧರ್ಮದ ಸಿರಿತನವನ್ನು ಲಿಂಗಾಯತರಿಗೆ ತಿಳಿಸಿಕೊಟ್ಟಿರಿ, ಇಂದು ನಿಮ್ಮ ಸಂಸ್ಥೆಯ ಅಡಿಯಲಿದ್ದವರು * ತಮ್ಮ ಬಂಧು ಬಾಂಧವರನ್ನು ಸಿರಿವಂತರನ್ನಾಗಿ ಮಾಡುತ್ತಿದ್ದಾರೆ *, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಗುರುವಿನ ಋಣ ತೀರಿಸಲು, ಗುರುವಿಗೊಂದು ಪೀಠವನ್ನು ನಿರ್ಮಿಸಿದಿರಿ , ನಿಮ್ಮವರು ನಿಮಗೆ ಗುರು ದ್ರೋಹವನ್ನು ಮಾಡಿದರು , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ .🙏🏼 ತಾವು ತಮ್ಮ ವಚನಗಳನ್ನು ಬರೆಯುವುದನ್ನು ನಿಲ್ಲಿಸಿ , ಶರಣರ ವಚನಗಳನ್ನು ಮನೆ ಮನಗಳಲ್ಲಿ ಬಿತ್ತಿದ್ದಿರಿ, ನಿಮ್ಮ ಸಾಹಿತ್ಯದ ಕೊಲೆ ನಿಮ್ಮವರಿಂದಲೆ ಆಗುತ್ತಿದೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 * ಶರಣರನ್ನು ಕೂಡಿಸಲು *, ಶರಣಮೇಳ, ಕಲ್ಯಾಣ ಪರ್ವ, ಗಣ ಮೇಳ, ಶರಣೋತ್ಸವ ಹಾಗು ಲಿಂಗಾಯತ  ರ್ಯಾಲಿಗಳನ್ನು ನಡೆಸಿದಿರಿ, ಇಂದು ಇವೆ ಕಾರ್ಯಕ್ರಮಗಳನ್ನು *ಶರಣರನ್ನು ಒಡೆಯಲು* ಉಪಯೋಗಿಸುತಿದ್ದಾರೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ಜನರನ್ನು ಶರಣರನ್ನಾಗಿ ಮಾಡಲು, * ಬಸವ ಧರ್ಮ ಸಂಸ್ಕಾರ * ಎಂಬ ಕೃತಿಯನ್...

ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ

ಇಮೇಜ್
ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ. -ಸಚ್ಚಿದಾನಂದ ಪ್ರಭು ಚಟ್ನಳ್ಳಿ ೯೮೮೬೬೯೪೪೫೪ ವಚನ : * ತನುವಿನೊಳಗಿದ್ದು ತನುವ ಗೆದ್ದಳು,* *ಮನದೊಳಗಿದ್ದು ಮನವ ಗೆದ್ದಳು,* *ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,* *ಅಂಗಸುಖವ ತೊರೆದು ಭವವ ಗೆದ್ದಳು,* * ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.* -ಗುರು ಚನ್ನಬಸವಣ್ಣನವರು ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೋಕಿನ ಉಡುತಡಿ ಎಂಬ ಗ್ರಾಮದಲ್ಲಿ ಶರಣ ಓಂಕಾರ ಮತ್ತು ಶರಣೆ ಲಿಂಗಮ್ಮ ದಂಪತಿಗಳ ಉದರದಲ್ಲಿ ದವನದ ಹುಣ್ಣಿಮೆಯಂದು ಉಗಮಗೊಂಡ ದಿವ್ಯ ತರಂಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರು. ಅವರು ಬಸವಕಲ್ಯಾಣದ ಅನುಭಾವ ಮಂಟಪದ ಶರಣ ಸಮೂಹದೆಡೆಗೆ ಹರಿದು ಗುರು ಬಸವಣ್ಣನವರ ಭಕ್ತಿಯ ಶಕ್ತಿಯಾಗಿ ನಿಂದು ಶ್ರೀಶೈಲದ ಕದಳಿಯ ಬನದಲ್ಲಿ ಚೆನ್ನಮಲ್ಲಿಕಾಜುರ್ನದೇವರ ದೇವನೆಂಬ ಮಹಾಶರಧಿಯಲ್ಲಿ ಸಮಾಗಮಗೊಂಡರು. ಆದರೆ ಅವರು ತಾವು ನೀಡಿದ ವಚನಗಳ ಮೂಲಕ ಎಂದೆಂದಿಗೂ ನಮ್ಮಂಥ ಅಸಂಖ್ಯಾತ ಶರಣರ ಹೃನ್ಮನಗಳಲ್ಲಿ ವಾಸವಾಗಿರುತ್ತಾರೆ.  * ಗುರು  ಅಕ್ಕಮಹಾದೇವಿಯವರು, ತಮ್ಮ ವಚನಗಳಲ್ಲಿ ಹಾಗು ತಮ್ಮ ಜೀವನದ ಶೈಲಿಯಲ್ಲಿ ಅನೇಕ ವಿಶೇಷವಾದ ತತ್ತ್ವಗಳನ್ನು ಕಲಿಸುತ್ತಾರೆ. ಪ್ರಮುಖವಾಗಿ ಇವರ ವಚನಗಳಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ. 1. ಲಿಂಗದೇವನಲ್ಲಿ ಅನನ್ಯ ಶರಣಾಗತಿ. 2. ಗುರು ಬಸವ ಭಕ್ತಿ. 3....

ಯಾವುದು ಅನಧಿಕೃತ?

