ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು

ಇಮೇಜ್
ಶರಣ ಬಂಧುಗಳಲ್ಲಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರ ಕೋರಿಕೆ ನೆನಹು ಎಂಬ ಈ ಪುಟ್ಟ ಕೃತಿಯು ಮನೆ ಮನೆಗೆ, ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟುವಂತೆ ಆಗಬೇಕು.‌ ಆದ್ದರಿಂದ ಯಾರೇ ಧನ ದಾಸೋಹಿಗಳು ನಮ್ಮಲಿಂದ ಕೊಂಡಾದರೂ ಹಂಚಲಿ, ತಾವೇ ಆದರೂ ಮುದ್ರಿಸಿ ಹಂಚಲಿ, ಇದಕ್ಕೆ ಒಪ್ಪಿಗೆ ಕೊಡುತ್ತೇವೆ. ಯಾವುದೇ ವಾಕ್ಯವನ್ನು, ಪದವನ್ನು ಬದಲಿಸಬಾರದು , ಈ ಪುಟದಲ್ಲಿ ಧನ ದಾಸೋಹಿಗಳು ತಮ್ಮ ಹೆಸರು ಮುದ್ರಿಸಿಕೊಳ್ಳಬಹುದು, ಉಚಿತ ಹಂಚಿಕೆ ಮಾಡುವಂತೆ ಇದ್ದರೆ ಮಾತ್ರ ಮುದ್ರಿಸಿಕೊಳ್ಳಬೇಕು. - ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ

Part 2 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಇಮೇಜ್
ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-೨ - ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ ವಚನಾಂಕಿತಗಳು ಇದು ಯಾರು ಬರೆದಿರುವ ವಚನ ಎಂದು ಗುರುತಿಸಲಿಕ್ಕೆ ಬರೆದ ಒಂದು ವಿಶಿಷ್ಟವಾದ ಪದವಾಗಿದೆ. ಗುರು ಬಸವಣ್ಣನವರು, ಗುರು ಸಿದ್ಧರಾಮೇಶ್ವರರು ಮತ್ತು ಗುರು ಅಕ್ಕಮಹಾದೇವಿಯವರು ಶಿವ ಭಕ್ತಿಯ ಮನೆತನದಲ್ಲಿ ಹುಟ್ಟಿ, ಬಾಲ್ಯದಲ್ಲಿ ಶಿವಭಕ್ತಿಯನ್ನೇ ಮೈಗೂಡಿಸಿಕೊಂಡು, ಬಾಲ್ಯದಲ್ಲಿಯೇ ವಚನಗಳನ್ನು ಬರೆಯಲು ಆರಂಭಿಸಿದರು. ಈ ಮೂವರು ಬಾಲ್ಯದಲ್ಲಿ ಶಿವನ ಸಂಕೇತವಾದ/ ಶಿವ ಪರಂಪರೆಯ ಗ್ರಹಸ್ಥ/ವಿರಕ್ತ ಜಂಗಮರ ಸಂಕೇತವಾದ ಸ್ಥಾವರ ಲಿಂಗದ ಹೆಸರಿನ ವಚನಾಂಕಿತವನ್ನಿಟ್ಟುಕೊಂಡು ವಚನಗಳನ್ನು ಬರೆದರು.  ಗುರು ಬಸವಣ್ಣನವರು ಕೂಡಲ ಸಂಗಮದೇವಾ ಎನ್ನುವ ವಚನಾಂಕಿತದೊಂದಿಗೆ ಬಾಲ್ಯದಲ್ಲಿ  ವಚನಗಳನ್ನು ಬರೆದರು. ‘ಕೂಡಲಸಂಗಮದೇವ’ ಇಂದಿನ ಕೂಡಲ ಸಂಗಮದ ಸಂಗಮೇಶ್ವರ ದೇವಸ್ಥಾನದಲಿರುವ ಸಂಗಮೇಶ್ವರ ಸ್ಥಾವರ ಲಿಂಗದ ಹೆಸರು. ಸಂಗಮೇಶ್ವರ ಎನ್ನುವ ಹೆಸರಿನ  ಶಿವ ಪರಂಪರೆಯ ಒಬ್ಬ ಯೋಗಿ/ಮಹಾತ್ಮ/ಒಬ್ಬ ವಿರಕ್ತ ಜಂಗಮ ಆ ಭಾಗದಲ್ಲಿ ಒಂದಾನೊಂದು ಕಾಲದಲ್ಲಿ ತಪಸ್ಸು ಮಾಡಿ, ಶಿವ ತತ್ವ ಬೋಧೆ ಮಾಡುತ್ತ ಗುರುವಾಗಿ ಪ್ರಸಿದ್ಧಿ ಪಡೆದವರು. ಅವರ ಲಿಂಗೈಕ್ಯರಾದ ನಂತರ ಅವರ ಸಮಾಧಿಯ ಮೇಲೆ ಒಂದು ಸ್ಥಾವರ ಲಿಂಗವನ್ನು ಸ್ಥಾಪಿಸಿ ಅದಕ್ಕೆ ಸಂಗಮೇಶ್ವರ ಲಿಂಗ ಎಂದು ಹೆಸರಿಟ್ಟು ಅಲ್ಲೊಂದು ದೇವಸ್ಥಾನವನ್ನು ಕಟ್ಟಿದರು. ಅದುವೇ ಇಂದಿನ ಸಂಗಮೇಶ್ವರ ದೇವಸ್ಥಾನ. ...

Part 1 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಇಮೇಜ್
 * ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-೧* - ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ * ಲಿಂಗದೇವ ಪದವನ್ನು ವಚನಾಂಕಿತವಾಗಿ ಅಳವಡಿಸಿ, 25 ವರ್ಷಗಳೇ ಕಳೆದುಹೋಗಿವೆ. ಒಂದು ತಲೆಮಾರಿನ ಜನಾಂಗ ಲಿಂಗದೇವ ವಚನಾಂಕಿತವನ್ನು ಒಪ್ಪಿಕೊಂಡು ಅಪ್ಪಿಕೊಂಡು ತಮ್ಮ ಹೃನ್ಮನಗಳಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಇದನ್ನು ಯಾರಿಂದಲೂ ಅಳಿಸಿಹಾಕಲು ಸಾಧ್ಯವಿಲ್ಲ. ಏಕೆಂದರೆ ಮುಂಬರುವ ಎಲ್ಲಾ ಜನಾಂಗ ಲಿಂಗದೇವ ವಚನಾಂಕಿತವನ್ನೇ ಅಳವಡಿಕೊಳ್ಳುತ್ತದೆ.*  ಲಿಂ. ಪೂಜ್ಯ ಶ್ರೀ ಮಾತಾಜಿಯವರು ಬಸವ ವಚನ ದೀಪ್ತಿ ಪುಸ್ತಕ ಪ್ರಕಟ ಮಾಡಿದಾಗ, ಅನೇಕರು ಲಿಂಗದೇವ ಎಂದು ತಮ್ಮ ಗುರು ಲಿಂಗಾನಂದರ ಹೆಸರಿನಿಂದ ವಚನಾಂಕಿತ ಬರೆದಿದ್ದಾರೆ ಎಂದು ಹುಯಿಲೆಬ್ಬಿಸಿದರು. ಯಾರೊಬ್ಬರೂ ಮಾತಾಜಿಯವರು ಸಂಪಾದಿಸಿದ ಬಸವ ವಚನ ದೀಪ್ತಿ ಪುಸ್ತಕದ ಮುನ್ನುಡಿ ಓದದೆ ಪ್ರತಿಭಟನೆ ಮಾಡಿ, ಕರ್ನಾಟಕ ಸರಕಾರದಿಂದ ಪುಸ್ತಕ ಮುಟ್ಟುಗೋಲಾಗುವಂತೆ ಮಾಡಿದರು. ಕರ್ನಾಟಕ ಉಚ್ಛ ನ್ಯಾಯಲಯ ಮತ್ತು ಭಾರತದ ಸರ್ವೋಚ್ಛ ನ್ಯಾಯಲಯಗಳು ಕರ್ನಾಟ ಸರಕಾರದ ಮುಟ್ಟುಗೋಲನ್ನು ಎತ್ತಿಹಿಡಿಯುವಂತೆ ಮಾಡಿದರು. ಆದರೆ ಧಾರ್ಮಿಕ ಹಾಗು ಆಧ್ಯಾತ್ಮಿಕ ವಿಚಾರಗಳು ಲೋಕ ಲೌಕಿಕದ ಕಾನೂನಿನ ಕಟ್ಟಳೆಗಳಿಗೆ ಒಳಪಡುವುದಿಲ್ಲ.  * ಉದಾಹರಣೆಗೆ ಹೇಳುವುದಾದರೆ ಲಿಂಗಾಯತ ಧರ್ಮದ ಅನುಯಾಯಿಗಳು ತಮ್ಮ ಇಹಲೋಕದ ಕರ್ತವ್ಯಗಳನ್ನು ಮುಗಿಸಿದಮೇಲೆ,  ಇಷ್ಟಲಿಂಗ ಯೋಗ ಸಾಧನೆ ಮಾಡಿ ಇಚ್ಛಾಮರಣಿಗಳಾಗಲಿಕ್ಕೆ ಅವಕಾಶವ...

