ಪೋಸ್ಟ್‌ಗಳು

ಕಲ್ಯಾಣದ ಪ್ರಧಾನ ಮಂತ್ರಿ ಗುರು ಬಸವಣ್ಣನವರ ಯುದ್ಧ ವಿರೋಧ ನೀತಿ.

ಇಮೇಜ್
ಯುದ್ಧವೆಂದರೆ ಅದೊಂದು ಭಯಾನಕ ಸನ್ನಿವೇಶ. ಅಂಥ ಸನ್ನಿವೇಶವನ್ನು ಯುದ್ಧವಾದ ನಂತರವೇ ಅನುಭವಕ್ಕೆ ತಂದುಕೊಳ್ಳಬೇಕಾಗಿಲ್ಲ, ಯುದ್ಧದ ಸನ್ನಿವೇಶ ಕಲ್ಪಿಸಿಕೊಂಡರೂ ಎಂಥವರಿಗಾದರೂ ಅದರ ಪರಿಣಾಮದ ಬಗ್ಗೆ ಅರಿವಾಗುತ್ತದೆ. ಯುದ್ಧದಿಂದ ಅನೇಕ ಸಾವು ನೋವುಗಳುಂಟಾಗುತ್ತವೆ. ಯುದ್ಧದ ಪರಿಣಾಮದಿಂದ ಅನೇಕ ಜನ ಮಹಿಳೆಯರು ವಿಧವೆಯರಾಗುತ್ತಾರೆ, ಅನೇಕ ಮಕ್ಕಳು ಅನಾಥರಾಗುತ್ತಾರೆ. ಅನೇಕ ಜನ ಅಮಾಯಕರೂ ಸಾಯುತ್ತಾರೆ ಮತ್ತು ಅನೇಕರು ಗಾಯಗೊಳ್ಳುತ್ತಾರೆ. ಯುದ್ಧದಿಂದಾಗಿ ಭೌಗೋಳಿಕ ಪ್ರದೇಶವೂ ತನ್ನ ನೈಸರ್ಗಿಕತೆಯನ್ನು ಕಳೆದುಕೊಂಡ ಹಾಳಾಗುತ್ತದೆ. ಒಟ್ಟಾರೆ ಯುದ್ಧದ ಪರಿಣಾಮಗಳು ಅತ್ಯಂತ ಕರುಣಾಜನಕ, ಹೃದಯವಿದ್ರಾವಕ, ಮನಕಲಕುವಂತಾಗಿರುತ್ತವೆ. ಈ ಹಿಂದೆ ಜಗತ್ತು ಅನೇಕ ಯುದ್ಧಗಳನ್ನು ಕಂಡಿದೆ, ಎರಡು ಮಹಾಯುದ್ಧಗಳನ್ನೂ ಕಂಡಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಎನ್ನುವ ಪಟ್ಟಣಗಳ ಮೇಲೆ ಅಣುಬಾಂಬ್ ಗಳನ್ನು ಹಾಕಲಾಯಿತು. ಇದರ ಪರಿಣಾಮದಿಂದ ಇಂದಿಗೂ ಆ ಎರಡೂ ಪಟ್ಟಣಗಳ ಭೌಗೋಳಿಕ ಪರಿಸರ ಶಾಶ್ವತವಾಗಿ ಊನವಾಯಿತು. ಅಣುಬಾಂಬಿನ ಪರಿಣಾಮವಾಗಿ ಇಂದಿಗೂ ಆ ಪಟ್ಟಣಗಳಲ್ಲಿ ಅತಿ ಹೆಚ್ಚಿನ ಅಂಗವಿಕಲ ಮಕ್ಕಳು ಜನಿಸುತ್ತಿವೆ. ಅಲ್ಲಿನ ಪರಿಸರದ ಮೇಲೆ ಯುದ್ಧ ಶಾಶ್ವತವಾದ ಗಾಢ ಪರಿಣಾಮವನ್ನು ಬೀರಿದೆ.  ಇಂದು ಸಹ ಜಗತ್ತು ಯುದ್ಧ ಭೀತಿಯಿಂದ ನಲುಗುತ್ತಿದೆ. ಅಮೇರಿಕಾ ಮತ್ತು ಇರಾನ್ ಗಳ ಯುದ್ಧ ಬಹು ದೊಡ್ಡ ಭೀತಿಯನ್ನು ಸೃಷ್ಟಿಸಿದೆ.  ಅನೇಕ ಉ...

