ಪೋಸ್ಟ್‌ಗಳು

ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು

ಇಮೇಜ್
 ಶ್ರೀ ಶರಣಾಧ್ಯಕ್ಷ ಬಸವೇಶ್ವರರ ಪೋಟೊ ಇದೆಂದು ಹೇಳಲಾಗುತ್ತಿದೆ. ಕೆಳದಿಯ ರಾಣಿ ಚೆನ್ನಮ್ಮನವರ ವಂಶಸ್ಥರು ಕಟ್ಟಿಸಿದ* ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ  ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು. ಕನ್ನಡದ ಲಿಂಗಾಯತ ಸಾಧಕರೊಬ್ಬರು ಬಹಳಕಾಲದಿಂದ ಕಾಶಿಯಲ್ಲಿ ಸಾಧನೆಗೈಯುತ್ತಿದ್ದಂತ ಕಾಲದಲ್ಲಿ ಒಬ್ಬ ಶೈವ ಭಕ್ತ ಆಶ್ರಯಕ್ಕೆಂದು ಬಂದುದಲ್ಲದೇ ಮುಂದೊಂದು ದಿನ *ಕಾಶಿಪೀಠವೆಂದು* ಘೋಷಿಸಿಕೊಂಡು ಚತುರಾಚಾರ್ಯರಿದ್ದವರ ಜೊತೆ ಕೈಜೋಡಿಸಿಕೊಂಡು (ಇಂದಿನ ಪಂಚಾಚಾರ್ಯರು)  ಕಾಶಿಪೀಠ ಕಬಳಿಸಿಕೊಂಡು ಪಂಚಪೀಠಗಳು ನಮ್ಮವು ಎಂದು ಘೋಷಿಸಿಕೊಂಡಿದ್ದಾರೆ.  ಅದು ಕೆಳದಿ ಸಂಸ್ಥಾನದ ಆರೈಕೇಯಲ್ಲಿದ್ದವರದೆಂದು ಈಗಾಗಲೇ ಎಂ.ಎಂ.ಕಲಬುರ್ಗಿಯವರು ಸಾಕಷ್ಟು ಧಾಖಲೆ ಪುರಾವೆಗಳನ್ನ ನೀಡಿದ್ದಾರೆ. *ಜಂಗಮದಿಂದ ಸ್ಥಾವಾವರದೆಡೆಗೆ* ಮತ್ತು *ರೇವಣಸಿದ್ಧರು ಮತ್ತು...* ಎಂಬ ಮೃತ್ಯುಂಜಯ ರುಮಾಲೆಯವರ  ಸಂಶೋಧನಾತ್ಮಕ ಕೃತಿಯನ್ನು ಓದಬಹುದು.

*ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ* ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ.

ಇಮೇಜ್
  ವೀಡಿಯೋನಲ್ಲಿ *ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ*  ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ. ಲಿಂಗಾಯತ ಧರ್ಮ ಕ್ಕಾಗಿ ಮಹಾರಾಷ್ಟ್ರದಲ್ಲಿ ಅನೇಕ ರ್ಯಾಲಿ ಗಳನ್ನೂ ಮಾಡಿ ಇತ್ತೀಚೆಗೆ ಮುಂಬೈ ರ್ಯಾಲಿ  ಮಾಡಿ ತೋರಿಸಿದ ಶರಣ ಅವಿನಾಶ್ ಭೂಸೀಕರ್ ಬಗ್ಗೆ * ಏಕವಚನದಲ್ಲಿ * ಮಾತನಾಡಿರುವುದು ಜಾಮದರ್ ಅವರಲ್ಲಿ ಮೂಡಿರುವ *ಅಹಂಕಾರ* ಎದ್ದು ಕಾಣುತ್ತಿದೆ.  ಬಸವಕಲ್ಯಾಣದಲ್ಲಿ ನಡೆದ ಲಿಂಗಾಯತ ಅಧಿವೇಶನವನ್ನೂ ಒಂದು ರಾಜಕೀಯ ಪಕ್ಷ ಕಾರ್ಯಕ್ರಮ ನಡೆಸಿದ ಟೆಂಟ್ ನಲ್ಲಿಯೇ ಮಾಡಿರುವುದರಿಂದ ರಾಜ್ಯದಂತ ಬಹಳಷ್ಟು ಜನ ತಮ್ಮ ವಿರೋಧ ವ್ಯಕ್ತಪಡಿಸಿದರು.   ಆದರೆ ತಾವು ಈ ವಿಡಿಯೋ ನಲ್ಲಿ ಕೇವಲ 3 ವ್ಯಕ್ತಿಗಳ ಹೆಸರುಗಳನ್ನು ತೆಗೆದುಕೊಂಡಿದ್ದು ನೋಡಿದರೆ, ತಾವು ಬೇರೊಬ್ಬರ  ಮಾತುಗಳಿಂದ * misguide * ಆಗಿರೋದು ಎದ್ದು ಕಾಣುತ್ತಿದೆ.   ಇಷ್ಟು ದಿನಗಳ ಕಾಲ ಜಾಮಾದಾರ್ ಅವರು ಸ್ವತಂತ್ರ ತಲೆ ಉಳ್ಳವರು ಎಂದು ಎಲ್ಲರೂ ಭಾವಿಸಿದ್ದರು ಆದರೆ ಇವರು ಈ ರೀತಿ ಮಾತುಗಳನ್ನು ಆಡಿದ ಮೇಲೆ * ಪರತಂತ್ರ ತಲೆ* ಉಳ್ಳವರು ಎಂದು ಅನೇಕರಿಗೆ ಅನಿಸುತಿದೆ.  ಒಂದು ಬೆಳೆದು ನಿಂತಿರುವ ಸಂಘಟನೆ ಯನ್ನ ಒಡೆದು ಅಲ್ಲಿನವರನ್ನು ಇಂಪೋರ್ಟ್ ಮಾಡಿಕೊಂಡು ನಿಮ್ಮ ಸಂಘಟನೆಯನ್ನು ಬೆಳೆಸೋದು ಸುಲಭದ ಕೆಲಸ. ಆದರೆ, ಒಂದು ಸಂಘಟನೆಯನ್ನು ಗ್ರೌಂಡ್ ಲೆವೆಲ್ ನಿಂದ ಕಟ್ಟಿ ಬೆಳೆಸುವುದು ಬಹಳ ಕಷ್ಟದ ಕೆಲಸ......