ರಾಷ್ಟ್ರೀಯ ಬಸವ ದಳದ ಮೇಲೆ ನಿರೀಕ್ಷೆ

ಇಮೇಜ್
 *ರಾಷ್ಟ್ರೀಯ ಬಸವ ದಳದ ಮೇಲೆ ನಿರೀಕ್ಷೆ...* ಸಮಾಜದಲ್ಲಿ ಅನೇಕ ಬಸವಪರ ಸಂಘಟನೆಗಳು ಇದ್ದರೂ ಕೂಡ, ಬಸವ ತತ್ವಕ್ಕೆ ಚ್ಯುತಿ ಬಂದಾಗ, ಹಾಗೂ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಮಾಡಲು ರಾಷ್ಟ್ರೀಯ ಬಸವ ದಳದ ಮೇಲೆಯೇ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದು ಏಕೆ??? ಎಂಬುದನ್ನು ನಾವು ವಿಚಾರ ಮಾಡಬೇಕು. ಇದರ ಅರ್ಥ ರಾಷ್ಟ್ರೀಯ ಬಸವ ದಳವು ಒಂದು * ಬಲಿಷ್ಠ ಸಂಘಟನೆ* ಯಾಗಿದೆ. ಹಾಗಾದರೆ, ಲಿಂಗದೇವ ವಚನಾಂಕಿತ ಪ್ರತಿಷ್ಠಾಪನೆ ಮಾಡಿದ ನಂತರ ಸಂಘಟನೆಯು ದುರ್ಬಲವಾಗಿತ್ತು ಎಂಬ ಕೆಲವರ ವಾದವು ಸುಳ್ಳು ಎಂದು ಸಾಬೀತಾಗುತ್ತೆ. ಹಾಗಾದರೆ, 23 ವರ್ಷಗಳ ಕಾಲ ಲಿಂಗದೇವ ವಚನಾಂಕಿತವನ್ನು ಬಳಸಿಯೂ ಕೂಡ ಪೂಜ್ಯ ಮಾತಾಜಿ (ಮಾತೆಮಹಾದೇವಿ)ಯವರಿಗೆ ಇಂಥ ಬಲಿಷ್ಠ ಸಂಘಟನೆ ಕಟ್ಟಲು ಹೇಗೆ ಸಾಧ್ಯವಾಯಿತು??? ಏಕೆಂದರೆ ಪೂಜ್ಯ ಮಾತಾಜಿಯವರು ಧರ್ಮಗುರುವಿನ ಭಕ್ತಿಯ ಜೊತೆಗೆ  ರಾಷ್ಟ್ರೀಯ ಬಸವದಳವನ್ನು ಕಟ್ಟಿದ್ದು * ಲಿಂಗದೇವ ನಿಷ್ಠೆ * (ಏಕದೇವೋಪಾಸನೆ) ಎಂಬ ಭದ್ರ ಬುನಾದಿಯ ಮೇಲೆ...  ಇಂತಹ * ಲಿಂಗದೇವ ನಿಷ್ಠೆ * ಯನ್ನು ಲಕ್ಷಾಂತರ ಶರಣರ ಹೃದಯಗಳಲ್ಲಿ ಮಾತಾಜಿಯವರು ಪ್ರತಿಷ್ಠಾಪನೆ ಮಾಡಿದ್ದು * ಲಿಂಗದೇವ ವಚನಾಂಕಿತ * ಎಂಬ ಸಂಶೋಧನೆಯ ಮೂಲಕವೇ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು... ಇದರಿಂದ ಅರ್ಥವಾಗುತ್ತದೆ ಪೂಜ್ಯ ಮಾತಾಜಿಯವರ (ಗುರು ಬಸವಣ್ಣನವರಿಂದ ಪ್ರೇರಿತ) ಈ ಸಂಶೋಧನೆಯು ಎಷ್ಟು ಮಹತ್ವದ್ದು... ಅದಕ್ಕಾಗಿ ಪೂಜ್ಯ ಮಾತಾಜಿ...

ಆಚರಣೆಯಲ್ಲಿ ವಿರಕ್ತ ಪೀಠಗಳ ರಾಣಿ ಜೇನಿನಂತಿದ್ದ ಬಸವ ಧರ್ಮ ಪೀಠದ ಮಾರ್ಗ ಯಾವುದು?

ಇಮೇಜ್
 ಓಂ  ಶ್ರೀ ಗುರು ಬಸವ ಲಿಂಗಾಯ ನಮಃ 1.ಬಸವ ಧರ್ಮದ ದಿಕ್ಸೂಚಿ ಎಂದೇ ಹೆಸರಾದ ಬಸವ ಧರ್ಮ ಪೀಠ ಎತ್ತ ಸಾಗುತ್ತಿದೆ?  2. ಆಚರಣೆಯಲ್ಲಿ ವಿರಕ್ತ ಪೀಠಗಳ ರಾಣಿ ಜೇನಿನಂತಿದ್ದ ಬಸವ ಧರ್ಮ ಪೀಠದ ಮಾರ್ಗ ಯಾವುದು?  3. ಆರು ದಶಕಗಳ ಪಯಣದಲ್ಲಿ ಬರೀ ಯಶಸ್ಸನ್ನೇ ಕಂಡ ಧರ್ಮ ಪೀಠದ ಮುಂದಿನ ಸಂಕಲ್ಪದ ಗುಟ್ಟೇನು?  4. ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಕ್ಷೇತ್ರಗಳ ಕ್ರಾಂತಿಕಾರಿಣಿಯೆಂದೇ ಹೆಸರಾದ ಪರಮ ಪೂಜ್ಯ ಲಿಂಗೈಕ್ಯ ಮಾತಾಜಿಯವರ ಸಂಕಲ್ಪಗಳಿಗೆ ಬಸವ ಧರ್ಮ ಪೀಠದಲ್ಲಿ ನೆಲೆಯಿದೆಯೇ?  5. ಇರುವುದೆಂದಾದರೆ ಶರಣ ಮೇಲಕ್ಕೆಂದು ಬಂದ ಶರಣರನ್ನು ಮಹಾದ್ವಾರದಿಂದ ಪೊಲೀಸ್ ಪಡೆಯ ಮುಖೇನ ಹಿಂದಕ್ಕೆ ಕಳುಹಿಸಿದ್ದೇಕೆ?. ಉಳವಿ ಕಾರ್ಯಕ್ರಮಕ್ಕೆ ಬಂದಂತಹ ಶರಣರನ್ನು ಬಹಿರಂಗವಾಗಿ ವೇದಿಕೆಯಿಂದಲೇ ಖಂಡನೀಯವಾಗಿ ಕೂಗಾಡಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆಯ ಸಮಯದಲ್ಲಿ ಹೊರ ಹಾಕಿದ್ದೇಕೆ?  6. ಶರಣ ಮೇಳದ ಗೋಪ್ಯ ವೇದಿಕೆಯಲ್ಲಿ ಜಗದ್ಗುರುವೆನಿಸಿಕೊಂಡವರು ಒಬ್ಬ ನಿಷ್ಠಾವಂತ ಶರಣೆಯ ಮೇಲೆ ಹುಚ್ಚರಂತೆ ಕೂಗಾಡಿದ್ದೇಕೆ?  7. ಪರಮ ಪೂಜ್ಯರು ನಡೆದು ಬಂದ ದಾರಿಯಲ್ಲಿ ಅವರ ಹೆಜ್ಜೆ ಗುರುತುಗಳಲ್ಲಿ ಒಂದೆಜ್ಜೆಯೂ ಕಾಣುತ್ತಿಲ್ಲವೇಕೆ?   ಉದಾ :1:ಪ್ರವಚನಗಳು              ಎಲ್ಲೂ ನಡೆಯುತ್ತಿಲ್ಲ              ...