ಬಸವ ಧರ್ಮದ ಗತ್ತು ಬೇರೆನೇ ಇತ್ತು…

ಇಮೇಜ್
ಇಂದು ಬೆಳಗ್ಗೆ ಟಿಫನ್ ಮಾಡ್ತಾ ಇರುವಾಗ ನಮ್ಮ ಮಾಮ ಕೇಳಿದ್ರು. ಮಾಮ:  ಏನ್ರಿ ವಿಶ್ವನಾಥ, ಕೆನ್ನೇರಿ ಸ್ವಾಮಿ ಏನೋ ಬಹಳ ಹಗುರವಾಗಿ ಮಾತಾಡಿದ್ರಂತೆ. ಏನದು? ವಿಶ್ವನಾಥ : ಏನ್ ಹೇಳೋದ್ರಿ ಮಾಮ, ಇಂಥ ಸ್ವಾಮಿಗಳು ಒಬ್ಬರಲ್ಲ. ತುಂಬ ಜನ ಇದ್ದಾರೆ. ಒಬ್ಬ ಕೆನ್ನೇರಿ, ಒಬ್ಬ ಸದಾಶಿವಾನಂದ ಸ್ವಾಮಿ, ಮತ್ತೊಬ್ಬ ಯತ್ನಾಳ. ಮನಸ್ಸಿಗೆ ಬಂದಹಾಗೆ ಮಾತಾಡ್ತಾರೆ. ಮಾಮ : ಅಲ್ಲಾ ವಿಶ್ವನಾಥ, ಇಷ್ಟ ದೊಡ್ಡ ಲಿಂಗಾಯತ ಒಗ್ಗೂಟ ಇದೆ, ದೊಡ್ಡ ದೊಡ್ಡ ಮಠದ ಸ್ವಾಮಿಗಳು ಇದ್ದಾರೆ. ಅಂದ್ಮೇಲೆ ಇಂಥ ಟೀಕೆ–ಟಿಪ್ಪಣಿ ಬರೋದಾ? ವಿಶ್ವನಾಥ : ನಾವು ಒಗ್ಗಟ್ಟಿಲ್ಲಾ ಅಂದ್ರೆ, ಇಂಥ ಗುದ್ದಾಟ ಸಹಜ. ಇವತ್ತು ಈ ಸ್ವಾಮಿ ಹೇಳ್ತಾನೆ, ನಾಳೆ ಮತ್ತೊಬ್ಬ ಹೇಳ್ತಾನೆ. ಮಾವ : ಅಂದ್ರೆ ಮತ್ತೆ ಏನ್ ಮಾಡ್ತೀರಿ? ವಿಶ್ವನಾಥ : ನಾವು ಉತ್ತರ ಕೊಡ್ತಾ ಇರ್ತೀವಿ ಮಾಮ. ನಮ್ಮಂಥವರು ಇರೋವರೆಗೂ ಕೊಡ್ತೀವಿ. ನಾವಿಲ್ಲ ಅಂದ್ರೆ ನಮ್ಮ ಮಕ್ಕಳು ಕೊಡ್ತಾರೆ, ಅವರ ಮಕ್ಕಳು ಮುಂದಕ್ಕೆ ಕೊಡ್ತಾರೆ. ಮಾಮ : ಮಕ್ಕಳೇನು ಉತ್ತರ ಕೊಡ್ತಾರೆ ರಿ? ಎಲ್ಲಾ ಬಸವಪರ ಸಂಘಟನೆಗಳಲ್ಲಿ ಬರೀ ಬಿಳಿ ಕೂದಲವರು, ತಲೆಗೋಳಿ ಜನರೇ ತುಂಬಿರ್ತಾರೆ. ರಾಷ್ಟ್ರೀಯ ಬಸವದಳದಲಗಲ್ಲಿ ಅಲ್ಲಿ ಇಲ್ಲಿ ಕೆಲ ಹುಡುಗರು ಕಾಣಿಸ್ತಾರೆ ಅಷ್ಟೇ. ಅದನ್ನ ಬಿಟ್ಟರೆ ಯಾವ ಸಂಘಟನೆಯಲ್ಲಿ ಯುವಕರು ಇದ್ದಾರೆ ಹೇಳ್ರಿ? ವಿಶ್ವನಾಥ : ಅದು ನಿಜ ಮಾತು ಮಾಮ. ಚೆನ್ನಾಗಿರೋ ಸಂಘಟನೆಗಳನ್ನು ಒಡೆದವರು ಯಾರು? ನಮ್ಮ ಲಿಂಗಾಯತ ಕಾವಿಧಾರಿಗಳೇ ತಾನೆ....

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಇಮೇಜ್
ಯಾರು ? ಓಂ ಪದವನ್ನು ಬಳಸಬೆಡಿ ಅಂತ ಹೆಳಿದರೊ ಗೊತ್ತಿಲ್ಲಾ, ಆದರೆ ಅವರ ಶಿಷ್ಯಂದಿರು ಆಮಂತ್ರಣ ಪತ್ರಿಕೆಯಲ್ಲಿ ಓಂ ಪದ ವನ್ನು ಬಿಟ್ಟು, ಶ್ರೀ ‌ಗುರು ಬಸವಲಿಂಗಾಯ ನಮಃ ವನ್ನು ಬಳಸುತ್ತಾರೆ, ಇದರಿಂದ ಅಂಥಹ ಕಾವಿಧಾರಿಗಳು ಯಾರಿರಬಹುದೆಂದು ಗುರುತಿಸಬಹುದು. ಆದಿ ಶರಣರು ತಮ್ಮ ವಚನಗಳಲ್ಲಿ "ಪ್ರಣವ" , "ಓಂ" ಪದಗಳನ್ನು ಬಹಳಕಡೆ Positiveಯಾಗಿ ಬಳಸಿದ್ದಾರೆ.   ಸ್ವತಂತ್ರ ಧರ್ಮವಾದ ಜೈನ ಹಾಗು ಸಿಖ್ ಗಳಲ್ಲಿ ಓಂ ಪದದ ಬಳಕೆ ಇದೆ, ಈ ದೃಷ್ಟಿಕೋನ ದಿಂದ ನೊಡಿದರೆ, ಲಿಂಗಾಯತ ಸ್ವತಂತ್ರ ಧರ್ಮವಾಗದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಓಂ ಪದ ಬಳಕೆಯನ್ನು ಬಿಡಲು ತಮ್ಮ ಭಕ್ತರನ್ನು ಮನವಲಿಸಿದ್ದಾರೆ, ಅನಿಸುತ್ತದೆ. ನಿಮ್ಮ ವಿಚಾರವೆನು ?  ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. -  ತೋಂಟದ ಸಿದ್ಧಲಿಂಗ ಶಿವಯೋಗಿಗಳು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ನಸವ ಧರ್ಮ ಪೀಠದ ಜಂಗಮರಾದ ಬಸವಪ್ರಕಾಶ ಹಾಗು ಬಸವಕುಮಾರ ಸ್ವಾಮಿಜಿಗಳ ಮೆಲೆ , ಬ ಧ ಪೀಠದ ಭಕ್ತರ ಆಕ್ರೊಶ

