ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೀರ ಪಾಶಾ ದರ್ಗಾವೆ ಅನುಭವ ಮಂಟಪದ ವಿವಾದದ ನಿಜ ಸತ್ಯ

ಇಮೇಜ್
 ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಸವ ಪ್ರಕಾಶ ಸ್ವಾಮೀಜಿ. ಪೀರ ಪಾಶಾ ದರ್ಗಾ ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಮಹತ್ವದ ಮಾಹಿತಿ ಬಸವ ಕಲ್ಯಾಣದಲ್ಲಿರುವ ಪೀರ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹತ್ತಾರು ಗ್ರಂಥಗಳು ಬಂದಿವೆ. ದರ್ಗಾದಲ್ಲಿ ಅನುಭವ ಮಂಟಪವಿದೆ ಅಂತ ಯಾರು ಬರೆದಿಲ್ಲ ಎಂದು ಭಾಲ್ಕಿ ಹಿರೇಮಠದ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ. ಹೌದು ದೇಶಾಧ್ಯಂತ ಮಂದಿರ-ಮಸೀದಿಗಳ ಮಧ್ಯ ದೊಡ್ಡ ಸಂಘರ್ಷ ಶುರುವಾಗಿದೆ. ಇದೀಗ ಬಸವಕಲ್ಯಾಣದ ಪೀರ ಪಾಶಾ ದರ್ಗಾ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿರುವ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು. ಇತಿಹಾಸಕಾರರು ಸಂಶೋಧನೆ ಮಾಡಿದ್ರೆ ಮಾತ್ರ ಗೊತ್ತಾಗುತ್ತೆ. ಆದರೆ ಇದುವರೆಗೂ ಕೂಡ ಆ ದರ್ಗಾದಲ್ಲಿ ಅನುಭವ ಮಂಟಪದ ಕುರುಹಗಳಿವೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಬಸವಣ್ಣನವರು ಸ್ಥಾವರಕ್ಕೆ ಅವರು ಮಹತ್ವ ಕೊಟ್ಟಿರಲಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಅವರ ಸಿದ್ಧಾಂತ. ಈ ದೃಷ್ಟಿಯಿಂದ ನೋಡಿದ್ರೆ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ ಇರಬಹುದು. ಹಂಚಿನ ಮನೆಯೋ ಅಥವಾ ಮತ್ಯಾವುದೋ ಅನುಭವ ಮಂಟಪ ಕೂಡುವ ಒಂದು ವೇದಿಕೆ ಇರಬಹುದು. ಕಾಲಾನುಕ್ರಮದಲ್ಲಿ ಅದು...