ಸದ್ಗುರು ಲಿಂಗಾನಂದರು ಮತ್ತು ಡಾll ಮಾತಾಜಿಯವರಿಂದ ೧೯೮೯ರಲ್ಲಿ

ಇಮೇಜ್
 ಸದ್ಗುರು ಲಿಂಗಾನಂದರು ಮತ್ತು  ಡಾll ಮಾತಾಜಿಯವರಿಂದ ೧೯೮೯ರಲ್ಲಿ ಬಾಗಲಕೋಟೆ ರಾಷ್ಟ್ರೀಯ ಬಸವದಳ  ಉದ್ಘಾಟನೆ ಆದಾಗ ಆಗ ನನಗೆ ೧೧ ವರ್ಷ ಆದ್ರೆ ಸದ್ಗುರು ಲಿಂಗಾನಂದ ಅಪ್ಪಗಳ ಪ್ರವಚನದಲ್ಲಿ ೮ ವರ್ಷದವನಿದ್ದೆ. ಅವಾಗ್ಗೆ ನನ್ನ ತಂದೆ ತಾಯಿಗಿಂತಲು ಮುಂಚೆನೇ ಲಿಂಗಧಿಕ್ಷೆ ಕೊಡಿಸಿದ್ದರು ಸದ್ಗುರು ಲಿಂಗಾನಂದ ಅಪ್ಪಗಳಿಂದ. ಇದಕ್ಕೆಲ್ಲ ಮೂಲ ನನ್ನ ★ತಾಯಿ★ - ಗಣಪತಿ ಬಿರಾದಾರ ರಾ ಬ ದಳ ಬೀದರ್

ವಚನಗಳನ್ನು ಓದೋಣ! ಕೊರಾನಾಗಿಂತ ಕ್ರೂರಿಗಳನ್ನು‌ ಸೋಲಿಸೋಣ!!

ಇಮೇಜ್
 ||ಓಂ ಶ್ರೀ ಗುರು ಬಸವ ಲಿಂಗಾಯನಮಃ||                  866666 ವಚನಗಳನ್ನು ಓದೋಣ! ಕೊರಾನಾಗಿಂತ ಕ್ರೂರಿಗಳನ್ನು‌ ಸೋಲಿಸೋಣ!! ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ, ಕೋಲಶಾಂತಯ್ಯ, ಮಾದಾರ ಧೂಳಯ್ಯ, ಮಿಂಡಮಲ್ಲಿನಾಥ, ಚೆನ್ನಬಸವಣ್ಣ, ಚೇರಮರಾಯ, ತೆಲುಗ ಜೊಮ್ಮಣ್ಣ, ಕಿನ್ನರಯ್ಯ, ಹಲಾಯುಧ, ದಾಸಿಮಯ್ಯ, ಭಂಡಾರಿ, ಬಸವರಾಜ ಮುಖ್ಯವಾದ ಚೆನ್ನಮಲ್ಲಿಕಾರ್ಜುನದೇವರ ದೇವನ ಶರಣರಿಗೆ ನಮೋ ನಮೋ ಎಂಬೆನು. ಅಂದು ಮಂಟಪದ ಹೆಜ್ಜೇನು ಗಂಟೇರು ಕೆಡಿಸಿದಾಗ ಕಂಟಕವಿಲ್ಲದೆ ಜೇನು ಹುಳುವಿಂತೆ ಶರಣ ದುಂಬಿಗಳು ಭವದೊಳಗೆ ಹಾರ್ಹಾರಿ ಹೊಸ ಮತದ ಹುಟ್ಟನ್ನು ಕಟ್ಟಿ ಸವೆಯದೆ ಇರುವ ಸವಿ ಜೇನಾಗಿ ವಚನ ಜೇನನ್ನು ಕೊಟ್ಟಿದ್ದಾರೆ.  ಕರೆದು ಆಶೀರ್ವಾದಿಸಿ ಹರಸಿ ಒಪ್ಪಿಸಿ, ವರ ಚೆನ್ನಬಸವ ಶರಣರಿಗೆ ಕಂಟಕವು ಹುರಿಯಾಳು ಕಾಯೋ ಹೊಸ ಮತವ ಎಂದು ಗುರು ಚೆನ್ನಬಸವಣ್ಣನವರಿಗೆ ಗುರು ಬಸವಣ್ಣನವರು ಜವಾಬ್ದಾರಿ ಕೊಟ್ಟು, ಭರವಸೆ ಇಟ್ಟು ಕಲ್ಯಾಣ ಬಿಟ್ಟು ಹೋಗಿದ್ದರು.  ಹಾಗೆಯೇ ಪೂಜ್ಯ ಶ್ರೀ ಮಾತೆ ಮಹಾದೇವಿ ಮಾತಾಜಿಯವರು ಕೂಡ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾರೆ ಜವಾಬ್ದಾರಿ ಕೊಟ್ಟಿದ್ದಾರೆ, ಭರವಸೆ ಇಟ್ಟಿದ್ದಾರೆ. ಇನ್ನೇನು ಕೊರೊನಾ ಹೋಯಿತು ನಾವೆಲ್ಲ ಸಂತೋಷದಿಂದ ಸಾಮೂಹಿಕ ಪ್ರಾರ್ಥನೆ ಮಾಡುತ್ತ ಅನುಭಾವ ಗೋಷ್ಟಿಗಳನ್ನು ಮಾಡುತ್ತ ಶರಣರ ಸಂಗದಲ್ಲಿ ನಲಿಯೋಣ ಎನ್ನುವಷ್ಟರಲ್ಲಿ, ಕೆಲವು ದುಷ್ಟ ಶಕ್ತಿಗಳು ...

ಬಸವ ಕಲ್ಯಾಣ ಹೊರವಲಯದಲ್ಲಿ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯ

ಇಮೇಜ್
ಬಸವ ಕಲ್ಯಾಣ ಹೊರವಲಯದಲ್ಲಿ,ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡುತ್ತಿರುವ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯವಿದೆಯಂದು  ಜಿಲ್ಲಾಧಿಕಾರಿ ಗೊವಿಂದ ರೆಡ್ಡಿ ಹೆಳಿಕೆ. 12 ಎಕ್ಕರೆ ಜಮಿನು ದೆಣಿಗೆ, ಭಾಲ್ಕಿ ಮಠದಿಂದ. 31 ಎಕ್ಕರೆ ಜಮಿನು ಖಾಸಗಿ 33 ಎಕ್ಕರೆ ಜಮಿನು ಸರ್ಕಾರದಿಂದ ಲಬ್ಯವಿದೆ ನೊತನ ಅನುಭವ ಮಂಟಪದ ನಿರ್ಮಾಣಕ್ಕಾಗಿ ಜಮಿನಿನ ಕುರಿತು ಯಾವುದೆ ಸಮಸ್ಯೆ ಇಲ್ಲಾ

ಸದ್ಗುರು ಜಗ್ಗಿ ವಾಸುದೇವ ಅವರಿಂದ ವಿಶ್ವ ಗುರು ಬಸವಣ್ಣನವರ ಪ್ರತಿಮೆಗೆ ನಮನ - ಲಂಡನನಲ್ಲಿ

ಇಮೇಜ್
  ಸದ್ಗುರು ಜಗ್ಗಿ ವಾಸುದೇವ ಅವರಿಂದ ವಿಶ್ವ ಗುರು ಬಸವಣ್ಣನವರ ಪ್ರತಿಮೆಗೆ ನಮನ - ಲಂಡನನಲ್ಲಿ