ಇಮೇಜ್
ಯಾವುದು ಅನಧಿಕೃತ??? ದಿನಾಂಕ 13 April 2022 ಶ್ರೇಷ್ಠ ದಾರ್ಶನಿಕ ಸಾಹಿತಿ ಪೂಜ್ಯ ಮಾತೆಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಅವರ ಶ್ರೇಷ್ಠ ಸಂಶೋಧನೆಯನ್ನು ಮತ್ತೊಬ್ಬರು ಹಿಂತೆಗೆದುಕೊಳ್ಳುವುದು ಅನಧಿಕೃತ .. ಪೂಜ್ಯ ಮಾತಾಜಿಯವರು ತಾವು ಬರೆದಿರುವ ಸಾಹಿತ್ಯವನ್ನು ಯಾರು ಕೂಡ ಬದಲಾವಣೆ ಮಾಡಬಾರದು ಎಂದು ಆದೇಶಿಸಿ ಹೋದರು ಕೂಡ ಅವರು ಲಿಂಗೈಕ್ಯ ಆದಮೇಲೆ ಬದಲಾವಣೆ ಮಾಡುತ್ತಿರುವುದು ಅನಧಿಕೃತ ... ತಮ್ಮ ತಪ್ಪು ನಿರ್ಧಾರಗಳನ್ನು ಪ್ರಶ್ನೆ ಮಾಡದೆ ಮೌನವಾಗಿ ಇರುವವರನ್ನು ಇರಿಸಿಕೊಂಡು ಪ್ರಶ್ನೆ ಮಾಡುವವರನ್ನು ಬಸವಧರ್ಮ ಪೀಠದಿಂದ ಉಚ್ಚಾಟಿಸುವುದು ಅನಧಿಕೃತ .. ಸರ್ವಾಧಿಕಾರಿಯಂತೆ ವರ್ತಿಸುತ್ತಾ ಬಸವ ಮಂಟಪಗಳಲ್ಲಿ ಲಿಂಗದೇವ  ಬಳಸಬಾರದು ಎಂದು ಸುತ್ತೋಲೆ ಹೊರಡಿಸುವುದು ಅನಧಿಕೃತ .. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ತತ್ವನಿಷ್ಠ ಲಿಂಗದೇವನ ಶರಣರನ್ನು ದೂರಮಾಡಿ ಡಾಂಬಿಕ ಭಕ್ತರನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅನಧಿಕೃತ .. ನಾನು ಹಾಕಿದ ಗೆರೆ ದಾಟುವುದಿಲ್ಲ ಎಂದು ನಿಮ್ಮ ಮೇಲೆ ನಂಬಿಕೆ ಇಟ್ಟು ಪೀಠದ ಮೇಲೆ ಕೂರಿಸಿದ ನಿಮ್ಮ ಗುರುಗಳಾದ ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆಯುತ್ತಿರುವುದು ಅನಧಿಕೃತ .. ಸಿದ್ಧವೀರ ಸಂಗಮದ

ಮೊಟ್ಟೆ ತಿಂದು ಬದುಕುವುದಕ್ಕಿಂತ ಸಾಯುವುದು ಶ್ರೇಷ್ಠ - ಮಹಾತ್ಮ ಗಾಂಧೀಜಿ

ಇಮೇಜ್
  ಮೊಟ್ಟೆ ತಿಂದು ಬದುಕುವುದಕ್ಕಿಂತ ಸಾಯುವುದು ಶ್ರೇಷ್ಠ  - ಮಹಾತ್ಮ ಗಾಂಧೀಜಿ. Sachidanand Chatnalli -9886694454 ಅಂಗದಿಚ್ಛೆಗೆ ಮದ್ಯ ಮಾಂಸವ ತಿಂಬುವರು; ಕಂಗಳಿಚ್ಛೆಗೆ ಪರವಧುವ ನೆರೆವರು; ಲಿಂಗಲಾಂಛನ ಧಾರಿಯಾದಲ್ಲಿ ಫಲವೇನು ಲಿಂಗ ಪಥವ ತಪ್ಪಿ ನಡೆವವರು? ಜಂಗಮ ಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ!  ಸಸ್ಯಾಹಾರಿ ಪದ್ಧತಿ ಅತ್ಯಂತ ಶ್ರೇಷ್ಠವಾದುದು. ಪಾಶ್ಚಿಮಾತ್ಯ ರಾಷ್ಟ್ರಗಳವರು ಇದನ್ನರಿತು ಈಗೀಗ ಹೆಚ್ಚು ಜನ ಸಸ್ಯಾಹಾರಿಗಳಾಗುತ್ತಿದ್ದಾರೆ. ಭಾರತ ದೇಶವು ಮೂಲಭೂತವಾಗಿ, ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯುಳ್ಳ ದೇಶ. ಈ ದೇಶದಲ್ಲಿ ಹುಟ್ಟಿದಷ್ಟು ಅಹಿಂಸಾವಾದಿ ಪ್ರವಾದಿಗಳು ಬೇರೆ ಯಾವ ದೇಶದಲ್ಲೂ ಹುಟ್ಟಿಲ್ಲ. ಮಹಾವೀರ, ಬುದ್ಧ, ಗುರು ಬಸವಣ್ಣನವರು ಅಹಿಂಸೆಯನ್ನು ಪ್ರತಿಪಾದಿಸಿದವರು. `ಅಂಹಿಸೊ ಪರಮೋ ಧರ್ಮ' `ದಯವೇ ಧರ್ಮದ ಮೂಲ' `ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜನು' ಎಂದು ದಿನನಿತ್ಯವೂ ಕೇಳುವವರು ನಾವು. ಇಂಥ ಸಂದರ್ಭದಲ್ಲಿ ದಿನನಿತ್ಯವೂ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗಬೇಕಾಗಿತ್ತು ಆದರೆ ವಿಪರ್ಯಾಸವೇನೆಂದರೆ ಸಸ್ಯಾಹಾರಿಗಳ ಸಂಖ್ಯೆ ದಿನ ದಿನವೂ ಕಡಿಮೆಯಾಗುತ್ತಿದೆ. ಅದರಲ್ಲೂ ಸರಕಾರವೇ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡುವ ಯೋಜನೆ  ರೂಪಿಸಿ ಮಾಂಸಹಾರಕ್ಕೆ ಪ್ರಚೋದಿಸುತ್ತಿರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಫಾರಂ ಕೋಳಿಗಳಿಗೆ ಚುಚ್ಚುಮದ್ದು ನೀಡಿ,...