ಇಮೇಜ್
 ಸಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗಳು ಬಸವ ಧರ್ಮ ಪೀಠದ ಭಕ್ತರ ಆಕ್ರೊಶಕ್ಕೆ ಕಾರಣವಾಗಿದೆ.  ಈ ವಿಡಿಯೊದಲ್ಲಿ ಲಿಂಗಾಯತವನ್ನು ಹಿಂದು ಧರ್ಮದ ಭಾಗ ಎಂಬ ಭಾವದಲ್ಲಿ ಗೋಚರವಾಗುತಿದ್ದು, ಇಂಥಹ ಬೆಳವಣಿಗೆಗಳು ಬಸವ ತತ್ವದ ವಿರುಧ್ಧವಾಗಿದೆ. ಇಂದಿನ ಪೀಠಾದ್ಯಕ್ಷರು, ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯುವ ಮೊದಲೆ, ಬಕ್ತರು ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಪೀಠಾಧ್ಯಕ್ಷರ ಯಾವ ಕ್ರಮ ಕೈ ಗೊಳ್ಳುತ್ತಾರೊ ಅಥವಾ ನಿರ್ಲಕ್ಷಿಸುತ್ತಾರೊ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ವಿಡಿಯೋಗಳು ಇಂತಿವೆ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಲೋಕದ ಡೊಂಕ ತಿದ್ದಬಾರದೇ? (ಭಾಗ-7/7)

ಇಮೇಜ್
ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ? ನಿಮ್ಮ ನಿಮ್ಮತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಗುರು ಶಿಷ್ಯ ಪರಂಪರೆಯಲ್ಲಿ ಉತ್ತರಾಧಿಕಾರಿ ತಪ್ಪು ಮಾಡಿದಾಗ, ಗುರುವಿನ ಮುಂದೆ ತಪ್ಪು ಪ್ರಸ್ತಾವನೆ(Proposal)ಗಳನ್ನು, ಬೇಡಿಕೆಗಳನ್ನು ಇಟ್ಟಾಗ, ಪೀಠಾಧಿಕಾರಿ ಉತ್ತರಾಧಿಕಾರಿಯನ್ನು ತಿದ್ದಬೇಕು. ನಿಜ ಧರ್ಮ ಉಪದೇಶ ಮಾಡಬೇಕು, ಮೌಲ್ಯಗಳನ್ನು ಕಲಿಸಬೇಕು. ಸಾಧಕ ಜೀವನದ ಉಪದೇಶವನ್ನು ಮಾಡಬೇಕು. ಧರ್ಮದ, ಸಾಧನೆಯ, ನೈತಿಕತೆಯ ಎಲ್ಲಾ ಆಯಾಮಗಳನ್ನು ಉಪದೇಶ ಮಾಡಿ. ಈ ಉಪದೇಶಗಳು ಅಳವಟ್ಟಿವಿಯೇ ಇಲ್ಲವೇ ಎನ್ನುವುದನ್ನು ಪರೀಕ್ಷೆ ಮಾಡಬೇಕು. ಇಲ್ಲದಿದ್ದರೆ ಏನೂ ಅರಿಯದ ಅಜ್ಞಾನಿಗಳನ್ನು ತಂದು ಪೀಠಾಧಿಕಾರಿ ಉತ್ತರಾಧಿಕಾರಿ ಮಾಡಿದರೆ ಬಹುದೊಡ್ಡ ತಪ್ಪಾಗುತ್ತದೆ.  ಉತ್ತಮ ಮೌಲ್ಯಗಳನ್ನು ಧರ್ಮ ಮಾರ್ಗವನ್ನು ಧರ್ಮದ ಸೂಕ್ಷಮತೆಗಳನ್ನು ಬೋದಿಸದೇ ಹೋಗುವುದು ಎರಡನೇ ತಪ್ಪಾಗುತ್ತದೆ. ಬೋಧಿಸಿದರೂ ಅದನ್ನು ಪರೀಕ್ಷಿಸದೇ ಧರ್ಮ ಪ್ರತಿನಿಧಿಗಳನ್ನಾಗಿ, ಪೀಠಾಧಿಕಾರಿ, ಉತ್ತರಾಧಿಕಾರಿಗಳನ್ನಾಗಿ ಮಾಡುವುದು ಪ್ರಮಾದವಾಗುತ್ತದೆ. ಇಂತಹ ತಪ್ಪುಗಳನ್ನೇ ಮಾಡಿದಾಗ, ತಪ್ಪು ತಪ್ಪನ್ನೇ ಬಿತ್ತಿ ತಪ್ಪನ್ನೇ ಬೆಳೆದು, ತಪ್ಪು ತಪ್ಪಾಗಿ ತಪ್ಪಾಗುವುದರಲ್ಲಿ ಸಂದೇಹವೇ ಇಲ್ಲ. ತಪ್ಪು ಭಾವನೆ ತಪ್ಪು ವರ್ತನೆಯಿಂದ, ಧರ್ಮಪೀಠವನ್ನು ತಪ್ಪಾದ ದಾರಿಯಲ್ಲಿ ಕೊಂಡೊಯ್ಯುತ್ತಾರೆ. ಸಂವಿಧಾನ ಕಾಯ್ದೆ ಕಾನೂನುಗ...