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ

ಇಮೇಜ್
 * ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ .!!* ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಲಿಂ. ಮಾತಾಜಿ ಯವರು ಹೇಳಿರಬಹುದು. ಕೂಡಲ ಸಂಗಮದೇವಾ ಹೇಳುವವರಿಗೆ ಆತ್ಮೀಯವಾಗಿ ಕಾಣಬೇಕು ಇಂಬಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆಯೇ ಹೊರತು ಲಿಂಗದೇವ ವಚನಾಂಕಿತ ಹೇಳುವವರನ್ನು ಮಠದಿಂದ ಹೊರ ಹಾಕಿ ಎನ್ನುವ ನಿರ್ಧಾರ ತೆಗೆದುಕೊಳ್ಳಿ ಅಂತ ಹೇಳಿದ್ದಾರಾ?  * ರಾಷ್ಟ್ರೀಯ ಬಸವದಳಗಳು ಕಷ್ಟ ಪಟ್ಟು ಕಟ್ಟಿರುವ ಬಸವ ಮಂಟಪಗಳಲ್ಲಿ ಲಿಂಗದೇವ ಹೇಳಬೇಡಿ ಅಂತ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಹೇಳಿದ್ದಾರಾ?*  ಹೊಸದಾಗಿ ಸಂಘಟನೆ ಮಾಡುವಾಗ ಕೂಡಲ ಸಂಗಮದೇವಾ ಬಳಸಿ ಎಂದು ಹೇಳಿರಬಹುದೇ ಹೊರತು ಈಗಾಗಲೇ ಲಿಂಗದೇವ ನಿಷ್ಠೆ ಗಟ್ಟಿಗೊಂಡು ರಾಷ್ಟ್ರೀಯ ಬಸವದಳ ಇರುವ ಊರುಗಳಲ್ಲೇ ಹೊಸ ರಾಷ್ಟ್ರೀಯ ಬಸವ ದಳ ಉದ್ಘಾಟನೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರಾ?   * ಬೇರೆಯವರ ಮಠಕ್ಕೆ ನಾವು ಹೋದರೂ ಕೂಡಲ ಸಂಗಮದೇವ  ಹೇಳಲು ಹೇಳುತ್ತಾರೆ. ಸಂತೋಷದಿಂದಲೇ ಹೇಳಿದ್ದೇವೆ. ಅವರು ನಮ್ಮ ಮಠಕ್ಕೆ ಬಂದಾಗಲೂ ಕೂಡಲ ಸಂಗಮದೇವ ಎಂದೇ ಹೇಳುತ್ತಾರೆ. ಅವರನ್ನು ಆತ್ಮೀಯತೆಯಿಂದ ಕಂಡಿದ್ದೇವೆ. ರಾಷ್ಟ್ರೀಯ ಬಸವದಳದ ಸದಸ್ಯರಲ್ಲದವರಿಗೇ ಲಿಂಗದೇವ ಎಂದೇ ಹೇಳಬೇಕು ಎಂದು ಎಂದಾದರೂ ಒತ್ತಡ ಹೇರಿದ್ದೀವಾ? ಲಿಂಗದೇವನ ಹಿಂದೆ ಗಟ್ಟಿಯಾಗಿ ನಿಂತು ಕೂಡಲ ಸಂಗಮದೇವನನ್ನು ಇಂಬಿಟ್ಟುಕೊಳ್ಳಲಿಕ್ಕೆ ಆಗುವುದಿಲ್ಲವೇ..?* ನೀವು ಲಿಂಗದೇವ ಹೇಳುವುದನ್ನು ಬಿಟ್ಟರೆ ಮಾತ್ರ...

ವಚನಗಳಲ್ಲಿ ಭಗವದ್ಗೀತೆ ನಿರಾಕರಣೆ

ಇಮೇಜ್
 *ವಚನಗಳಲ್ಲಿ ಭಗವದ್ಗೀತೆ ನಿರಾಕರಣೆ* ________________________________________ ನಮ್ಮ ಶರಣರು ಯಾವುದೆ ವಿಷಯವನ್ನು ಅಷ್ಟೊಂದು ಸುಲಭವಾಗಿ ಒಪ್ಪುತ್ತಿರಲಿಲ್ಲ. ಆ ವಿಷಯಗಳನ್ನು ತಮ್ಮ ಅರಿವೆಂಬ ಒರೆಗಲ್ಲಿಗೆ ಹಚ್ಚಿ ನಂತರ ಒಪ್ಪುತ್ತಿದ್ದರು. ಇದರಂತೆ ಒಪ್ಪದೆ ಇರುವ ಅನೇಕ ವಿಷಯಗಳು ಇವೆ, ಈ ವೇದ ಶಾಸ್ತ್ರ ಪುರಾಣ ಆಗಮ ತರ್ಕ ಇತ್ಯಾದಿ. ಅವೆಲ್ಲವುಗಳಲ್ಲಿ ಈ ಭಗವದ್ಗೀತೆಯೂ ಸಹ ಒಂದು, ಈ ಭಗವದ್ಗೀತೆಯನ್ನ ಅಭ್ಯಾಸಿಸಿದ ಶರಣರು ಈ ಗೀತೆಯು ಮನುಷ್ಯ ಮನುಷ್ಯರಲ್ಲಿ ಒಡಕನ್ನು ಉಂಟು ಮಾಡುತ್ತದೆ, ಪ್ರೀತಿ ಸಮತೆಯನ್ನ ಬೆಸೆಯುವುದಿಲ್ಲ, ಇದೆಲ್ಲ ಜಾತಿ ಧ್ವೇಷ ಅಸಮಾನತೆಯಿಂದ ಕೂಡಿದೆಯೆಂದು ಅದನ್ನು ತಳ್ಳಿ ಹಾಕಿದ್ದಾರೆ. ಆ ರೀತಿ ತಳ್ಳಿ ಹಾಕಿದ್ದಾರೆ ಎನ್ನುವುದಕ್ಕೆ ಬಸವಣ್ಣನವರ ವಚನಗಳೆ ನಮಗಿಲ್ಲಿ ಸಾಕ್ಷಿಪ್ರಜ್ಞೆಯಾಗಿವೆ.  *ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು, ಜಂಗಮಕ್ಕೆ ಸವೆಸುವಾತ ಆತ ಜಾಣನು, ಆತ ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು* ಭಗವದ್ಗೀತೆಯ ತಿಳಿದುಕೊಂಡವನು ಜ್ಞಾನಿ ಅಲ್ಲ, ಆ ಭಗವದ್ಗೀತೆಯ ಬಗ್ಗೆ ಮಾತನಾಡುವವನೂ ಕೂಡ ಜ್ಞಾನಿಯಲ್ಲ. ಜ್ಞಾನಿಯು ಜ್ಞಾನಿಯು, ಆತನೆ ಜ್ಞಾನಿಯು ತನ್ನೊಳಗೆ ತನ್ನನ್ನೆ ಗುರುತಿಸಿಕೊಂಡು ತನ್ನಲ್ಲಿ ಆತ್ಮವಿಶ್ವಾಸವಿಟ್ಟವನೆ ನಿಜವಾದ ಜ್ಞಾನಿಯು, ಜಂಗಮಕ್ಕೆ ಅಂದರೆ ಸಮಾಜಕ್ಕೆ ಹಸಿದ ಜೀವಕ...

ಮಹಾದಂಡನಾಯಕರ ಸ್ಮರಣೋತ್ಸವ"ಕಾರ್ಯಕ್ರಮವನ್ನು ಚಾರಿತ್ರಿಕವಾಗಿ ಐತಿಹಾಸಿಕವಾಗಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವ ಬೃಹತ್ತ ಕಾರ್ಯಕ್ರಮದ Video Clips links ಹಾಗು Newsapaper cutout

ಇಮೇಜ್
Date : 20th March 2022 Place : ಬೆಳಗಾವಿ, ಕರ್ನಾಟಕ. "ಮಹಾದಂಡನಾಯಕರ ಸ್ಮರಣೋತ್ಸವ"ಕಾರ್ಯಕ್ರಮವನ್ನು ಚಾರಿತ್ರಿಕವಾಗಿ ಐತಿಹಾಸಿಕವಾಗಿ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡ ಕಾರ್ಯಕ್ರಮದ ಕೆಲವು ಮಹತ್ವ ಪೂರ್ಣ ದೃಶ್ಯಗಳು. Video Clip Link 1 Video Clip Link 2 Video Clip Link 5 Video clip Link 6 ಪ್ರಾರ್ಥನೆ Video Clip Link 3 ಬಕ್ತ ಸಮೊಹ ನೃತ್ಯ Video Clip Link 4 In News  Newspaper Cutout

ಮಾಲಿಕೆ 5 : ಮಠ, ಹಿರೇಮಠ, ಮಹಾಮಠ, ಪೀಠ ಪ್ರತಿಷ್ಠಾನಗಳು ಬೋಧಿಸದೇ ಬಚ್ಚಿಟ್ಟ ವಚನಗಳು ಮತ್ತು ವಚನ ದಂಡಸಂಹಿತೆ

