ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...
ಜಹಜಕಜಃಜ * ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ.. .* ಶರಣ ಸಚ್ಚಿದಾನಂದ ಹಲ್ಲೆ ನಡೆಯುವಾಗ ತೆದೆದ video clips ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು; ವ್ಯಕ್ತಿಯ ಸಂಶೋಧನೆಯನ್ನಲ್ಲ. ಎನ್ನುವ ಚಿಂತಕರ ಮಾತಿನಂತೆ ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡುವುದೆಂದರೆ, ಅವರೊಳಗಿನ ವಚನ ಸಾಹಿತ್ಯದ ಸಂಶೋಧನಾ ಮಹಾಜ್ಞಾನಕ್ಕೆ ಅಪಮಾನ ಮಾಡಿದಂತೆ, ಹಲ್ಲೆ ಮಾಡಿದಂತೆ ಹಲ್ಲೆಗೆ ಮುಂದಾದ ದುಷ್ಟಶಕ್ತಿಗಳ ನಡೆಯನ್ನು ವಿಚಾರವಾದಿಗಳಾದ ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಬರೆಯುವ ಒಂದೊಂದು ಲೇಖನವೂ ಮೌಲ್ಯಗಳಿಂದ ಕೂಡಿವೆ. ವಚನ ಸಾಹಿತ್ಯದ ಸತ್ಯ ಸಂಶೋಧನೆಗಳೇ ಆಗಿವೆ. ನಮ್ಮೊಳಗಿನ ತಪ್ಪನ್ನು ತಿದ್ದಿಕೊಳ್ಳಲು ವಚನ ಸಾಹಿತ್ಯ ದಿವ್ಯ ಮಾರ್ಗದರ್ಶಿಯಾಗಿವೆ. ಮಾಡಿದ ತಪ್ಪನ್ನು ವಚನ ಸಾಹಿತ್ಯದ ಸಂವಿಧಾನದ ಆಶಯದಂತೆ ತಿದ್ದಿಕೊಂಡು ಮುನ್ನೆಡೆಯಬೇಕೇ ವಿನಾ, ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ. ಗೂಬೆ ಸೂರ್ಯನನ್ನು ನಿಂದಿಸಿದಂತೆ, ಕಾಗೆ ಚಂದ್ರಮನನ್ನು ನಿಂದಿಸಿದಂತೆ, ವಚನ ಸಾಹಿತ್ಯ ಅಧ್ಯಯನವಿರಲಾರದ ಅಂದ ಅಭಿಮಾನಿಗಳು ಸಚ್ಚಿದಾನಂದವರು ಬರೆದ ಸಂಸೋಧಿತ ವಿಚಾರಗಳನ್ನು ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅವರ ಬೌದ್ಧಿಕ ದಿವಾಳಿತನವು ಎತ್ತಿ ತೋರಿಸುತ್ತದೆ. ಬಸವಾತ್ಮಜೆಯ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ, ಅವರೆಲ್ಲ ಆಶಯಗಳ ವಿರುದ್ಧವಾಗ...