ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು
ಶ್ರೀ ಶರಣಾಧ್ಯಕ್ಷ ಬಸವೇಶ್ವರರ ಪೋಟೊ ಇದೆಂದು ಹೇಳಲಾಗುತ್ತಿದೆ. ಕೆಳದಿಯ ರಾಣಿ ಚೆನ್ನಮ್ಮನವರ ವಂಶಸ್ಥರು ಕಟ್ಟಿಸಿದ* ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು. ಕನ್ನಡದ ಲಿಂಗಾಯತ ಸಾಧಕರೊಬ್ಬರು ಬಹಳಕಾಲದಿಂದ ಕಾಶಿಯಲ್ಲಿ ಸಾಧನೆಗೈಯುತ್ತಿದ್ದಂತ ಕಾಲದಲ್ಲಿ ಒಬ್ಬ ಶೈವ ಭಕ್ತ ಆಶ್ರಯಕ್ಕೆಂದು ಬಂದುದಲ್ಲದೇ ಮುಂದೊಂದು ದಿನ *ಕಾಶಿಪೀಠವೆಂದು* ಘೋಷಿಸಿಕೊಂಡು ಚತುರಾಚಾರ್ಯರಿದ್ದವರ ಜೊತೆ ಕೈಜೋಡಿಸಿಕೊಂಡು (ಇಂದಿನ ಪಂಚಾಚಾರ್ಯರು) ಕಾಶಿಪೀಠ ಕಬಳಿಸಿಕೊಂಡು ಪಂಚಪೀಠಗಳು ನಮ್ಮವು ಎಂದು ಘೋಷಿಸಿಕೊಂಡಿದ್ದಾರೆ. ಅದು ಕೆಳದಿ ಸಂಸ್ಥಾನದ ಆರೈಕೇಯಲ್ಲಿದ್ದವರದೆಂದು ಈಗಾಗಲೇ ಎಂ.ಎಂ.ಕಲಬುರ್ಗಿಯವರು ಸಾಕಷ್ಟು ಧಾಖಲೆ ಪುರಾವೆಗಳನ್ನ ನೀಡಿದ್ದಾರೆ. *ಜಂಗಮದಿಂದ ಸ್ಥಾವಾವರದೆಡೆಗೆ* ಮತ್ತು *ರೇವಣಸಿದ್ಧರು ಮತ್ತು...* ಎಂಬ ಮೃತ್ಯುಂಜಯ ರುಮಾಲೆಯವರ ಸಂಶೋಧನಾತ್ಮಕ ಕೃತಿಯನ್ನು ಓದಬಹುದು.