ಇಮೇಜ್
 Episode-5, ಮಾಲಿಕೆ-೫ * ಮಠ, ಹಿರೇಮಠ, ಮಹಾಮಠ, ಪೀಠ ಪ್ರತಿಷ್ಠಾನಗಳು ಬೋಧಿಸದೇ ಬಚ್ಚಿಟ್ಟ ವಚನಗಳು ಮತ್ತು ವಚನ ದಂಡಸಂಹಿತೆ * -ಶರಣರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ ಮಠ, ಹಿರೇಮಠ, ಮಾಹಮಠ, ಪೀಠ ಪ್ರತಿಷ್ಠಾನಗಳು; ನಮ್ಮ ನಿಜವಾದ ದೀಕ್ಷಾಗುರು ಆರೆಂದರುಹದೆ ಶತಮಾನಗಳ ಕಾಲದಿಂದ ಅಂಧಕಾರದಲ್ಲಿ ಇಟ್ಟಿದ್ದಾರೆ, ನಿಜ ದೀಕ್ಷಾಗುರುಯಾರೆಂದೊರೆಯುವೆ ಶರಣರೊಪ್ಪುವ ಪರಿಯಲಿ: * ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿದಿರಿ ಬಸವಣ್ಣಾ* *ಲಿಂಗವಾಗಿ ಬಂದೆನ್ನ ಮನದ ಮಲೀನವ ಕಳೆದಿರಿ ಬಸವಣ್ಣಾ* *ಜಂಗಮವಾಗಿ ಬಂದೆನ್ನ ಪ್ರಪಂಚುಕತನವ ಕಳೆದು* *ಪರಮ ಸೀಮೆಯ ತೋರಿದಿರಿ ಬಸವಣ್ಣಾ* *ಇಂತಿವೆಲ್ಲವೂ ಬಸವಣ್ಣನಾಗಿ ಬಂದು ಎನಗೆ* *ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವಾ* *ಇನ್ನೆನಗತಿಶಯವೇನೂ ಇಲ್ಲ.* -ಗುರು ಸಿದ್ಧರಾಮೇಶ್ವರರು. ಹೊಸದಾಗಿ ಸರಕಾರಿ ಸೇವೆಗೆ ಆಯ್ಕೆಯಾದನಂತರ, ಮೊದಲನೇ ದಿನ, ನೇಮಕಾತಿ ಅಧಿಸೂಚನೆ ಪತ್ರ (Appointment order)ಕೊಡುವುದಕ್ಕಿಂತ ಮುಂಚೆ ಆಯಾ (Respective department) ಇಲಾಖೆಗಳ ಮುಖ್ಯ ಕಾರ್ಮಿಕ ಅಧಿಕಾರಿ(Chief personal officer)ಗಳು ನನ್ನ ಕರ್ತವ್ಯ ವನ್ನು ನಿಷ್ಟೆಯಿಂದ ಮಾಡುತ್ತೇನೆ ಎಂದು ಹೇಳಿಸುವ ಒಂದು ಪ್ರಮಾಣ ವಚನ ಬೋಧನೆ ಮಾಡುತ್ತಾರೆ.  * ಆ ಪ್ರಮಾಣ ವಚನ ಬೋಧಿಸುವಾಗ ರಾಜ್ಯ ಸರಕಾರದ ಸೇವೆಗಳಲ್ಲಾದರೆ, ಘನತೆವೆತ್ತ ರಾಜ್ಯಪಾಲರ ಪರವಾಗಿ, ಮತ್ತು ಕೇಂದ್ರ ಸರಕಾರದ ಸೇವೆಗಳಲ್ಲಾದರೆ,...

ಇತಿಹಾಸದ ಪುನರಾವರ್ತನೆ

ಇಮೇಜ್
 *ಇತಿಹಾಸದ ಪುನರಾವರ್ತನೆ* ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ, ಪ್ರಬಲರಾದ ರಾಜರು ಶತ್ರುಗಳಾದ ಬ್ರಿಟೀಷರಿಗೆ ಯಾವುದೇ ಕಪ್ಪಕಾಣಿಕೆ ಕೊಡದೆ ಅವರೊಡನೆ ಹೋರಾಡುತ್ತಿದ್ದರು. ಕೆಲವರು ಬ್ರಿಟೀಷರೊಡನೆ ಹೋರಾಡಿ ಜಯಶಾಲಿಗಳಾಗಿ ಮತ್ತೆ ಕೆಲವರು ಹೋರಾಡುತ್ತ ದೇಶಕ್ಕಾಗಿ  ವೀರಮರಣ ಹೊಂದುತ್ತಿದ್ದರು.  ದುರ್ಬಲರಾದ ಅರಸರು ಬ್ರಿಟೀಷರನ್ನು ಓಲೈಸುತ್ತ ಅವರ ಬೂಟುಗಳನ್ನು ಒರಸುತ್ತ ಅವರನ್ನು‌ ಓಲೈಸುತ್ತ ನಡೆವ ಹೆಣ ನುಡಿವ ಹೆಣವಾಗಿ ಹೆಣಮೂಳರಂತೆ ಬದುಕುತ್ತಿದ್ದರು. ಬಸವ ಧರ್ಮದಲ್ಲಿ ಈ ಇತಿಹಾಸ ಪುನರಾವರ್ತನೆಯಾಗಿದೆ.  ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಮತ್ತು ಮಾತೆ ಮಹಾದೇವಿಯವರು ವೀರ ಸನ್ಯಾಸಿಗಳಾಗಿ ಬಸವ ಧರ್ಮದ ಅಂತರಂಗದ ಶತ್ರುಗಳೊಡನೆ ಮತ್ತು ಹಿತ ಶತ್ರುಗಳೊಡನೆ ವೀರಾವೇಶದಿಂದ ಹೋರಾಡಿ ಬಸವ ಧರ್ಮವನ್ನು ರಕ್ಷಿಸಿದರು. ಬಸವ ಧರ್ಮದ ವನ್ನು ಶತ್ರುಗಳಿಂದ ಕಾಪಾಡಿದರು. ಪೂಜ್ಯ ಮಾತೆ ಮಹಾದೇವಿಯವರು ಹೋರಾಡುತ್ತಲೇ ವೀರ ಮರಣವನ್ನಪ್ಪಿ ಹುತಾತ್ಮರಾದರು. ಇವರಿಬ್ಬರ ನಂತರ ಬಂದವರು ದುರ್ಬಲರಾಗಿ ಹಿತಶತ್ರುಗಳನ್ನು ಓಲೈಸುತ್ತ ಅವರಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತ ಧರ್ಮಾಭಿಮಾನ ಪೀಠಾಭಿಮಾನ ಬಿಟ್ಟು ಧರ್ಮದ ಅಂತರಂಗದ ಶತ್ರುಗಳ ಹಂಗಿನಲ್ಲಿ ಬದುಕುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಭಕ್ತ ಪ್ರಜೆಗಳೇ ಈ ಧರ್ಮವನ್ನು ಕಾಪಾಡುವ ಅನಿವಾರ್ಯತೆ ಇದೆ .ತತ್ವ ನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳದೇ ವೀರಗಣಾಚಾರಿ ಮಡಿವಾಳ ಮಾಚಿ ...