Part 5 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಇಮೇಜ್
ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-5 - ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ ಗುರು ಬಸವಣ್ಣನವರು ಭಕ್ತಿಯ ಪಥದಲ್ಲಿ ಮುನ್ನಡೆಯುತ್ತ, ಬಾಲ್ಯದಲ್ಲಿಯೇ ಶಿವಭಕ್ತಿಯ ಪರಾಕಾಷ್ಠೆಯನ್ನು ತಲುಪುತ್ತಾರೆ. ವೈಚಾರಿಕವಾಗಿ ಬೆಳೆಯುತ್ತಾ ಹೋದಂತೆ ಅವರು ಶಿವನೇ ಬೇರೆ ಸಚರಾಚರ ಬ್ರಹ್ಮಾಂಡಕ್ಕೆಲ್ಲ ಒಡೆಯನಾಗಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞನಾದ ದೇವರೇ ಬೇರೆ ಎಂದು ಅರಿಯುತ್ತಾರೆ. ಆಗಲೇ ಅವರ ಹೃದಯದಲ್ಲಿ ಇಷ್ಟಲಿಂಗದ ಕಲ್ಪನೆ ಮೂಡುತ್ತದೆ. ನಿರಾಕಾರ ನಿರವಯನಾದ ಪರಮಾತ್ಮನನ್ನು ಇಷ್ಟಲಿಂಗರೂಪದಲ್ಲಿ ಸಾಕಾರ ಗೊಳಿಸಿ ಅಂತಹ ಪರಮಾತ್ಮನನ್ನು ‘ಲಿಂಗದೇವ’ ಎಂದು ಕರೆದರು.  *“ ಹೊನ್ನ ಹಾವುಗೆಯ ಮೆಟ್ಟಿದವನ! ಮಿಡಿಮುಟ್ಟಿದ ಕೆಂಜೆಡೆಯವನ!"      ಎಂದು ಶಿವನ ನಿಲವು ಮತ್ತು ಸ್ವರೂಪ ವರ್ಣನೆ ಮಾಡುವಂತಹ ಗುರು ಬಸವಣ್ಣನವರು ಬಾಲ್ಯದಲ್ಲಿ ಬರೆದ ವಚನಗಳನ್ನು ಓದಿ "ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ" “ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು” ಎನ್ನುವಂಥ ಧರ್ಮಗುರುವಾಗಿ ಗುರು ಬಸವಣ್ಣನವರು ಬರೆದ ದೇವರ ಸ್ವರೂಪದ ವಚನಗಳನ್ನು ಓದಿದಾಗ ಈ ಎರಡೂ ವಚನಗಳಲ್ಲಿರುವ ವಚನಾಂಕಿತದ ಬಗ್ಗೆ ಮನಸಸ್ಸಿನಲ್ಲಿ ಗೊಂದಲ ಏಳಲು ಆರಂಭಿಸುತ್ತದೆ. ಏಕೆಂದರೆ ಹೊನ್ನ ಹಾವುಗೆ ಮೆಟ್ಟಿದವನು, ಕರದಲ್ಲಿ ಕಪಾಲ ಹಿಡಿದವನು, ಚೋಳಂಗೆ ಹೊನ್ನ ಮಳೆ ಕರೆದವನು, ದಕ್ಷನ ಯಜ್ಞವ ಕೆಡಿಸಿದವರು ಜಗದಗಲ ಮುಗಿಲಗಲ ಮಿಗೆಯಗಲವಾಗಿರುವುದಕ್ಕೆ ಸಾಧ್ಯವೇ ಇ...

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ - ಮಡಿವಾಳ ಮಾಚಿದೇವರ ವಚನ ನಿರ್ವಚನ

ಇಮೇಜ್
  ಮಡಿವಾಳ ಮಾಚಿದೇವರ ವಚನ ನಿರ್ವಚನ ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ. ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು. ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ. ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ. ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ. ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ. - ಮಡಿವಾಳ ಮಾಚಿದೇವ ಸಮಗ್ರ ವಚನ ಸಂಪುಟ: 8   ವಚನದ ಸಂಖ್ಯೆ: 526 *ಭಾವಾರ್ಥ:* ಲಿಂಗಾಯತ ಧರ್ಮದ ಆಯತ, ಸ್ವಾಯತ, ಸನ್ನಿಹಿತ ಮತ್ತು ಪಂಚ ವಿಧಗಳಾದ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಬಸವಣ್ಣನವರಿಂದಲೇ ಕೊಡಲ್ಪಟ್ಟವೆಂಬುದನ್ನು ಮಡಿವಾಳ ಮಾಚಿದೇವರು ಸ್ಪಷ್ಟಪಡಿಸಿದ್ದಾರೆ. ಬಸವ ಪೂರ್ವದಲ್ಲಿ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಅರಿವಿಲ್ಲದ ಕುರುಹುಗಳಾಗಿ ಕೇವಲ ಸ್ಥಾವರವಾಗಿದ್ದವು. ಗುರು ಬಸವಣ್ಣನವರು, ತಮ್ಮ ಅನುಭಾವದ ಬೆಳಗಿನಿಂದ ಗುರು-ಲಿಂಗ-ಜಂಗಮಕ್ಕೆ ಹೊಸ ಭಾಷ್ಯ ಬರೆದರು. ಕೇವಲ ಕುರುಹಾಗಿದ್ದ ಶಬ್ದಗಳಿಗೆ ಅರಿವಿನ ಸಿಂಚನವನ್ನು ಮಾಡಿದರು. ಭಕ್ತನ ಕಾಯದೊಳಗೆ ಗುರು-ಲಿಂಗ-ಜಂಗಮದ ಆಯತವನ್ನು ತೋರಿ, ಲಿಂಗವನ್ನು ಅರಿವಿನ ಕುರುಹಾಗಿ ಮಾಡಿ ನೋಟದ ಭಕ್ತಿಯನ್ನು ಕೊಟ್ಟರು.  ಈ ಸತ್ಯವನ್ನು ಲಿಂಗಾಯತ ಧರ್ಮದ ಅನುಯಾಯಿಗ...

ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ

ಇಮೇಜ್
ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ . -ಸಚ್ಚಿದಾನಂದ ಪ್ರಭು ಚಟ್ನಳ್ಳಿ     9886694454 ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ನೇಯ್ಗೆ ಕಾಯಕ ಮಾಡುತ್ತಿದ್ದ ಒಬ್ಬ ಪರಮ ಶಿವಭಕ್ತ ಇವರು ವಚನಗಳನ್ನು ಬರೆದಿಲ್ಲ. ಆದರೆ ಜೇಡರ ದಾಸಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ದೇವರದಾಸಿಮಯ್ಯ ನವರ ಪತ್ನಿಯ ಹೆಸರು ದುಗ್ಗಳೆ ಮತ್ತು ಜೇಡರ ದಾಸಯ್ಯನವರ ಪತ್ನಿಯ ಹೆಸರೂ ದುಗ್ಗಳೆಯೇ ಆಗಿತ್ತು. ಇದರಿಂದಾಗಿ ಅನೇಕರಿಗೆ ಈ ವಿಚಾರದಲ್ಲಿ ದ್ವಂದ್ವವುಂಟಾಗಿದೆ.  ಜೇಡರ ದಾಸಯ್ಯ ಮತ್ತು ದುಗ್ಗಳೆಯವರು ಗುರು ಬಸವಣ್ಣನವರಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಗುರು ಬಸವಣ್ಣನರು ಹಾಗು ಅನುಭವ ಮಂಟಪದ ಶರಣರಿಂದ ಸ್ಫೂರ್ತಿಗೊಂಡು ದಂಪತಿಗಳಿಬ್ಬರೂ ವಚನಗಳನ್ನು ರಚಿಸಿದ್ದಾರೆ. ದುಗ್ಗಳೆಯವರ ಎರಡು ವಚನಗಳು ಹೀಗಿವೆ: ವಚನ: ಬಸವಣ್ಣನಿಂದ ಗುರುಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು. ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ *ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ ದಾಸಯ್ಯಪ್ರಿಯ ರಾಮನಾಥ. ವಚನ: ಭಕ್ತನಾದಡೆ ಬಸವಣ್ಣನಂತಾಗಬೇಕು. ಜಂಗಮವಾದಡೆ ಪ್ರಭುದೇವರಂತಾಗಬೇಕು. ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು. ಐಕ್ಯನಾದಡೆ ಅಜಗಣ್ಣನಂತ...

ಶರಣರೇ ಯಾವುದು ಕೆಳಮಟ್ಟದ್ದು ???

ಇಮೇಜ್
ಶರಣರೇ ಯಾವುದು ಕೆಳಮಟ್ಟದ್ದು???  ಲಿಂಗೈಕ್ಯ ಮಾತಾಜಿ ಎಷ್ಟೊ ವರ್ಷಗಳ ಕಾಲ ತಮ್ಮ ತ್ಯಾಗ ತಪಸ್ಸು ಹೋರಾಟ ಮಾಡಿ ಕಟ್ಟಿದಂತ ಬಸವಧರ್ಮ ಪೀಠವನ್ನು ಯಾರ ಕೈಗೆ ನಂಬಿಕೆ ಇಟ್ಟು ಹೋದರೋ ಅಂತವರೆ ಇವಾಗ ಆ ಮಹಾತಾಯಿಯನ್ನು *ಅಪರಾಧಿ* ಸ್ಥಾನದಲ್ಲಿ ನಿಲ್ಲಿಸಿ ಸಮಾಜದಲ್ಲಿ ಅವಮಾನ ಮಾಡಿಸಿ *ಗುರುದ್ರೋಹ* ಮಾಡಿ ತಾನು ಮೆರೆಯುತ್ತಿರುವುದು ತೀರಾ ಕೆಳಮಟ್ಟದ್ದು... ಪೂಜ್ಯ ಮಾತಾಜಿಯವರು ಬಿತ್ತಿದ್ದ ಗಟ್ಟಿ ಕಾಳುಗಳು ನಿಷ್ಠಾವಂತ ಶರಣರಿಗೆ ಲಿಂಗದೇವ ವಚನಾಂಕಿತ ಬಳಸುವುದಾದರೆ ಬಸವ ಧರ್ಮ ಪೀಠದ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದ್ದು ತೀರಾ  ಕೆಳಮಟ್ಟದ್ದು... ಪೂಜ್ಯ ಮಾತಾಜಿಯವರು ಯಾವ ಸಂಶೋಧನೆಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಂಡಿದ್ದರೋ ಅದನ್ನು ಅವರು ಬರೆದಂತಹ *ಪುಸ್ತಕಗಳಿಂದ* ತೆಗೆದು ಪೂಜ್ಯ ಮಾತಾಜಿಯವರ ಸಂಶೋಧನೆಯನ್ನು ಇತಿಹಾಸದಿಂದ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿರುವುದು ತೀರಾ ಕೆಳಮಟ್ಟದ್ದು... ಬಸವ ಧರ್ಮ ಪೀಠದ ವತಿಯಿಂದ ಆಗುತ್ತಿರುವ ಕಾರ್ಯಕ್ರಮಗಳಲ್ಲಿ ಗೇಟ್ ಮುಚ್ಚಿ ರಾಷ್ಟ್ರೀಯ ಬಸವದಳಕ್ಕೆ ಸಂಬಂಧವೇ ಇಲ್ಲದ ಹೊರಗಿನ ಅಸಂಸ್ಕಾರವಂತ ಬಾಡಿಗೆ ಜನರನ್ನು ಹಾಗೂ ಪೊಲೀಸರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿರುವುದು ತೀರಾ ಕೆಳಮಟ್ಟದ್ದು... ಜ್ಯೋತಿಯನ್ನು ತೆಗೆದುಕೊಂಡು ಗಣಮೆಳಕ್ಕೆ ಬಂದಿದ್ದ ಜಂಗಮ ಮೂರ್ತಿಗಳನ್ನು ಹಾಗೂ ಶರಣರನ್ನು *ಆತಂಕವಾದಿಗಳ* ತರಹ ವರ್ತನೆ ಮಾಡಿದ್ದು ತೀರಾ ಕೆಳಮಟ್ಟದ್ದು... ಪೂಜ್ಯ ಲಿಂಗೈಕ್ಯ ಮಾತಾಜಿಯ...