ವಿಚಿತ್ರ ರೀತಿಯಲ್ಲೇ ಸಾಗುತ್ತಿದೆ ಬಸವ ಧರ್ಮ ಪೀಠದ ಸಂಘಟನೆ

ಇಮೇಜ್
ಶರಣು ಶರಣಾರ್ಥಿ  ಕಾಶಿ (ವಾರಣಾಶಿ )8ನೇ ಬಸವ ಧರ್ಮ ಸಮ್ಮೇಳನ ಆಮಂತ್ರಣ ಪತ್ರ ನೋಡಿ ಆಶ್ಚರ್ಯವಾಯಿತು, 8ನೇ ಬಸವ ಧರ್ಮ ಸಮ್ಮೇಳನ ನಡೀತಾಯಿದೆ ಯಲ್ಲಿ ಪ್ರಚಾರ ಇಲ್ಲ ಯಾವ ಪೋಸ್ಟರ್ ಇಲ್ಲ ಕಳೆದ ವಾರ ಪೂಜ್ಯ ಗಂಗಾಮಾತಾಜಿ ನಾಲ್ಕು ದಿವಸ ಹೈದ್ರಾಬಾದ ಮತ್ತು ಜಹಿರಾಬಾದ ನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಆದರೂ ಎಲ್ಲಿ ಕೂಡ ಈ ಕಾರ್ಯಕ್ರಮದ ಬಗ್ಗೆ ಹೇಳ್ಲಿಲ ಮತ್ತು ತೆಲಂಗಾಣ ರಾ. ಬ. ದಳದ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರ  ಕೂಡ ಏನು ಹೇಳ್ಲಿಲ ನಾನು ಲಿಂಗಾಯತ ಧರ್ಮ ಮಹಾ ಸಭಾ ಅಧ್ಯಕ್ಷ ನನಗು ಕೂಡ ತಿಳಿಸಿಲ್ಲ. ಶರಣರು ಹೇಗೆ ಭಾಗಿಯಾಗಬೇಕು ಬಸವ ಧರ್ಮ ಸಮ್ಮೇಳನ ಕಾರ್ಯಕ್ರಮ ಅದು ಹೊರ ರಾಜ್ಯದಲ್ಲಿ ಮಾಡಿ ಯಾರಿಗೂ ತಿಳಿಸಲ್ಲ ಅಂದರೆ ಹೇಗೆ ನಮ್ಮ ಸಂಘಟನೆ ಯಾವ ಮಾರ್ಗದಲ್ಲಿ ನಡೀತಿದೆ ನೀವೆ ನೋಡಿ ಇದು ಸರಿಯಲ್ಲ. ಅಧ್ಯಕ್ಷರು ಲಿಂಗಾಯತ ಧರ್ಮ ಮಹಾ ಸಭಾ ತೆಲಂಗಾಣ. ಸಂಪಾದರು‌ : ವಿಶ್ವನಾಥ ಕೋರೆ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಲೋಕದ ಡೊಂಕ ತಿದ್ದಬಾರದೇ? (ಭಾಗ-6/7)

ಇಮೇಜ್
ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಒಂದು ವೇಳೆ ಗುರು ಬಸವಣ್ಣನವರು ಲೋಕದ ಡೊಂಕನ್ನು ತಿದ್ದದ್ದೇ ಹೋಗಿದ್ದರೆ ಇಂತಹ ಸುಂದರವಾದ, ವೈಚಾರಿಕವಾದ ಮನಸ್ಸೊಪ್ಪುವ ಹೃದಯ ಮೆಚ್ಚುವ ಇಂತಹ ಲಿಂಗಾಯತ ಧರ್ಮ ನಮಗೆ ಸಿಗುತ್ತಿತ್ತೇ? ವಾಸ್ತವಿಕವಾಗಿ ಸಹಸಾಧಕರು ಸಮಾಜ ಬಾಂಧವರು ಧರ್ಮ ಪೀಠಾಧಿಕಾರಿಗಳು ಮತ್ತು ಎಲ್ಲರೂ ತಮಗೆ ಕಂಡ ತಮ್ಮ ಸಹಚರ್ಯರರ ತಪ್ಪನ್ನು ತಿದ್ದಬೇಕು. ತಮ್ಮ/ತಂಗಿ ತಪ್ಪಿದಾಗ ಅಣ್ಣ/ ಅಕ್ಕ ತಿದ್ದಬೇಕು. ಅಣ್ಣ/ ಅಕ್ಕ ತಪ್ಪಿದಾಗ ತಮ್ಮ/ತಂಗಿ ತಿಂದಬೇಕು. ಮಕ್ಕಳು ತಪ್ಪಿದಾಗ ತಂದೆ ತಾಯಂದಿರು ತಪ್ಪಬೇಕು. ಕೆಲವೊಮ್ಮೆ ತಂದೆ ತಯಾಂದಿರು ತಪ್ಪು ಮಾಡಿದಾಗ ಮಕ್ಕಳು ತಿದ್ದಬೇಕಾಗುತ್ತದೆ. ಒಟ್ಟಾರೆ ಯಾರೆ ತಪ್ಪು ಮಾಡಿದರು ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ತಪ್ಪು ಎನ್ನುವುದು ಕಂಡಾಗ ತಿದ್ದಲೇಬೇಕು. ಶಿಷ್ಯ ತಪ್ಪುಮಾಡಿದಾಗ ಗುರು ತಿದ್ದಬೇಕು(ಸಾಮರ್ಥ್ಯವಿದ್ದರೆ), ಗುರು ತಪ್ಪುಮಾಡಿದಾಗ ಶಿಷ್ಯ ತಿದ್ದಬೇಕು(ಸಾಮರ್ಥ್ಯವಿದ್ದರೆ) ಇಬ್ಬರೂ ತಪ್ಪು ಮಾಡಿದಾಗ ಭಕ್ತರು ತಿದ್ದಬೇಕು. ಲೋಕದ ಡೊಂಕ ನಾವೇಕೆ ತಿದ್ದಬೇಕು ಎಂದರೆ, ಈ ಕರ್ತಾರನ ಕಮ್ಮಟವನ್ನು ಸುಂದರಗೊಳಿಸುವವರಾರು? ಅಲ್ಲಲೇ ಅಮಾನವೀಯತೆಯ ನಡುವೆ ಮಾನವೀಯತೆಗಳನ್ನು ಕ್ರೌರ್ಯದ ನಡುವ ದಯೆ, ಕರುಣೆಗಳನ್ನು; ದುರ್ಭಾವದ ನಡೆವೆ ಸದ್ಭಾವಗಳನ್ನು, ಮೂಢ ...