ಮಾಲಿಕೆ 4 : ಮಠ, ಮಹಾಮಠ, ಹಿರೇಮಠ, ಪೀಠ, ಪ್ರತಿಷ್ಠಾನಗಳು ಬೋಧಿಸದೆ ಬಚ್ಚಿಟ್ಟ ವಚನಗಳು

ಇಮೇಜ್
*ಮಠ, ಮಹಾಮಠ, ಹಿರೇಮಠ, ಪೀಠ, ಪ್ರತಿಷ್ಠಾನಗಳು ಬೋಧಿಸದೆ ಬಚ್ಚಿಟ್ಟ ವಚನ ಮಾಲಿಕೆ-4* *ಮಠ, ಪೀಠ, ಪ್ರತಿಷ್ಠಾನಗಳು ಬಸವ ಭಕ್ತರು ನಿರ್ಮಿಸಿದ ಬಸವ ತತ್ವದ ಬೆಳಕಿನ ಗಟ್ಟಿಗಳು. ಅವುಗಳನ್ನು ಅಂಧಕಾರದ ಒಡಲಲ್ಲಿ ಬಯ್ಚಿಡುವುದು ಬೇಡ. ಬೆಳಕು ಬೀರುವ ವಚನ ವಿಜಯೋತ್ಸವಗಳು ನಿಲ್ಲಬಾರದು. ಯಾವುದೇ ಮಠ ಪೀಠ ಪ್ರತಿಷ್ಠನಗಳ ವ್ಯಾಜ್ಯ ನ್ಯಾಯಲಯ (Court)ದ ಮೆಟ್ಟಿಲು ಹತ್ತಬಾರದು. ಸದ್ಭಭಕ್ತರ ಆಸ್ತಿಗಾಗಿ ನ್ಯಾಯಲಯದ ಬಾಗಿಲ ತಟ್ಟುವುದು ಊರ ಸೀರೆಯ ನೋಡಿ ಅಗಸ ತಡಬಡಗೊಂಡಂತೆ..!!* -ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ ವಚನ * ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರು ಸದ್ಭಕ್ತರಲ್ಲದೆ* *ಎನಗಾರೂ ಇಲ್ಲವಯ್ಯಾ* *ಭೃತ್ಯಾಪರಾಧಃ ಸ್ವಾಮಿನೋ ದಂಡಃ* *ಲಿಂಗದೇವಾ ನೀವೇ ಪ್ರಮಾಣು.* -ಧರ್ಮಗುರುಬಸವಣ್ಣನವರು ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ರಚಿಸಿ ಮಹಾಮನೆ ಕಟ್ಟಿ, ಅರಿವು, ಆಚಾರ, ಅನುಭಾವಗಳನ್ನು ಜನ ಮಾನಸದಲ್ಲಿ ನೆಲೆಗೊಳಿಸುವ ಕಾರ್ಯವನ್ನು ಮಾಡುತ್ತಿರುವುದನ್ನು ನೋಡಿ ಅಸಂಖ್ಯಾತ ಶರಣರು ಅವರ ಕಾರ್ಯಕ್ಕೆ ಕೈಜೋಡಿಸಿದರು. ಇದರಿಂದ ಅನುಭಾವ ಮಂಟಪದ ದಾಸೋಹದ ಭಂಡಾರಕ್ಕೆ ಅಪಾರವಾದ ಕಾಣಿಕೆ ಹರಿದು ಬರುತ್ತಿತ್ತು. ಆ ಕಾಣಿಕೆ ಎಷ್ಟು ಬರುತಿತ್ತು ಎಂದರೆ ಕೊಂಡೆಗಳಿಗೆ, ಗುರು ಬಸವಣ್ಣನವರು ಶರಣರು ಕೊಟ್ಟ ಕಾಣಿಕೆಯಿಂದ ಇಂತಹ ಮಹಾನ್ ಕಾರ್ಯ ಮಾಡುತ್ತಿದ್ದಾರೋ ಅಥವಾ ಅರಮನೆಯ ಬೊಕ್ಕಸವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಎಂದು ಅನುಮಾನ ಬರುವ...

ಮಾಲಿಕೆ 3 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

ಇಮೇಜ್
ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳ ಮಾಲಿಕೆ-3 * ಮಠ ಪೀಠಗಳ ಪೀಠಾಧೀಶರು  ಭಕ್ತರ ಮತವೇ ತನ್ನ ಮತ ಎನ್ನಬೇಕು, ಧರ್ಮದಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಬೇಕು * -ಸಚ್ಚಿದಾನಂದ ಪ್ರಭು ಚಟ್ನಳ್ಳಿ * ಒಡಲ ಕಳವಳಕ್ಕೆ, ಬಾಯ ಸವಿಗೆ,* *ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗ ನಾನಲ್ಲ.* *ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ.* *ಅವರೊಕ್ಕುದ ಉಂಬೆ ಅವರೆಂದಂತೆ ಎಂಬೆ.* *ಎನ್ನೊಡೆಯ ಲಿಂಗದೇವನೊಲ್ಲದವರ ನಾ ಹಿಡಿದೆನಾದಡೆ* *ನಿಮ್ಮ ಪಾದದಾಣೆ.*     -ಧರ್ಮ ಗುರು ಬಸವಣ್ಣನವರು ಗುರು ಬಸವಣ್ಣನವರು 12ನೇ ಶತಮಾತನದಲ್ಲಿ ರಾಜಶಾಹಿ (Monorchy)ವ್ಯವಸ್ಥೆ ಇದ್ದಾಗಲೂ ಧರ್ಮದಲ್ಲಿ ಪ್ರಜಾಪ್ರಭುತ್ವ (Democracy) ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಹೀಗಾಗಿಯೇ ಗುರು ಬಸವಣ್ಣನವರನ್ನು ನಾವು ಪ್ರಜಾ ಪ್ರಭುತ್ವದ ಪಿತಾಮಹ ಹಾಗು ಪ್ರಥಮ ಸಂಸತ್ತು ಅನುಭವ ಮಂಟಪದ ಸಂಸ್ಥಾಪಕರು ಎಂದು ಕರೆಯುತ್ತೇವೆ. ಈ ಕಾರಣದಿಂದಲೇ ಗುರು ಬಸವಣ್ಣನವರ ಪುತ್ಥಳಿಯನ್ನು ಪ್ರಜಾಭುತ್ವದ ತಾಯಿ ಎನಿಸಿಕೊಂಡ ಲಂಡನ್ ಸಂಸತ್ತಿನ ಎದುರಿಗೆ ಪ್ರತಿಷ್ಠಾಪಿಸಲು ಸಾಧ್ಯವಾಯಿತು. ಕೆಲವು ಮಠಗಳು ಪೀಠಗಳು ಭಕ್ತರ ಕಾಣಿಕೆಯಿಂದ ಮತ್ತೆ ಕೆಲವರು ಸರಕಾರದ ಸಹಾಯದಿಂದ ಗುರು ಬಸವಣ್ಣನವರ ಪುತ್ಥಳಿಗಳನ್ನು ನಿಲ್ಲಿಸಿದ್ದಾರೆ. ಅನೇಕ ಮಹಾನಗರ, ಪ್ರಮುಖ ನಗರ, ಮತ್ತು ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ಗುರು ಬಸವಣ್ಣನವರ ಪುತ್ಥಳಿಗಳನ್ನು ಕಾಣುತ್ತೇವೆ. ಇದು ಗುರು ಬಸವಣ್ಣವರಿಗ...

ಸದ್ಗುಣಗಳ್ಳಿಲ್ಲದ ರೂಪ ಬಚ್ಚಲ ತಿಳಿನೀರಿಗೆ ಸಮ - Beaty without Good Mind & Character is Like clear water of Bathroom

ಇಮೇಜ್
  ಸದ್ಗುಣಗಳ್ಳಿಲ್ಲದ ರೂಪ ಬಚ್ಚಲ ತಿಳಿನೀರಿಗೆ ಸಮ (Beaty without Good Mind & Character is Like clear water of Bathroom) -#GuruBasavanna ಎಲವದ ಮರ ಹೂತು ಫಲವಾದ ತೆರನಂತೆ ಸಿರಿಯಾದಡೇನು ಶಿವಭಕ್ತಿಯಿಲ್ಲದನ್ನಕ್ಕ? ಫಲವಾದಡೇನು ಹೇಳಾ ಹಾವು ಮೆಕ್ಕೆಯಕಾಯಿ? ಗುಣವಿಲ್ಲದ ರೂಹು ಎಲ್ಲಿದ್ದರೇನು ? ಬಚ್ಚಲ ನೀರು ತಿಳಿಯಾದಲ್ಲಿ ಫಲವೇನು? ಅವಗುಣಿಗಳ ಮೆಚ್ಚ ನಮ್ಮ ಲಿಂಗದೇವರು. -ಗುರು ಬಸವಣ್ಣನವರು ಎಲವದ ಮರ ಎಂದರೆ ಬೂರಲ ಗಿಡ ಎಂದು ಅರ್ಥ ಎಲವದ ಮರವನ್ನು ಇಂಗ್ಲೀಷ್ನಲ್ಲಿ `ಸಿಲ್ಕ್-ಕಾಟನ್ಟ್ರೀ' (Silk Cotton tree) ಎನ್ನುತ್ತಾರೆ. ಹೂತು ಎಂದರೆ ಹೂವು ಬಿಟ್ಟು, ಫಲವಾದ ತೆರನಂತೆ- ಆ ಗಿಡಕ್ಕೆ ಹಣ್ಣುಗಳು ಆದ ಹಾಗೆ ಎಂದು ಮೊದಲ ಸಾಲಿನ ಅರ್ಥ. ಬೂರಲ ಗಿಡದ ಹಣ್ಣು ಯಾರೂ ತಿನ್ನಲಾರರು. ಆ ಹಣ್ಣಿನಿಂದ ಯಾರಿಗೂ ಯಾವ ಪ್ರಯೋಜನವು ಇಲ್ಲ. ತನ್ನ ಪಾಡಿಗೆ ತಾನು ಹೂವು ಬಿಡುತ್ತೆ ಕಾಯಾಗುತ್ತೆ ಹಣ್ಣಾಗುತ್ತೆ. ಆ ಹಣ್ಣು ಬಿದ್ದು ಹೋಗುತ್ತವೆಯೇ ಹೊರತು ಮನುಷ್ಯರಾಗಲಿ ಪಶುಪಕ್ಷಿಗಳಾಗಲೀ ತಿನ್ನಲಿಕ್ಕೆ ಯೋಗ್ಯವಲ್ಲದ ಹಣ್ಣು ಅದು. ಅದೇ ರೀತಿ, ಇನ್ನೊಬ್ಬರಿಗೆ ಉಪಕಾರ ಮಾಡದ, ಇನ್ನೊಬ್ಬರ ಕಷ್ಟದಲ್ಲಿ ಸಹಾಯ ಹಸ್ತ ಚಾಚದ ಸಿರಿವಂತಿಕೆಯಿಂದ ಯಾವ ಪ್ರಯೋಜನ? ಭಕ್ತಿಯಿಲ್ಲದ, ದೇವರ ಪೂಜೆ ಪ್ರಾರ್ಥನೆ ಮತ್ತು ದಾಸೋಹಕ್ಕೆ ಧನ ಸವೆಸದ ಸಿರಿವಂತಿಕೆ, ಆ ಬೂರಲ ಗಿಡದ ಹಣ್ಣಿನಂತೆ ನಿಷ್ಪ್ರಯೋಜಕವಾದುದು ಎಂದು ಧರ್ಮಪಿತರು ಈ ವಚನದ ಮೊದಲೆರಡು ಸಾ...