Part 4 : ಲಿಂಗದೇವ ಮತ್ತು ಕೂಡಲ ಸಂಗಮದೇವ ಒಂದು ಅಧ್ಯಯನ

ಇಮೇಜ್
ಲಿಂಗದೇವ ಮತ್ತು ಕೂಡಲ ಸಂಗಮದೇವ ಒಂದು ಅಧ್ಯಯನ ಭಾಗ-4 - ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ (9886694454) ಬಿಳಿಯ ಕರಿಕೆ , ಕಣಿಗಿಲೆಲೆಯ ,  ತೊರೆಯ ತಡಿಯ ಮಳಲ ತಂದು ,  ಗೌರಿಯ ನೋನುವ ಬನ್ನಿರೆ.  ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು  ಅನುಪಮದಾನಿ ಕೂಡಲಸಂಗಮದೇವ  ಗಂಡನಾಗಬೇಕೆಂದು ಗುರು ಬವಣ್ಣನವರು ಬಹುದೇವತೋಪಾಸನೆ ಆಚರಣೆ ಮಾಡುತ್ತಿದ್ದ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯವರ ಚಿದ್ಗರ್ಭದಲ್ಲಿ ಜನಿಸಿದ್ದರು. ಆದರೆ ಅವರಿಗೆ ಬಾಲ್ಯದಲ್ಲಿಯೇ ಬಹುದೇವತೋಪಾಸನೆ ಇಷ್ಟವಾಗಲಿಲ್ಲ. ಶಿವನ ಲೀಲೆ ಹಾಗು ಶಿವಭಕ್ತರ ಕಥೆಗಳನ್ನು ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ ಕೇಳಿದ ಮೇಲೆ ಅವರಿಗೆ ಶಿವಭಕ್ತಿ ತುಂಬಾ ಇಷ್ಟವಾಯಿತು. ಹೀಗಾಗಿ ಗುರು ಬಸವಣ್ಣನವರು ಬಾಲ್ಯದಲ್ಲಿ ಶಿವನನ್ನೇ ದೇವರೆಂದು ನಂಬಿ ಏಕ ದೇವತೋಪಾಸಕರಾದರು. ಇದಕ್ಕೆ ಕಾರಣ ಶಿವನ ಅಗಾಧವಾದ ಆಧ್ಯಾತ್ಮಿಕ ಮತ್ತು ಪವಾಡಸದೃಶ್ಯವಾದ ವ್ಯಕ್ತಿತ್ವ.  ಶಿವನು ಶಿವ ಭಕ್ತರಿಗೆ ಪರೀಕ್ಷಿಸಿ, ಕಾಡಿಸಿ, ಅಳಲಿಸಿ, ಬಳಲಿಸಿ, ನಂತರ ಆ ಭಕ್ತರನ್ನು ಮೆಚ್ಚಿಕೊಳ್ಳುವ ಕಥೆಗಳು ಗುರು ಬಸವಣ್ಣನವರಿಗೆ ತುಂಬಾ ಇಷ್ಟವಾಗಿ ಶಿವ ಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದರು. ಗುರು ಬಸವಣ್ಣನವರ ತಾಯಿ ಮಾದಲಾಂಬಿಕೆಯವರ ಮನೆದೇವರು ಅಂದಿನ ಕಪ್ಟಡಿ ಸಂಗಮ(ಇದಿನ ಕೂಡಲ ಸಂಗಮ)ದಲ್ಲಿರುವ  ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿರುವ ಶಿವನ ಸಂಕೇತವಾದ/ಸಂಗಮೇಶ್ವರ ಎಂಬ ಯೋಗ...

