ಪೀರ ಪಾಶಾ ದರ್ಗಾವೆ ಅನುಭವ ಮಂಟಪದ ವಿವಾದದ ನಿಜ ಸತ್ಯ
ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಸವ ಪ್ರಕಾಶ ಸ್ವಾಮೀಜಿ. ಪೀರ ಪಾಶಾ ದರ್ಗಾ ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಮಹತ್ವದ ಮಾಹಿತಿ ಬಸವ ಕಲ್ಯಾಣದಲ್ಲಿರುವ ಪೀರ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹತ್ತಾರು ಗ್ರಂಥಗಳು ಬಂದಿವೆ. ದರ್ಗಾದಲ್ಲಿ ಅನುಭವ ಮಂಟಪವಿದೆ ಅಂತ ಯಾರು ಬರೆದಿಲ್ಲ ಎಂದು ಭಾಲ್ಕಿ ಹಿರೇಮಠದ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ. ಹೌದು ದೇಶಾಧ್ಯಂತ ಮಂದಿರ-ಮಸೀದಿಗಳ ಮಧ್ಯ ದೊಡ್ಡ ಸಂಘರ್ಷ ಶುರುವಾಗಿದೆ. ಇದೀಗ ಬಸವಕಲ್ಯಾಣದ ಪೀರ ಪಾಶಾ ದರ್ಗಾ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿರುವ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು. ಇತಿಹಾಸಕಾರರು ಸಂಶೋಧನೆ ಮಾಡಿದ್ರೆ ಮಾತ್ರ ಗೊತ್ತಾಗುತ್ತೆ. ಆದರೆ ಇದುವರೆಗೂ ಕೂಡ ಆ ದರ್ಗಾದಲ್ಲಿ ಅನುಭವ ಮಂಟಪದ ಕುರುಹಗಳಿವೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಬಸವಣ್ಣನವರು ಸ್ಥಾವರಕ್ಕೆ ಅವರು ಮಹತ್ವ ಕೊಟ್ಟಿರಲಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಅವರ ಸಿದ್ಧಾಂತ. ಈ ದೃಷ್ಟಿಯಿಂದ ನೋಡಿದ್ರೆ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ ಇರಬಹುದು. ಹಂಚಿನ ಮನೆಯೋ ಅಥವಾ ಮತ್ಯಾವುದೋ ಅನುಭವ ಮಂಟಪ ಕೂಡುವ ಒಂದು ವೇದಿಕೆ ಇರಬಹುದು. ಕಾಲಾನುಕ್ರಮದಲ್ಲಿ ಅದು...