ಮಾಲಿಕೆ 2 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

ಇಮೇಜ್
 * ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನ ಮಾಲಿಕೆ-೨ * * ಗುರುವಾದವರು ಕೆಲಬರಿಗೆ ಗುರುವಾಗಿ ಮತ್ತೆ ಕೆಲಬರಿಗೆ ವೈರಿಯಾಗದೇ ಎಲ್ಲಾ ಶಿಷ್ಯಂದಿರನ್ನು ಸಮಭಾವದಿಂದ ಕಾಣಬೇಕು * -ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ *ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ* *ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು ನೋಡಾ.* *ಎಂತು ಅಂತೆ,* *ಶ್ರೀಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ* *ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ .* -ಶರಣ ಉರಿಲಿಂಗ ಪೆದ್ದಿಗಳ ವಚನ ಲಿಂಗಾಯತ ಧರ್ಮದಲ್ಲಿ ಗುರು ತತ್ವ ಜಂಗಮ ತತ್ವ ತುಂಬಾ ವಿಶೇಷವಾಗಿದೆ. ವಚನಗಳಲ್ಲಿ ಈ ವಿಚಾರವಾಗಿ ಅನೇಕ ರೀತಿಯ ವಿವರಣೆ ಇದೆ. ಗುರು/ಜಂಗಮನು ಸಮಾಜದಲ್ಲಿ ಬೆಸುಗೆಯನ್ನು ಬೆಸೆಯುವ ಲೌಕಿಕರ ಒಡೆದ ಮನಸ್ಸನ್ನು ಜೋಡಿಸಲು ಲಿಂಗದೇವನ ಪ್ರತಿನಿಧಿಯಾಗಿ ಕಾರ್ಯ ಮಾಡಬೇಕು. ಅವರು ಬಡವ ಬಲ್ಲಿದ, ಜ್ಞಾನಿ, ಅಜ್ಞಾನಿ  ವಿದ್ಯಾವಂತ ಅವಿದ್ಯಾವಂತ ಎಲ್ಲರ ಮೇಲೂ ಸಮನಾದ ಅನುಗ್ರಹ ದೃಷ್ಟಿಯನ್ನು ಬೀರಬೇಕು.  ಗುರು/ಜಂಗಮ ಒಬ್ಬರ ಮನೆಗೆ ಪ್ರಸಾದಕ್ಕೆ ಹೋಗಿ ಮರುದಿನ ಈ ಮನೆಯವರನ್ನು ಮುಂದಿನ ಮನೆಗೆ ಪ್ರಸಾದಕ್ಕೆ ಕರೆದುಕೊಂಡು ಹೋಗಿ ಇಬ್ಬರಲ್ಲಿಯೂ ಉಂಬುವ ಊಡುವ ಶಿವಾಚಾರವನ್ನು ಬೆಳೆಸಬೇಕು. ಇಬ್ಬರ ಮಧ್ಯೆ ಇರುವ ವೈಮನಸ್ಸನು ಹೊಡಿದುಹಾಕಿ ಇಬ್ಬರ ಮಧ್ಯೆಯೂ ಬಾಂಧವ್ಯ ಬೆಸೆಯಬೇಕು. ಒಬ್ಬ ಭಕ್ತರ ಮನೆಗೆ ಹೋಗಿ ಇನ್ನೊಬ್ಬ ಭಕ್ತನ ಬಗ್ಗೆ ಆಡಿ ಕೊಂಡು ಇಬ್ಬರ ಮಧ್ಯೆ ಬಿರುಕನ್ನು ಸೃಷ್ಟಿ ಮಾಡಬಾರದು....

ಸುಪ್ರೀಂಕೋರ್ಟ್ ತೀರ್ಪು✍️ ಹಾಗೂ ಮಾತಾಜಿ ಹೇಳಿಕೆ🎤 ಬಗ್ಗೆ ಕೆಲವು ಸತ್ಯಾಂಶಗಳು

ಇಮೇಜ್
 *👉 ಸುಪ್ರೀಂಕೋರ್ಟ್ ತೀರ್ಪು✍️ ಹಾಗೂ ಮಾತಾಜಿ ಹೇಳಿಕೆ🎤 ಬಗ್ಗೆ ಕೆಲವು ಸತ್ಯಾಂಶಗಳು* 1. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು ಹೀಗಿದೆ,  *ಪುಸ್ತಕದ ಮೇಲಿನ ನಿಷೇಧ ವಾಪಸ್ಸು ತೆಗೆದುಕೊಂಡರೆ ರಾಜ್ಯದಲ್ಲಿ ಶಾಂತಿ ಕದಡಬಹುದು, ಹಿಂಸೆಗೆ ಕಾರಣವಾಗಬಹುದು ಎಂದು ರಾಜ್ಯ ಸರ್ಕಾರವು  ವರದಿ ಕೊಟ್ಟಿದೆ, ಆ ಒಂದು ವರದಿಯನ್ನು ನಂಬಿ ನಾವು ಪುಸ್ತಕ ಮೇಲಿನ ನಿಷೇಧ ವಾಪಸ್ಸು ಪಡೆಯುತ್ತಿಲ್ಲ, ಆದರೆ  *" ಅಂಕಿತನಾಮ ಬದಲಿಸಿರುವ ಚಿಕ್ಕ ಬದಲಾವಣೆಯೂ ಬಸವಣ್ಣನವರ ಅನುಯಾಯಿಗಳ ಭಾವನೆಗೆ ಧಕ್ಕೆ ತರಲಾರದು, ಇದು ವಿವಾದವೇ ಅಲ್ಲ, ಪುಸ್ತಕವು ನಿಮಗೆ ಇಷ್ಟವಾದರೆ ಓದಿ, ಇಲ್ಲವಾದ್ರೆ ಓದಬೆಡಿ, ಅನ್ಯರ ಅಭಿಪ್ರಾಯಗಳತ್ತ ಸಹಿಷ್ಣುತೆ ಬೆಳೆಸಿಕೊಳ್ಳಬೇಕು, ವಿರೋಧ ಮಾಡುವವರ ಧಾರ್ಮಿಕ ಅತಿರೇಕತನ ನಿಲ್ಲಬೇಕು, ಧರ್ಮ ರಾಜಕಾರಣದಲ್ಲಿ ಆಸಕ್ತಿ ಇರುವವರು ಮಾತ್ರ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ "* ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲಿಂಗದೇವ ವಚನಾಂಕಿತ ತಪ್ಪು ಅಥವಾ ಬಳಸಬಾರದು ಎಂದು ಎಲ್ಲಿಯೂ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿಲ್ಲ.  ನಾವು ಈ ಕೇಸ್ ನಲ್ಲಿ * ತರ್ಕಬದ್ಧ ಆದೇಶ ಕೊಡುತ್ತಿಲ್ಲ * ಎಂದು ಕೂಡ ಸುಪ್ರೀಂ ಕೋರ್ಟ್ ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡಿದೆ. 2.  "ಸುಪ್ರಿಂಕೋರ್ಟಿಗೆ ನಮ್ಮ ಸಂಶೋಧನೆ ಅರ್ಥವಾಗಿಲ್ಲ, ಆದರೆ ಕೋರ್ಟಿಗೆ ಗೌರವ ಸೂಚಿಸುವ ಸಲುವಾಗಿ ನಾನು ಬಸವ ವಚನ ದೀಪ್ತಿ ಪುಸ್ತಕದ * ಮರುಮುದ್ರಣ * (...