ಇಚ್ಛಾ ಪತ್ರ

ಇಮೇಜ್
 ಇಚ್ಛಾ ಪತ್ರ ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿದ್ದ ಹಳೆಯ ಕಲ್ಯಾಣ ಕಿರಣಗಳನ್ನು ಒಂದು ಕಡೆ ಜೋಡಿಸುತ್ತ ಕೂತಿದ್ದೆ. ಆವಾಗ ಮುಖ ಪುಟ ಹರಿದುಹೋಗಿದ್ದ  ಒಂದು ಕಲ್ಯಾಣ ಕಿರಣ ನನ್ನ ಗಮನ ಸೆಳೆಯಿತು. ಅದನ್ನು ತೆಗೆದು ನೋಡಿದಾಗ ಅದು 2002 ಜೂನ ತಿಂಗಳದ್ದು. ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಮೊದಲನೆಯ ಕಲ್ಯಾಣ ಪರ್ವದ ಸಮಯದಲ್ಲಿ ಆದ ಅನುಭವಗಳನ್ನು ಲೇಖನಗಳ ಮೂಲಕ ಅದರಲ್ಲಿ ಹೇಳಿಕೊಂಡಿದ್ದಾರೆ. ನಾನು ಕೂಡ ಆ ಕಲ್ಯಾಣಪರ್ವದಲ್ಲಿ ಭಾಗವಹಿಸಿ ಪೋಲಿಸ್ ದೌರ್ಜನ್ಯವನ್ನು ನನ್ನ ಕಣ್ಣಾರೆ ನೋಡಿದ್ದೇ. ಅದರಲ್ಲಿ ಪೂಜ್ಯ ಮಾತಾಜಿಯವರು ಬರೆದ *ಇಚ್ಛಾಪತ್ರ* ಓದಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದೆ.   ಇದನ್ನು ಓದಿ ಓರ್ವ (ಅಪರಿಚಿತ) ಶರಣೆಯೊಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿದ್ರು. ಅವರು ಆಡಿದ ಮಾತುಗಳು ಈ ರೀತಿ ...  (ಅಣ್ಣವ್ರೆ, ಮಾತಾಜಿಯವರ ಈ ಇಚ್ಛಾಪತ್ರ ಓದಿ ಬಹಳ ಮನಸ್ಸಿಗೆ ನೋವಾಯ್ತು. ಆ ತಾಯಿಯ ಹೃದಯದಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಇಟ್ಟುಕೊಂಡಿದ್ದರು ಕೂಡ ಭಕ್ತರೆದುರು ಎಷ್ಟು ಸಮಾಧಾನಿಯಾಗಿ, ಹಸನ್ಮುಖಿಯಾಗಿ ಇರುತ್ತಿದ್ರು. "ನನ್ನ ನಂತರ ನನ್ನ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಾರೆ" ಎಂದು ಮಾತಾಜಿ ಹೇಳಿರುವುದನ್ನು ನೋಡಿದ್ರೆ, ನಮ್ಮ ಈಗಿನ ಪೀಠಾಧ್ಯಕ್ಷರು, ಜಂಗಮಮೂರ್ತಿಗಳು ಏಕೆ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ?  ಏಕೆ ಮಾತಾಜಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆದುಕ...

ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ...

ಇಮೇಜ್
ನಾನು ಹೊದರೆನಂತೆ, ನಮ್ಮ ಶಿಶ್ಯರುಗಳು ಅನೇಕರು ಇದ್ದಾರೆ, ಪೂಜ್ಯ ಅಪ್ಪಾಜಿಯವರ ಸಂಕಲ್ಪವನ್ನು ಹೇಗೆ ನಾವು ಒಂದೊಂದಾಗಿ ಪೂರ್ತಿ ಮಾಡುತ್ತಿದ್ದೆಯೋ ಹಾಗೆ ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ... - ಲಿಂ ಮಾತಾಜಿ. ಇಚ್ಛಾ  ಪತ್ರ ನಮ್ಮ ಗುರುಬಸವಣ್ಣನವರ 108 ಅಡಿ ಎತ್ತರದ ಭವ್ಯ ಮೂರ್ತಿ ಎಂದು ಗರ್ವದಿಂದ ಹೆಳುತ್ತೆವೆ.....ಇದರ ಹಿಂದಿನ ಸಂಕಲ್ಪ ಹಾಗು ಆ ಸಂಕಲ್ಪಕ್ಕೆ ಎದುರಾದ ಅನೆಕ‌ ತೊಂದರೆಗಳಲ್ಲಿ ಒಂದನ್ನು ಇಲ್ಲಿ ಲಿಂ ಮಾತಾಜಿಯವರು ಉಲ್ಲೆಖ ಮಾಡಿದ್ದಾರೆ... ಅಂದು ಮಾತಾಜಿಯವರು ತಮ್ಮ ದೃಡ ಸಂಕಲ್ಪದಿಂದ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡಿದ್ದರೆ.. ! ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ ಈ ಎತ್ತರದ ಖ್ಯಾತಿ ಪಡೆಯುತ್ತಿರಲಿಲ್ಲಾ. ಕೆಲವು ಮಹತ್ವಪೂರ್ಣ Pointsಗಳನ್ನು ಗಮನಿಸಿ. Point 1.  ತಮ್ಮ ದೃಢ ಸಂಕಲ್ಪದಿಂದ *ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ* ವನ್ನು ಸಮಾಜದಲ್ಲಿ ಗುರುತಿಸಿ, ಜಾಗ್ರತಿಯನ್ನು ಮುಡಿಸಿದ್ದಾರೆ. Point 2. ಅಂದು (ಗುರು ಬಸವಣ್ಣನವರ ಪುತ್ತಳಿ ನಿರ್ಮಾಣಕಿಂತ ಮೊದಲು) ಬಸವಕಲ್ಯಾಣದ ಜನರು  ಮನೆ ಮೆನೆಗೆ ಲಾರಿ (Lorry) ಯನ್ನು ಹೊಂದಿದ್ದಕ್ಕೆ famous ಆಗಿತ್ತು , ಇದನ್ನು ಬದಲಾಯಿಸಿ ಒಂದು Tourist ಸ್ಥಳವಾಗಿ ಪರಿವರ್ತಿಸಿದವರು ಲಿಂ ಮಾತಾಜಿಯವರು. Point 3:  ಅಂದು ಮಾತಾಜಿಯವರು  ಇಟ್ಟ ಹೆಜ್ಜೆ ಹಿಂತೆಯದೆ ಗುರು ಬಸವಣ್ಣನವರ ಭವ್ಯ ಮೂರ್...

ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು

ಇಮೇಜ್
ನಮ್ಮ ಭಾರತದ 🇮🇳 ನೆಲದಲ್ಲಿ _ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ _ ಮಹಿಳೆಯರ ಕೊಡುಗೆ ಬಹುಮುಖ್ಯವಾದುದು ಅದೇ ರೀತಿ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ  ಮಹಿಳೆಯರ ಕೊಡುಗೆ ಅಪಾರ. ಬಾಲ್ಯದಿಂದಲೂ ನಿತ್ಯ ಬೆಳಿಗ್ಗೆ _ಇಷ್ಟಲಿಂಗ ಯೋಗವನ್ನು ಮಾಡುತ್ತಾ ತನು-ಮನ-ಭಾವದಲ್ಲಿ  ಗುರು ಬಸವಣ್ಣನವರ ಸ್ಮರಿಸುವ  ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಶುಭಾಶಯಗಳು (10th May 2022) ಮನೆತನದ ಪವಿತ್ರ ಕಾಯಕ    ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ  ನಿತ್ಯ ತಮ್ಮನ್ನು ತೊಡಗಿಸಿಕೊಂಡು, ತನಗಿಂತ ಕಿರಿಯರಿಲ್ಲ ಎಂಬ ಧರ್ಮಗುರುವಿನ ನೆಡೆಯಂತೆ ವಿನಯವೇ ಜೀವನದ ಉಸಿರಾಗಿಕೂಂಡು, ಬಾಳಿನಲ್ಲಿ _ಸತ್ಯ, ನಿಷ್ಠೆ, ಪ್ರಾಮಾಣಿಕತೆಯೇ ನಿತ್ಯ ನಿಯಮಗಳಾಗಿ_ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದ ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು. ಸಮುದ್ರದಲ್ಲಿ ನೆರೆ-ತೊರೆಗಳು ಇರುವ ಹಾಗೆ ಸಂಸಾರದಲ್ಲಿ ಬರುವ ಸುಖ-ದು:ಖಗಳ ಬಗ್ಗೆ ಸಮಾಧಾನವಾಗಿ ಲಿಂಗಚಿತ್ತದಿಂದ ಬಗೆಹರಿಸಿ ಸದಾ ಬಸವಾದಿ ಶರಣರಾದ ಗುಡ್ಡಾಪುರದ ದಾನಮ್ಮತಾಯಿ, ದಾಸೋಹ ಮೂರ್ತಿ ನೀಲಾಂಬಿಕಾತಾಯಿ, ವೀರಮಾತೆ ಅಕ್ಕನಾಗಲಾಂಬಿಕಾತಾಯಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರು  ಜೀವನದ ಆದರ್ಶ ನೆನೆಸಿಕೊಂಡು ಸಮಾನತೆ, ಶಿಕ್ಷಣ, ದಾಸೋಹ, ಅನುಭವಗಳಿಂದ _ಧರ್ಮಗುರು ಬಸವಣ್ಣನವರ ವಚನಗಳನ್ನು_ ಪ್ರಚಾರ ಮಾಡಿದ ಮಹಾಯೋಗಿನಿ ಪೂಜ್ಯ ಶ್ರೀ ಹೇಮ...