ಲೋಕದ ಡೊಂಕ ತಿದ್ದಬಾರದೇ? (ಭಾಗ-5/7)

ಇಮೇಜ್
ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಒಟ್ಟಾರೆ ನಾವೇನೂ ಯಾವುದೇ ಹೊಸ ತಪ್ಪು ಮಾಡುತ್ತಿಲ್ಲ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹೇಳುವುದನ್ನೇ ನಾವು ಮಾಡುತ್ತಿದ್ದೇವೆ. ನಮ್ಮ ಹಿರಿಯರು ಮಾಡುತ್ತಿದ್ದುದ್ದನ್ನೇ ನಾವೂ ಮಾಡುತ್ತಿದ್ದೇವೆ. ಇಡೀ ಲೋಕವು ಮಾಡುತ್ತಿರುವ ಆಚರಣೆಯ್ನನೇ ನಾವು ಮಾಡುತ್ತಿದ್ದೇವೆ. ಎಂದು ಸಂಪ್ರದಾಯವಾದಿಗಳು ಪ್ರಶ್ನಿಸಿದ್ದಾಗ ಗುರು ಬಸವಣ್ಣನವರು ಅವರಿಗೆ ಹೇಳಿದ ವಚನವಿದು. “ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ”? ವೇದಗಳಲ್ಲಿರುವ ತಪ್ಪು, ಶಾಸ್ತೃಗಳಲ್ಲಿರುವ ತಪ್ಪು, ಶ್ರುತಿ-ಸ್ಮೃತಿಗಳಲ್ಲಿರುವ ತಪ್ಪು, ಮನುಶಾಸ್ತ್ರದಲ್ಲಿರುವ ತಪ್ಪು ಇಡೀ ಲೋಕವೇ ಮಾಡುವ ತಪ್ಪನ್ನು ನೀವೇಕೆ ನಿಮ್ಮದೆಂಬಿರಿ? ಅದೇ ಲೋಕ ಮಾಡುವ ತಪ್ಪನ್ನು ನೀವೇಕೆ ಮಾಡುವಿರಿ? ನೀವಿಗ ತಿದ್ದಿಕೊಳ್ಳಿ. ನಾನು ಅವುಗಳನ್ನೆಲ್ಲ ಅಧ್ಯಯನ ಮಾಡಿದ್ದೇನೆ ಅವುಗಳು ತಪ್ಪು ಅದಕ್ಕಾಗಿ ನಾನು ಹೊಸ ಮಾರ್ಗ ನೀಡುತ್ತಿದ್ದೇನೆ. ಆ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ಮನಸ್ಸಿನ ಭಾವನೆಗಳನ್ನು ಬದಲಾಯಿಸಕೊಳ್ಳಿ ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ದೇವನೊಬ್ಬನನೇ ಕಾಣಿರೊ, ಇಬ್ಬರು ಮೂವರೆಂಬುದು ಹುಸಿ ನೋಡ...

ಬಸವಧರ್ಮ ಪೀಠವನ್ನು ಒಡೆಯಲು ಭಾಲ್ಕಿ ಶ್ರೀಗಳು ಮುಖ್ಯ ಕಾರಣರು ಎಂದು ಪೂಜ್ಯ ಚನ್ನಬಸವಾನಂದ ಮಹಾ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದ್ದಾರೆ.

ಇಮೇಜ್
ಬಸವಧರ್ಮ ಪೀಠವನ್ನು ಒಡೆಯಲು ಭಾಲ್ಕಿ ಶ್ರೀಗಳು ಮುಖ್ಯ ಕಾರಣರು ಎಂದು ಪೂಜ್ಯ ಚನ್ನಬಸವಾನಂದ ಮಹಾ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದ್ದಾರೆ. ---------- ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಲೋಕದ ಡೊಂಕ ತಿದ್ದಬಾರದೇ? (ಭಾಗ-4/7)