ಮಾಯೆಯ ಗೆದ್ದ ಮಹಾಮಹಿಮ ಗುರು ಅಲ್ಲಮಪ್ರಭುದೇವರ ವ್ಯಕ್ತಿತ್ವ ಮತ್ತು ಸಂದೇಶ

ಇಮೇಜ್
ಮಾಯೆಯ ಗೆದ್ದ ಮಹಾಮಹಿಮ  ಗುರು ಅಲ್ಲಮಪ್ರಭುದೇವರ ವ್ಯಕ್ತಿತ್ವ ಮತ್ತು ಸಂದೇಶ -   ಸಚ್ಚಿದಾನಂದ  ಪ್ರಭು ಚಟ್ನಳ್ಳಿ ಶ್ರೀ ಮದಮಲಜ್ಞಾನಭಕ್ತಿ ಪ್ರೇಮ ವೇದಪುರಾಣಶಾಸ್ತ್ರ ಸ್ತೋಮನುತನತಚಾರುಚರಣಾಂಬೋಜ ಘನ ಮಹಿಮ ನಾಮ-ರೂಪ-ಕ್ರಿಯಾಕಳಾಪವಿ ರಾಮನನುಪಮದಿವ್ಯತೇಜೋ ವ್ಯೋಮ ಮೂರುತಿ ಗುರು ಗುಹೇಶ್ವರ ಲಿಂಗ ಶರಣಾರ್ಥಿ. -ಚಾಮರಸ ಅಲ್ಲಮ ಪ್ರಭುದೇವರ ವಚನಗಳಲ್ಲಿ ಪ್ರಮುಖವಾಗಿ ಮನಸ್ಸನ್ನು ನಿಲ್ಲಿಸುವುದು ಸಲಹೆಗಳು ಹಾಗೂ ಇಷ್ಟಲಿಂಗ ಯೋಗ ಮತ್ತು ಗುರು ಬಸವ ಭಕ್ತಿಯ ಬಗ್ಗೆ ಹೇಳುತ್ತಾರೆ. ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷ ಗಂಗೆಯ ಮಿಂದಡಿಲ್ಲ. ತುಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲ. ನಿತ್ಯ ನೇಮದಿಂದ ತನುವ ಸುಟ್ಟುಕೊಂಡರಿಲ್ಲ. ನಿಚ್ಚಕ್ಕೆ ನಿಚ್ಚ ನೆನೆವ ಮನವ* *ಅಂದಂದಿಗೆ ಅತ್ತಲಿತ್ತ ಹರಿವ ಮನವ ಚಿತ್ತದಲಿ ನಿಲಿಸಬಲ್ಲಡೆ ಬಚ್ಚ ಬರಿಯ ಬಯಲು ಗುಹೇಶ್ವರ ಲಿಂಗವು ಮೊಟ್ಟ ಮೊದಲು ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಅರಿಯಬೇಕು, ಅದನ್ನರಿಯದೇ ಏನೇ ಮಾಡಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ. ಮನಸ್ಸನ್ನು ನಿಲ್ಲಿಸಲಿಕ್ಕೆ ಇಷ್ಟಲಿಂಗವೇ ಸಾಧನ. ಅನೇಕ  ಜನ್ಮಗಳ ಪುಣ್ಯದಿಂದ ಇಷ್ಟಲಿಂಗ ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತಾ ಇಷ್ಟಲಿಂಗ ಧರಿಸದೇ, ಪೂಜೆ ಮಾಡದೇ, ಯಾವುದೇ ಧ್ಯಾನ ತಪಸ್ಸುಗಳಿಂದ ಪ್ರಯೋಜನವಿಲ್ಲ ಎನ್ನುತ್ತಾರೆ. ಗುರು ಅಲ್ಲಮ ಪ್ರಭುದೇವರ ಪ್ರಕಾರ ಇಷ್ಟಲಿಂಗ ಒಂದು ಕುರುಹು ಮಾತ್ರ, ಆ ಕುರುಹಿನಿಂದ ಅರುಹ ಅರಿಯಬೇಕು...

