ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...

ಇಮೇಜ್
ಜಹಜಕಜಃಜ * ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ.. .* ಶರಣ ಸಚ್ಚಿದಾನಂದ ಹಲ್ಲೆ ನಡೆಯುವಾಗ ತೆದೆದ video clips ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು; ವ್ಯಕ್ತಿಯ ಸಂಶೋಧನೆಯನ್ನಲ್ಲ. ಎನ್ನುವ ಚಿಂತಕರ ಮಾತಿನಂತೆ  ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡುವುದೆಂದರೆ, ಅವರೊಳಗಿನ ವಚನ ಸಾಹಿತ್ಯದ ಸಂಶೋಧನಾ ಮಹಾಜ್ಞಾನಕ್ಕೆ ಅಪಮಾನ ಮಾಡಿದಂತೆ, ಹಲ್ಲೆ ಮಾಡಿದಂತೆ ಹಲ್ಲೆಗೆ ಮುಂದಾದ ದುಷ್ಟಶಕ್ತಿಗಳ ನಡೆಯನ್ನು ವಿಚಾರವಾದಿಗಳಾದ ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಬರೆಯುವ ಒಂದೊಂದು ಲೇಖನವೂ ಮೌಲ್ಯಗಳಿಂದ ಕೂಡಿವೆ. ವಚನ ಸಾಹಿತ್ಯದ ಸತ್ಯ ಸಂಶೋಧನೆಗಳೇ ಆಗಿವೆ. ನಮ್ಮೊಳಗಿನ ತಪ್ಪನ್ನು ತಿದ್ದಿಕೊಳ್ಳಲು ವಚನ ಸಾಹಿತ್ಯ ದಿವ್ಯ ಮಾರ್ಗದರ್ಶಿಯಾಗಿವೆ. ಮಾಡಿದ ತಪ್ಪನ್ನು ವಚನ ಸಾಹಿತ್ಯದ ಸಂವಿಧಾನದ ಆಶಯದಂತೆ ತಿದ್ದಿಕೊಂಡು ಮುನ್ನೆಡೆಯಬೇಕೇ ವಿನಾ, ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ.  ಗೂಬೆ ಸೂರ್ಯನನ್ನು ನಿಂದಿಸಿದಂತೆ, ಕಾಗೆ ಚಂದ್ರಮನನ್ನು ನಿಂದಿಸಿದಂತೆ, ವಚನ ಸಾಹಿತ್ಯ ಅಧ್ಯಯನವಿರಲಾರದ ಅಂದ ಅಭಿಮಾನಿಗಳು ಸಚ್ಚಿದಾನಂದವರು ಬರೆದ ಸಂಸೋಧಿತ ವಿಚಾರಗಳನ್ನು ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅವರ  ಬೌದ್ಧಿಕ ದಿವಾಳಿತನವು ಎತ್ತಿ ತೋರಿಸುತ್ತದೆ.  ಬಸವಾತ್ಮಜೆಯ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ, ಅವರೆಲ್ಲ ಆಶಯಗಳ ವಿರುದ್ಧವಾಗ...

ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ

ಇಮೇಜ್
  ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ ಸತಿಯ ಕಂಡು ವ್ರತಿಯಾದ ಬಸವಣ್ಣ.  ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ.  ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ.  ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣ ಒಬ್ಬನೇ. ಬ್ರಹ್ಮಚರ್ಯೆ ಎನ್ನುವುದು ಬಹುದೊಡ್ಡ ಸಾಧನೆ. ಅದು ಕೇವಲ ಸಾಧನೆ ಮಾಡಿ ಬಿಡುವಂತಹುದಲ್ಲ ಇಡೀ ಜೀವಮಾನವೆಲ್ಲ ಕಾಯ್ದುಕೊಳ್ಳುವಂತಹದ್ದು. ಗುರು ಬಸವಣ್ಣನವರ ಬಗ್ಗೆ ಗುರು ಅಲ್ಲಮಪ್ರಭುದೇವರು ಹೇಳುವ ಮೇಲಿನ ವಚನದಲ್ಲಿ ವಿಶೇಷವಾದ ಅರ್ಥವಿದೆ. ಗುರು ಬಸವಣ್ಣನವರ ಕೆಲವು ವಚನಗಳನ್ನು ಗಮನಿಸಿದರೆ ಅವರು ಸಾಧಿಸಿದ ಸಾಧನೆ ಮತ್ತು ತಾವು ಮದುವೆಯಾಗಿ ಕರೆತಂದ ಶರಣೆ ನೀಲಗಂಗಮ್ಮನವರಿಗೂ ಬೋಧಿಸಿದ ಬೋಧನೆ ಅಗಾಧವಾದುದು.  ಮೊದಲಿಗೆ ಇಬ್ಬರು ಸತಿಪತಿಗಳಾಗಿ ಬದುಕಿ ನಂತರದ ದಿನಗಳಲ್ಲಿ ಇಬ್ಬರೂ ಲಿಂಗದೇವರಿಗೆ ಸತಿಯಾದರು. ಗುರು ಬಸವಣ್ಣನವರ ಈ ಕೆಳಗಿನ ವಚನ ಅವರು ಮದುವೆಯಾಗಿ ಶರಣೆ ನೀಲಗಂಗಮ್ಮನವರನ್ನು ಮನೆ ತುಂಬಿಸಿಕೊಂಡ ದಿನ ಬರೆದ ವಚನ ಎನಿಸುತ್ತದೆ. ಆ ವಚನದ ಸಾಲುಗಳು ಹೀಗಿವೆ: *ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ!* *ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ!* ಐದು ಮಾನ ಎಂದರೆ ಐದು ಸೇರು (ಧಾನ್ಯಗಳ ಅಳತೆ ಮಾಡುವ ಒಂದು ಅಳತೆಗೋಲು) ಐದು ಸೇರು ಇರುವಂತಹ ಧಾನ್ಯಗಳನ್ನು ಕುಟ್ಟಿ ಒಂದೇ ಮಾನವ ಮಾಡು - ಒಂದೇ ಸೇರು ಮಾಡು. ಎಂದರೆ ಪಂಚೇಂದ್ರೀಯಗಳೊಡನೆ ಕ...