ವಿಶ್ವದ ಯಾವುದೇ ಧರ್ಮಕ್ಕಿಂತ ಲಿಂಗಾಯತ ಧರ್ಮ ವಿಶಿಷ್ಟವಾದುದು

ಇಮೇಜ್
 ಲಿಂಗಾಯತ ಧರ್ಮ ವಿಶ್ವದ ಯಾವುದೇ ಧರ್ಮಕ್ಕಿಂತ ಲಿಂಗಾಯತ ಧರ್ಮ ವಿಶಿಷ್ಟವಾದುದು ಈ ಧರ್ಮದಲ್ಲಿ ಜಾತಿ ಭೇಧ ಇಲ್ಲ ವರ್ಗಭೇಧ ಇಲ್ಲ ವರ್ಣಭೇದ ಇಲ್ಲ  ಕಾಯಕದಲ್ಲಿ ಭೇದ ಇಲ್ಲ ಸರ್ವರೂ ಸಮಾನಾರು ಎಂಬ ತತ್ವದ ಆಧಾರದಲ್ಲಿ ಪ್ರಯೋಗಗೊಂಡು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದ ಧರ್ಮ ಲಿಂಗಾಯತ ಧರ್ಮ ಈ ಧರ್ಮದಲ್ಲಿ ಎಲ್ಲರೂ ಗುರುವಾಗುವ ಎಲ್ಲರೂ ಲಿಂಗವಾಗುವ ಎಲ್ಲರೂ ಜಂಗಮವಾಗುವ ವಿಶಿಷ್ಟ ಶಕ್ತಿ ಲಿಂಗಾಯತ ಧರ್ಮಕ್ಕಿದೆ ಜ್ಯೋತಿ ಮುಟ್ಟಿದ ದೀಪ ಮತ್ತೆ ಸಹಸ್ರಾರು ದೀಪಗಳನ್ನು ಬೆಳಗುವ ಶಕ್ತಿ ಪಡೆಯುವಂತೆ ಪ್ರತಿಯೊಬ್ಬರೂ ಗುರು ಆಗಬಹುದು  ವ್ಯಕ್ತಿಯ ಬೆಳವಣಿಗೆಗೆ ಒಂದು ಹಂತದವರೆಗೂ ಬೇರೆ ಗುರು ಅವಶ್ಯಕತೆ ಇದ್ದರೂ ನಂತರ ಅರಿವೇ ಗುರುವಾಗಿ ಸ್ವಯಂ ಜ್ಯೋತಿಯಾಗಿ ಬೆಳಕನ್ನು ನೀಡುವ ದೀಪವಾಗುವ ಅವಕಾಶ ಲಿಂಗಾಯತ ಧರ್ಮದಲ್ಲಿ ಇದೆ ಲಿಂಗಾಯತ ಧರ್ಮದಲ್ಲಿ ಪ್ರತಿಯೊಬ್ಬರೂ ದೇಹವ ದಂಡಿಸಿ ಕಾಯಕ ಮಾಡಲೇಬೇಕು ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ ಲಿಂಗ ವಾದಡೂ ಕಾಯಕದಿಂದಲೇ ಜೀವನ್ಮುಕ್ತಿ ಜಂಗಮವಾದಡೂ ಕಾಯಕದಿಂದಲೇ ಜೀವನ್ಮುಕ್ತಿ  ಕಾಯಕವೇ ಪೂಜೆ ಎಂದು ಸಾರಿದ ಏಕೈಕ ಧರ್ಮ ಲಿಂಗಾಯತ ಧರ್ಮ ಸ್ತ್ರೀ ಪುರುಷ ಭೇಧ ವಿಲ್ಲ ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಎಂದು ಸ್ತ್ರೀ ಪುರುಷ ಸಮಾನರು ಎಂದು ಸಾರಿದ್ದು ಲಿಂಗಾಯತ ಧರ್ಮ ಭಕ್ತ ಮತ್ತು ಭಗವಂತನ ಮಧ್ಯೆ ಯಾವುದೇ ಅಡೆತಡೆ ಇಲ್ಲದಂತೆ ನೇರವಾಗಿ ಪ್ರತಿಯೊಬ್ಬ ಭಕ್ತನೂ ಭಗವಂತನ ಜೊತೆಗೆ ಮುಕ್ತ...

ಮಾಲಿಕೆ-1 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

ಇಮೇಜ್
  ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳ ಮಾಲಿಕೆ-೧ -ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ ಸಯದಾನವ ತಂದು ನೀಡುವೆನಲ್ಲದೆ ಸಂಬಂಧಿ ನಾನಲ್ಲಯ್ಯಾ. ಕರ್ತಂಗೆ ಭೃತ್ಯಾಚಾರವ ಮಾಡಿ ಒಕ್ಕುದ ಕೊಂಡಿಪ್ಪೆನಯ್ಯಾ. ಭೋಗಾದಿಭೋಗವ ಸಮವಾಗಿ ಭೋಗಿಸಲು ಅಘೋರನರಕದಲ್ಲಿಕ್ಕುವ ಲಿಂಗದೇವ. -ಗುರುಬಸವಣ್ಣನವರು ಲಿಂಗದೇವನ ಶರಣರ ಸಮಸಮವಾಗಿ ಅನುಗ್ರಹ ನೀಡಿದ ಗುರುವಿನ ಸಮಸಮವಾಗಿ ಸೌಲಭ್ಯಗಳನ್ನು ಪಡೆದರೆ ಲಿಂಗದೇವರು ನರಕದಲ್ಲಿಕ್ಕುವ ಎಂದು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳುತ್ತಿದ್ದಾರೆ. ಒಂದು ಧರ್ಮದ ಒಳಿತಿಗೆ ಇದು ಬಹು ದೊಡ್ಡ ಸಂದೇಶ.  * ಸಯದಾನವ ತಂದು ನೀಡುವೆನಲ್ಲದೆ ಸಂಬಂಧಿ ನಾನಲ್ಲಯ್ಯ * ಎಂದರೆ ನಾನು ಅನುಭವ ಮಂಟಪಕ್ಕೆ, ಶೂನ್ಯ ಪೀಠಕ್ಕೆ ಮಹಾಮನೆಗೆ ಶರಣರ ದಾಸೋಹಕ್ಕೆ ಕಾಣಿಕೆ, ಪಡಿ ಪದಾರ್ಥಗಳನ್ನು ತಂದು ಕೊಡುವುದಷ್ಟೇ ನನ್ನ ಕರ್ತವ್ಯ ಅದರ ಸಂಬಂಧಿ ನಾನಲ್ಲ. ಅಂದರೆ *" ಅದನ್ನು ಉಪಯೋಗಿಸುವ ಹಕ್ಕು, ಭೋಗಿಸುವ ಅಧಿಕಾರ ನನಗಿಲ್ಲ "* ಎಂದು ಹೇಳುತ್ತಿದ್ದಾರೆ.   * ಕರ್ತಂಗೆ ಭ್ರತ್ಯಾಚಾರವ ಮಾಡಿ ಒಕ್ಕುದ ಕೊಂಡಿಪ್ಪೆನಯ್ಯ *  ಎಂದರೆ,  ಕಾಣಿಕೆಯನ್ನು ನೀಡಿದ ಶರಣರಿಗೆ ಧರ್ಮ ಬೋಧಿಸುವ ಸೇವೆಯನ್ನು ಮಾಡಿ ಮಹಾಮನೆಯಲ್ಲಿ ಅವರಿಗೆ ಪ್ರೀತಿ ಗೌರವಗಳಿಂದ ದಾಸೋಹ ಮಾಡಿ, ಅವರು ಉಪಯೋಗಿಸಲು ಹೇಳಿದಷ್ಟನ್ನು ಮಾತ್ರ ಶರಣರಿಗೆ ಸಮ್ಮತವಾದುದನ್ನು ಮಾತ್ರ ನಾನು ಪಡೆದುಕೊಳ್ಳುತ್ತೇನೆ. ಅವರು ನನಗೆ ಉಪಯೋಗಿಸಲು ಅನುಮತಿ ಕೊಟ...