ಇಮೇಜ್
ವಚನದ ಮೂಲ ಪಾಠ ಹೀಗಿದೆ: ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ? ನಿಮ್ಮ ನಿಮ್ಮತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಈ ರೀತಿಯ ಒಂದು ಪಾಠಾಂತರ 1968ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಪ್ರಕಟವಾದ ವಚನ ಸಂಪುಟಗಳಲ್ಲಿದೆ. (ಪಾಠಾಂತರವೆಂದರೆ ಬೇರೆ ಕಾಲಕ್ಕೆ ಬೇರೆ ಬೇರೆ ಹಸ್ತಪ್ರತಿಗಳಲ್ಲಿ ಸಿಕ್ಕ ಅದೇ ವಚನದಲ್ಲಿರುವ ಬದಲಾವಣೆಗಳು ಎಂದು ಅರ್ಥ) ಏನೀ ಮೂಲ ವಚನದ ಅರ್ಥ? ಗುರು ಬಸವಣ್ಣನವರು ಸಮಾಜದಲ್ಲಿ ಪ್ರಚಲಿತವಿದ್ದ ತಪ್ಪು ತಪ್ಪಾದ ಆಚಾರ ವಿಚಾರಗಳನ್ನು ಮೂಢನಂಬಿಕೆಗಳನ್ನು ಖಂಡಿಸಿ ಅವುಗಳನ್ನು ತಿದ್ದಲೆತ್ನಿಸಿದಾಗ ಸಂಪ್ರದಾಯವಾದಿಗಳು ಗುರು ಬಸವಣ್ಣನವರೊಂದಿಗೆ ವಾದಿಸಿದ್ದಾರೆ. ಏನೆಂದು ವಾದಿಸಿದ್ದಾರೆ? ಋಗ್ವೇದದಲ್ಲಿ ಇಂದ್ರ, ಅಗ್ನಿ, ಸೋಮ, ಸೂರ್ಯರನ್ನು ಹಲವಾರು ದೇವತೆಗಳನ್ನು ಪೂಜಿಸಬೇಕು ಎನ್ನುವುದು ಬರೆದಿದೆ. ಆದ್ದರಿಂದ ನಾವು ಬಹುದೇವತೋಪಾಸನೆ ಮಾಡುತ್ತೇವೆ. ಅದನ್ನು ತಾವು ತಪ್ಪೆಂದು ಏಕೆ ಹೇಳುವಿರಿ? ಯಜ್ಞಗಳಲ್ಲಿ ಹೋತ ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಡಬೇಕು, ತುಪ್ಪ ಪೀತಾಂಬರ ಹಣ್ಣು ಕಡಬು ಉಣ್ಣುವ ಪದಾರ್ಥಗಳನ್ನು ಹಾಕಿ ಸುಡಬೇಕು ಎಂದು ಯಜುರ್ವೇದದಲ್ಲಿ ಬರೆಯಲಾಗಿದೆ. ಅದನ್ನೇನಾವು ಮಾಡುತ್ತಿದ್ದೇವೆ. ಅದನ್ನು ತಪ್ಪೆಂದು ಹೇಗೆ ಹೇಳುವಿರಿ? ಮಂತ್ರ ತಂತ್ರಗಳೆಲ್ಲ ಅಥರ್ವ ವೇದದಲ್ಲಿ ಹೇಳಲ್ಪಟ್ಟಿವೆ. ಪೂಜೆ ವಿಧಾನವೆಲ್ಲ ಸಾಮವೇದಲ್ಲಿ ಹ...

ಲೋಕದ ಡೊಂಕ ತಿದ್ದಬಾರದೇ? (ಭಾಗ-3/7)

ಇಮೇಜ್
  ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಇದು ವಚನ ಸಂಪುಟಗಳಲ್ಲಿ ಪ್ರಕಟವಾದ ಗುರು ಬಸವಣ್ಣನವರ ಒಂದು ವಚನ. ಈ ವಚನದ ಮೊದಲ ಸಾಲು ಈ ಮೊದಲು, ಲೋಕವನ್ನು ತಿದ್ದಿದವರ ನಡೆಯನ್ನು ಪ್ರಶ್ನಿಸುವಂತಿದೆ. ಈ ವಚನದ ಪ್ರಕಾರ ಲೋಕದ ಡೊಂಕನ್ನು ನಾವು ತಿದ್ದಬಾರದೇ? ಕೇವಲ ನಾವು ನಾವೇ ಸುಧಾರಿಸಿಕೊಂಡು, ಇಷ್ಟಲಿಂಗಯೋಗಮಾಡಿಕೊಂಡು, ನಮ್ಮತನುವನ್ನು, ದಿನನಿತ್ಯ ಉತ್ತಮ ಚಿಂತನೆಗಳನ್ನು ಮಾಡಿಕೊಂಡು, ಮೂರು ಹೊತ್ತು ಇಷ್ಟಲಿಂಗ ಪೂಜೆ ಎರಡು ಹೊತ್ತು ಅನುಭಾವ ಗೋಷ್ಠಿಗಳನ್ನು ಮಾಡಿಕೊಂಡು ನಮ್ಮ ಮನಸ್ಸನ್ನು ಸಂತೈಸಿಕೊಂಡರೆ ಸಾಕೇ? “ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವಾ” ಎನ್ನುವ ವಚನದ ಸಾಲು ಮೊದಲನೆಯಸ ಸಾಲಿನ ಅರ್ಥಕ್ಕೆ ವಿರುದ್ದವಾಗಿದೆ.  ನೆರೆಮನೆಯವರು ಧರ್ಮಸಮ್ಮತವಲ್ಲದ ಆಚರಣೆಗಳನ್ನು ಮಾಡಿ ದುಃಖವನ್ನು ತಂದುಕೊಂಡಾಗ, ಧರ್ಮಸಮ್ಮತವಲ್ಲದ ನಡೆಯನ್ನು ನಡೆದು ಸಂಘಟನೆಗಳ ಪದವಿಯಿಂದ ಪದಚ್ಯುತಿ ಹೊಂದಿ ದುಃಖ ಪಡುತ್ತಿರುವಾಗ, ಇದು ಅವರ ಕರ್ಮ ಅವರವರು ಮಾಡಿದ ಕರ್ಮ ಅವರು ಅನುಭವಿಸುತ್ತಾರೆ ಎಂದು ಮರುಗಿದರೆ ಲಿಂಗದೇವರು ಮೆಚ್ಚುವುದಿಲ್ಲ. ಬದಲಿಗೆ ಅಂಥವರಿಗೆ ಮಠ ಪೀಠ ಪ್ರತಿಷ್ಠಾನಗಳ ಒಡೆಯರು ಇಂತಹ ನಿನ್ನ ನಡೆ ತಪ್ಪಿದೆ. ನೀನು ಬಹುದೇವತೋಪಾಸನೆ ಮಾಡಬಾರದು, ಗಣೇಶ ಉತ್ಸವಗಳಲ್ಲಿ ಹೋಗಿ ಕುಣಿಯಬಾರದು. ...