Time will Answer - ಸಮಯ ಉತ್ತರಿಸುತ್ತದೆ

ಇಮೇಜ್
 *ಗುರು ನಿಷ್ಟೆ* *ತತ್ವ ನಿಷ್ಟೆ* *ವ್ಯಕ್ತಿ ನಿಷ್ಟೆ* *ಸಂಸ್ಥೆಯ ನಿಷ್ಟೆ* ಅವರವರ ವೈಯಕ್ತಿಕ.. ಹೆಳಿದ್ದರು ಹೆಳದೆಇದ್ದರು,  ಅವರವರ   ನಡುವಳಿಕೆಯಿಂದ, ಗೊತ್ತಾಗುತ್ತದೆ Actually ಇಲ್ಲಿ Dec 28 ನಂತರ, ಲಿಂಗಾಯತರಲ್ಲಿ ಸದ್ಯಕ್ಕೆ ನಾಲ್ಕು Group ಗಳಾಗಿ ಜನರನ್ನು/ಶರಣರನ್ನು ಗುರುತಿಸಬಹುದು. 1. ಲಿಂಗದೇವ ನಿಷ್ಟರು, ಕೊಡಲಸಂಗಮದೇವ ವಿರೊಧಿಗಳಲ್ಲದವರು Group, ವಚನ ಅಂತರಾಳವನ್ನು ಅರಿತು, ಲಿಂಗದೇವ ಮಾಡಿರುವ ಮೊಲ ಉದ್ದೇಶ ಅರೆತ‌ ಶರಣರನ್ನು ಈ Group ಗೆ ಸೇರಿಸಬಹುದು. 2. ಕೊಡಲಸಂಗದೆವ ಅಡಿಯಲ್ಲಿ ಲಿಂಗದೇವ ವಿರೋಧಿಸುವ ಒಂದು Group, ಇದರಲ್ಲಿ ವ್ಯಾಪಾರಿಗಳು, ರಾಜಕಾರಣಿಗಳು, ಇತರ ಮಠದ ಜಂಗಮರು ಹಾಗು ಲಿಂಗೈಕ್ಯ ಮಾತಾಜಿಯವರ ಸಾಧನೆ ಸಹಿಸದ ಜನರು ಈ Group ನಲ್ಲಿ ಸೆರಿಸಬಹುದು. 3. ಲಿಂಗದೇವ ಸರಿಯಾಗಿದೆ ಅಂತ ಗೊತ್ತಿದ್ದರು, ಕೊಡಲಸಂಗಮದೇವ ಮಾತ್ರ ಹೆಳುವವರ ಮೆಲೆ  ಅವಲಂಬಿತರಾಗಿರುವ ಜನರನ್ನು ಈ Group ಗೆ ಸೆರಿಸಬಹುದು, ಬೆಡದಮನಸಿನಿಂದಲು, ಗುರುದ್ರೊಹ ಸ್ವಿಕರಿ, ಅವಲಂಬಿತನವನ್ನು ಯಾವುದೆ ಕಾರಣಕ್ಕೆ ಬಿಡದ ಜನರು (ಹೆಡಿಗಳು). ತಮ್ಮ ವ್ಯವಹಾರ, ಬರುವ ಗಳಿಕೆ ಇವರಿಗೆ ಅತಿ‌ಮೊಖ್ಯವಾಗಿರುತ್ತದೆ.‌ ಇಂಥಹ ಜನರನ್ನು ಈ Group ಗೆ ಸೇರಿಸಬಹುದು, ಇದರಲ್ಲಿ ಪದಾಧಿಕಾರಿಗಳು, ಸಣ್ಣಪುಟ್ಟ ವ್ಯವಹಾರ ಮಾಡುವರು, ಪ್ರವಚನ ಮಾಡುವುದಕ್ಕೆ ಬರದೆ ಇರುವ ಜಂಗಮರು, ಇಂಥಹ ಜಂಗಮರ ಅಡಿಯಲ್ಲಿರುವ ಸಾಧಕರು, ಸಂಸ್ಥಯ ಮೆಲೆ ಅವ...