ಇಡಿ ಬಸವ ಧರ್ಮ ಪೀಠಕ್ಕೆ ಕಳಂಕ ಮತ್ತು ತಲೆ ತಗ್ಗಿಸುವಂತಹ ಘಟನೆ

ಇಮೇಜ್
Video ವಿಡಿಯೋ ನೋಡಲು ಕ್ಲಿಕ್ ಮಾಡಿ 👇 ನಿನ್ನೆ (2nd April 2022) ಇಚಲಕರಂಜಿ ಗಣ ಮೇಳ ಕಾಯ೯ಕ್ರಮದಲ್ಲಿ ನಡೆದ ಘಟನೆ ಯ ಬಗ್ಗೆ ನನ್ನದೊಂದು ಅಭಿಪ್ರಾಯ ನಿನ್ನೆಯ ಬೆಳವಣಿಗೆ ನೊಡಿದರೆ ಇಡಿ ಬಸವ ಧರ್ಮ ಪೀಠಕ್ಕೆ ಕಳಂಕ ಮತ್ತು ತಲೆ ತಗ್ಗಿಸುವಂತಹ ಘಟನೆ ಯಾವ ಜಂಗಮ ಮೂರ್ತಿ ಗಳು ಧಮ೯ ಪ್ರಚಾರ ಮಾಡುತ್ತೇವೆ ಅಂತ ತಮ್ಮ ಸ್ವಾಭಿಮಾನ ಬದಿಗೊತ್ತಿ ಗುಡ್ಡಾಪುರದಿಂದ ದಾನಮ್ಮ ಜ್ಯೋತಿಗೆ ಅವಮಾನ ಮಾಡಿದು ಜಂಗಮ ಮೂರ್ತಿ ಗಳಿಗೆ ಅವಮಾನಿಸಿ ಹೊರ ಹಾಕಿ ದ್ದು ನಿಮ್ಮ ಕ್ರೂರ ಮನಸ್ಸಿಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದೆ ಗೊತ್ತಾಗ್ತಿಲ್ಲ ನಿಮ್ಮ ಗೆ ವೈಯಕ್ತಿಕ ವಾಗಿ ಅವರ ಮೇಲೆ ಕೋಪ ಇದ್ದರೆ ತೀರಿಸಿಕೊಳ್ಳಿ ಆದರೆ ಬಸವಾದಿ ಶರಣರ ತತ್ವ ಸಿದ್ಧಾಂತ ಕ್ಕೆ ಅಪಚಾರ ಮಾಡಿದ್ದು ತಮ್ಮ ನಿಜವಾದ ಮುಖವಾಡ ಅನಾವರಣ ಗೊಳಿಸಿದ್ದೀರಿ ನಾಚಿಕೆ ಯಾಗಬೇಕು ಲಿಂಗೈಕ್ಯ ಮಾತಾಜಿ ಇರುವಾಗ ಚನ್ನಬಸವಾನಂದ ಸ್ವಾಮಿ ಜಿಯವರಿಗೆ ಎಲ್ಲ ಭಾಷೆಯಲ್ಲೂ  ಪ್ರವಚನ ಮಾಡುವ ಶೈಲಿ ಸಂಘಟನೆ ಮಾಡುವ ಚತುರತೆ ತಮಗಿದೆ ಮಹಾರಾಷ್ಟ್ರ ರಾಜ್ಯದ ಲ್ಲಿ ನಿವೇಶನ ಖರೀದಿ ಮಾಡಿ ಸಂಘಟನೆ ಮಾಡಲಿಕ್ಕೆ ಅನುಕೂಲ ವಾಗುತ್ತದೆ ಎಂದು ಹೇಳಿ ದಾಗ ಆವರ ಆದೇಶದಂತೆ ನಡೆದುಕ್ಕೊಂಡವರು ಪ್ರತಿಯೊಂದಕ್ಕೂ ಕಿರಿಕಿರಿ ಜಗಳ ಮಾಡುವ ತನ್ನ ತಲೆ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಿಕೆ ಆಗದ ಸಂಸ್ಥೆ ಯಿಂದ ಹೊರಗೆ ಹಾಕಿಧ್ದು ಎಲ್ಲರೂ ಗೊತ್ತಿರುವ ವಿಷಯ ಆದರೆ ಈಗಿನ ಪೀಠಾಧಿಕಾರೀಗಳು ಇಂಥವರಿಗೆ ಒಳ್ಳೆಯ ರೀತಿಯಲ್ಲಿ ಸಾಕುತ್...

ಇಚಲಕರಂಜಿಯಲ್ಲಿ ನಡೆದ ಗಣಮೇಳದಲ್ಲಿ ಬಸವಕುಮಾರಸ್ವಾಮಿಗಳು (ವಿಡಿಯೋದಲ್ಲಿ) ಆಡಿದ ಮಾತುಗಳಿಗೆ ಉತ್ತರ

ಇಮೇಜ್
Date : 2nd April 2022 ಇಚಲಕರಂಜಿಯಲ್ಲಿ ನಡೆದ ಗಣಮೇಳದಲ್ಲಿ  ಬಸವಕುಮಾರಸ್ವಾಮಿಗಳು (ವಿಡಿಯೋದಲ್ಲಿ) ಆಡಿದ ಮಾತುಗಳಿಗೆ ಉತ್ತರ Video ವಿಡಿಯೊ ನೊಡಲು ಕ್ಲಿಕ್‌ ಮಾಡಿ 👇   👉 (" ಇವರೆಲ್ಲಾ ಮಾತಾಜಿ ಅವರನ್ನು ಅವಮಾನ ಮಾಡಿದ್ದಾರೆ ")   ಲಿಂಗೈಕ್ಯ ಮಾತಾಜಿಯವರನ್ನು ಅವಮಾನ ಮಾಡಿದವರು ಯಾರು? ಪೂಜ್ಯ ಮಾತಾಜಿ ಲಿಂಗೈಕ್ಯ ಆದ ಮೂರು ವರ್ಷಗಳ ನಂತರ ಅವರು ಮಾಡಿದ್ದ ವಚನಾಂಕಿತ ತಪ್ಪನ್ನು  ನಾವು ಸರಿಪಡಿಸುತ್ತಿದ್ದೇವೆ ಎಂದು ಸಮಾಜದ ದ್ರಷ್ಟಿಯಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನ ಮಾಡಿದವರು ಯಾರು??? 👉   ("ಇವರೆಲ್ಲ ಹೈಕೋರ್ಟ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ನಡೆದಿದ್ದಾರೆ") ಮೊದಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು ಏನು ನೀಡಿದೆ ಎಂಬ ಅರಿವು ಕೂಡ ನಿಮಗೆ ಇದೆಯೇ? ಇದ್ದಿದ್ದರೆ ತಾವು ಈ ರೀತಿ ಮಾತನಾಡುತ್ತಿರಲಿಲ್ಲ.  ಮೊದಲು ಕೋರ್ಟ್ ತೀರ್ಪು ಏನಿದೆ ಎಂಬುದು ಸ್ವಲ್ಪ ತಿಳಿದುಕೊಳ್ಳಿ. ಪೂಜ್ಯ ಮಾತೆಮಹಾದೇವಿಯವರು ಬರೆದಿದ್ದ ಬಸವ ವಚನ ದೀಪ್ತಿ ಎಂಬ ಒಂದು ಪುಸ್ತಕವನ್ನು ಮಾತ್ರ ಶಾಂತಿ ಕಾಪಾಡುವ ಕಾರಣ ಕೊಟ್ಟು ಮುಟ್ಟುಗೋಲು ಹಾಕಲಾಗಿತ್ತು. ಆದರೆ ಮಾತಾಜಿಯವರ ಶ್ರೇಷ್ಠ ಸಂಶೋಧನೆ ಲಿಂಗದೇವ ವಚನಾಂಕಿತವನ್ನು ಯಾವುದೇ ಕೋರ್ಟ್ ನಿಷೇಧ ಮಾಡಿಲ್ಲ ಎಂಬುದು ಸತ್ಯ.  ಹೈಕೋರ್ಟು ತೀರ್ಪು ಬಂದಿತ್ತು 2003ರಲ್ಲಿ. ಆ ತೀರ್ಪಿನ ನಂತರವೂ ಕೂಡ ಲಿಂಗೈ...

ಲೋಕಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸಂವಿಧಾನಬದ್ಧ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಪ್ರಸ್ಥಾವನೆ

ಇಮೇಜ್
  ದಿನಾಂಕ 01April 2022 ಹಾತಕ್ಣಗಂಲೆ ಲೋಕಸಬಾ ಕ್ಷೇತ್ರದ ಮಾನ್ಯ ಸಂಸದರಾದ ಧೈರ್ಯಶೀಲ ಸಂಭಾಜಿರಾವ್ ಮಾನೆ (ದಾದಾ) ಅವರು ಲೋಕಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸಂವಿಧಾನಬದ್ಧ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಶೂನ್ಯ ಅವಧಿಯಲ್ಲಿ ವಿಷಯ ಮಂಡನೆ ಮಾಡಿದರು. Video ವಿಡಿಯೊ ಕ್ಲಿಕ್ ಮಾಡಿ ವೀಕ್ಷಿಸಿ👇 🙏

Part 3 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಇಮೇಜ್
ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-3 - ಶರಣ ಸಚ್ಚಿದಾನಂದ ಪ್ರಭು  ಚಟ್ನಳ್ಳಿ . ಗುರು ಅಲ್ಲಮಪ್ರಭುದೇವರೊಡಗೂಡಿ ಗುರು ಸಿದ್ಧರಾಮೇಶ್ವರರು ಅನುಭಾವ ಮಂಟಪಕ್ಕೆ ಬಂದಾಗ ಅವರ ಎಲ್ಲಾ ದ್ವಂದ್ವಗಳು ಅನುಮಾನಗಳು ಪರಿಹಾರವಾಗಿ ಕಪಿಲಸಿದ್ಧಮಲಿಕಾರ್ಜುನಿನಿಗೂ ಒಬ್ಬ ದೇವನಿದ್ದಾನೆ ಎಂದು ಅರಿತು ತಮ್ಮ ವಚನಾಂಕಿತವನ್ನು ‘ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವ’ ಎಂದು ಬದಲಾಯಿಸಿ ಕೊಂಡರು. ಅವರು ‘ಕಪಿಲಸಿದ್ಧಮಲ್ಲಿಕಾರ್ಜುನ’ ವಚನಾಂಕಿತದೊಂದಿಗೆ ಬರೆದ ಕೊನೆಯ ಮತ್ತು ಅವರು ಶಿವ ಭಕ್ತಿಯಿಂದ ಲಿಂಗದೇವನ ಭಕ್ತಿಗೆ ಪರಿವರ್ತನೆಯ ಘಟ್ಟದ್ದಲಿ ಬರೆದ ವಚನವಿದು:  ಎಲ್ಲಾ ಪ್ರಮಥರು ಲಿಂಗವ ಧರಿಸುತ್ತಿರಲು, ನಾನೇನು ಒಲ್ಲೆನೆಂಬುದು ಕರ್ಮದ ಬಲೆಯೋ ಮಾಯದ ಬಲೆಯೋ? ಎಲೆ ಕಪಿಲಸಿದ್ಧಮಲ್ಲಿನಾಥಯ್ಯ, ನಾ ಧರಿಸಿಕೊಂಬುವೆ ಲಿಂಗವ, ನೀ ಕರೆಸಿಕೊಂಬವನಾಗು ಮತ್ತೋರ್ವನ ನಿನ್ನ ಪೂಜೆಗೆ, ನಾ ನಿನ್ನವನಲ್ಲೆಲೆ ದೇವಾ. ಈ ವಚನದ ನಂತರ ಬರೆದ ಎಲ್ಲಾ ವಚನಗಳಿಗೆ ಅವರು ‘ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವ’ ಎನ್ನುವ ವಚನಾಂಕಿತವನ್ನೇ ಬಳಸಿದ್ದಾರೆ. ಅವರು ಬರೆದ ಸ್ತೋತ್ರ ತ್ರಿವಿಧಿಯ ವಚನಗಳಿಗೆ ‘ಯೋಗಿನಾಥ’ ಎನ್ನುವ ಇನ್ನೊಂದು ವಚನಾಂಕಿತವನ್ನು ಬಳಸಿದ್ದಾರೆ. ಹೀಗೆ  ಗುರು ಸಿದ್ಧರಾಮೇಶ್ವರರು ಮೂರು ವಚನಾಂಕಿತಗಳನ್ನು ಬಳಸಿದ್ದಾರೆ. ವಚನಗಳ ಪ್ರತಿ ಮಾಡುವಾಗ ದೇವರ ದೇವ ಪದ ತಪ್ಪಿ ಹೋಗಿ ಈಗ ಪ್ರಕಟವಾಗಿರುವ ಗುರು ಸಿದ್ಧರಾಮೇಶ್ವರರ ವಚನಗಳಲ್ಲಿ...