ಲೋಕದ ಡೊಂಕ ತಿದ್ದಬಾರದೇ? (ಭಾಗ-2/7)

ಇಮೇಜ್
ಪೂಜ್ಯ ಶ್ರೀ ವಿಶ್ವಗುರು ಬಸವಣ್ಣನವರು 880 ವರ್ಷಗಳಹಿಂದ ಅಂದರೆ ಹನ್ನೆರಡನೆ ಶತಮಾನದಲ್ಲಿ ಲೋಕದ ಡೊಂಕ ತಿದ್ದಿದ ಪರಿ ಗೊತ್ತಿರದವರು ಈ ಜಗತ್ತಿನಲ್ಲಿ ಯಾರಿದ್ದಾರೆ? ಗುರು ಬಸವಣ್ಣನವರು ಲೋಕದಲ್ಲಿ ಹುಟ್ಟುತ್ತಲೇ ಲೋಕದ ಡೊಂಕ ತಿದ್ದಿದವರು. ಬೆಳೆದು ದೊಡ್ಡವರಾಗುತ್ತ ಲೋಕದ ಡೊಂಕ ತಿದ್ದಲೆತ್ನಿಸಿದರು. ಲೋಕದ ಡೊಂಕ ತಿದ್ದುವಿಕೆ ಅವರಿಗೆ 8ನೇ ವಯಸ್ಸಿಗೆ ಮನೆ ಬಿಡುವಂತೆ ಮಾಡಿತು. ಮನೆ ತೊರೆದರೇ ವಿನಃ ಲೋಕದ ಡೊಂಕನ್ನು ತಿದ್ದುವುದನ್ನು ತೊರೆಯಲಿಲ್ಲ. ಲೋಕದ ಡೊಂಕ ತಿದ್ದುತ್ತ ಡೊಂಕಿರದ ಮಾರ್ಗವಾದ ಲಿಂಗಾಯತ ಧರ್ಮವನ್ನು ತಮ್ಮ ಜೀವಮಾನದಲ್ಲೇ ಕಟ್ಟಿಕೊಟ್ಟರು. ಲೋಕದ ಡೊಂಕು ತಿದ್ದುವಿಕೆಗೆ ಅವರು ಬಹು ದೊಡ್ಡ ತ್ಯಾಗ ಮಾಡಿದರು. ಲೋಕದ ಡೊಂಕ ತಿದ್ದುವಿಕೆಗೆ ಗುರು ಬಸವಣ್ಣನವರು ತೆತ್ತ ಬೆಲೆ ಪ್ರಧಾನಿ ಪಟ್ಟ. ಲೋಕದ ಡೊಂಕ ತಿದ್ದಲಿಕ್ಕೆ ಹರಳಯ್ಯ ಮಧುವಯ್ಯ ಶೀಲವಂತರು ತೆತ್ತ ಬೆಲೆ ತಮ್ಮ ಪ್ರಾಣ. ಲೋಕದ ಡೊಂಕ ತಿದ್ದಿದ್ದುಕ್ಕಾಗಿ ಗುರು ಬಸವಣ್ಣಣವರು ಪಡೆದ ಶಿಕ್ಷೆ ಕಲ್ಯಾಣವನ್ನು ತೊರೆಯುವ ಗಡಿಪಾರು ಶಿಕ್ಷೆ. ಆದಿ ಶರಣರು ಪಡೆದ ಪ್ರತಿಫಲ ತಲೆದಂಡ ಮತ್ತು ಉಟ್ಟ ಬಟ್ಟೆಯಲ್ಲಿಯೇ ರಾತ್ರೋರಾತ್ರಿ ವಚನ ಸಾಹಿತ್ಯದ ಗಂಟು ಹೊತ್ತು ಕಲ್ಯಾಣ ತೊರೆಯುವ ಅನಿವಾರ್ಯತೆ. ಗುರು ಬಸವಣ್ಣನವರು ಹಾಗು ಆದಿ ಶರಣರು ಲೋಕದ ಡೊಂಕ ತಿದ್ದುವುದಕ್ಕಾಗಿ ಕಲ್ಯಾಣ ತೊರೆದರೇ ಹೊರತು ಲೋಕದ ಡೊಂಕ ತಿದ್ದುವುದನ್ನು ತೊರೆಯಲಿಲ್ಲ. ಏಕೆಂದರೆ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮ...

ಲೋಕದ ಡೊಂಕ ತಿದ್ದಬಾರದೇ..?! (ಭಾಗ-1/7)

ಇಮೇಜ್
ಭಾಗ : ೧ * ಪ್ರಾಗೈತಿಹಾಸಿಕ(Prehistoric) ಕಾಲದಿಂದಲೂ ಈ ಮರ್ತ್ಯಲೋಕದಲ್ಲಿ ಅನೇಕ ಪ್ರವಾದಿಗಳು, ಮಹಾತ್ಮರು, ಸಜ್ಜನರು ಲೋಕದ ಡೊಂಕನ್ನು ತಿದ್ದಿದ್ದಾರೆ. ಅಂತೆಯೇ ಕರ್ತಾರನ ಕಮ್ಮಟವಾದ ಈ ಮರ್ತ್ಯ ಲೋಕ ಇಷ್ಟೊಂದು ಸುಂದರವಾಗಿದೆ. ಅಲ್ಲಲೇ ಅಮಾನವೀಯತೆಯ ನಡುವೆ ಮಾನವೀಯತೆಗಳು, ಕ್ರೌರ್ಯದ ನಡುವ ದಯೆ, ಕರುಣೆಗಳು; ದುರ್ಭಾವದ ನಡೆವೆ ಸದ್ಭಾವಗಳು, ಮೂಢ ಭಕ್ತಿಯ ನಡುವೆ ಸದ್ಭಕ್ತಿಗಳು; ಪರಪೀಡನೆಯ ನಡುವೆ ಪರೋಪಕಾರಗಳು, ಕೃತಘ್ನತೆಯ ನಡುವೆ  ಕೃತಜ್ಞತೆನೆಗಳು ವಿಶ್ವಾಸ ದ್ರೋಹದ ನಡುವೆ ವಿಶ್ವಾಸ ನಂಬಿಕೆಗಳು ಇಂತಹ ಇನ್ನೂಅನೇಕ ವೈರುಧ್ಯಗಳ ನಡುವೆ ಸುವಿಚಾರಗಳು ಸತ್‌ ಚಿಂತನೆಗಳು ಲೋಕದ ಡೋಂಕ ತಿದ್ದಿದ್ದರಿಂದಲೇ ಜೀವಂತವಾಗಿವೆ. * 2585 ವರ್ಷಗಳ (ಕ್ರಿ.ಪೂ.560 ರಲ್ಲಿ) ಹಿಂದೆಯೇ ಪೂಜ್ಯ ಶ್ರೀ ಮಹಾವೀರರು ಲೋಕದ ಡೊಂಕನ್ನು ತಿದ್ದಿದ್ದಾರೆ. ಜಾತಿ ಪದ್ದತಿಯನ್ನು ವಿರೋಧಿಸಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದಾಗ, ಬ್ರಾಹ್ಮಣರೇ ಸರ್ವ ಶ್ರೇಷ್ಠ, ವೇದಗಳೇ ಸರ್ವಶ್ರೇಷ್ಠ ಎನ್ನುವುದನ್ನು ಒಪ್ಪದೇ ಇದ್ದಾಗ, ಪ್ರಾಣಿಬಲಿ ಮಾಡುವುದನ್ನು ವಿರೋಧಿಸಿದಾಗ, ಅಹಿಂಸೆ(Non violence)ಯನ್ನು ಪ್ರತಿಪಾದಿಸಿದಾಗ, ವೇದಜರಿಂದ ಕಿರುಕುಳಕ್ಕೊಳಗಾದರು. ತೊಂದರೆಗೊಳಗಾದರು. ಆದರೂ ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ.  ಅವರು ಲೋಕವನ್ನು ತಿದ್ದಿದ ಸಿದ್ಧಾಂತಗಳ ಸಮೂಹವೇ ಜೈನ ಧರ್ಮವಾಯಿತು. * 2565 ವರ್ಷಗಳ (ಕ್ರಿ.ಪೂ.540ರಲ್ಲಿ) ಹಿಂದೆಯೇ ಪೂಜ...

ಧರ್ಮ ಪರಂಪರೆ/ವಚನ ಸಾಹಿತ್ಯ ಅರಿಯದವರು ಧರ್ಮಾಚರಣೆಯಲ್ಲಿ ಎಡಹುವುದು ಸಹಜ -ಆದರೆ ತಿದ್ದಿಕೊಳ್ಳಬೇಕು

ಇಮೇಜ್
(ಗಂಭೀರ ವಿಚಾರವಿದೆ ಸಮಯಮಾಡಿಕೊಂಡು ದಯವಿಟ್ಟು ಓದಿರಿ) ಯಾವುದೇ ಸ್ವತಂತ್ರ ಧರ್ಮದ 11 ಲಕ್ಷಣಗಳಲ್ಲಿ ಧರ್ಮ ಪರಂಪರೆಯೂ ಒಂದು ಪ್ರಮುಖ ಲಕ್ಷಣ. ಧರ್ಮ ಪರಂಪರೆ ನಮಗೆ ಏನು ಕಲಿಸಿಕೊಡುತ್ತದೆ? ನಡೆ ನುಡಿ ಆಚಾರ ವಿಚಾರಗಳನ್ನು ಕಲಿಸಿಕೊಡುತ್ತದೆ. ಪ್ರಮುಖವಾಗಿ ಕೆಲವೊಂದು ಇಕ್ಕಟ್ಟಿನ ಸಂದರ್ಭಗಳಲ್ಲಿ ನಮ್ಮ ನಡೆ(Behavior) ಹೇಗಿರಬೇಕು ಎನ್ನುವುದನ್ನು ಕಲಿಸುತ್ತದೆ. 12ನೇ ಶತಮಾನದಲ್ಲಿ ಗುರು ಬಸವಣ್ಣನವರ ಕೀರ್ತಿ ದೆಸೆ ದಿಕ್ಕಿಗೆಲ್ಲ ಪಸರಿಸಿದಾಗ. ಅವರನ್ನು ಅರಸಿಕೊಂಡು ಗುರು ಅಲ್ಲಮಪ್ರಭುದೇವರು ಗುರು ಬಸವಣ್ಣನವರ ಮಹಾಮನೆಗೆ ಸುಪ್ರಭಾತ ಸಮಯದಲ್ಲಿ ಆಗಮಿಸಿದ್ದಾರೆ. ಆಗ ತಾನೆ ಗುರು ಬಸವಣ್ಣನವರು ಮಹಾಮನೆಯಲ್ಲಿ ಇಷ್ಟಲಿಂಗ ಪೂಜೆಗೆ ಕುಳಿತಿದ್ದಾರೆ. ಇನ್ನೂ ಪೂಜೆ ಆರಂಭವಾಗಿಲ್ಲ. ಆಗ ಹಡಪದ ಅಪ್ಪಣ್ಣನವರು ಹೊರಗಡೆ ಬಂದ ಮಹಿಮರನ್ನು ನೋಡಿ, "ಯಾರೋ ಮಹಾತ್ಮರು ಬಂದಿದ್ದಾರೆ ಅವರನ್ನು ಸ್ವಾಗತಿಸಲಿಕ್ಕೆ ಬನ್ನಿ" ಎಂದು ಗುರು ಬಸವಣ್ಣನವರಲ್ಲಿ ವಿನಂತಿಸುತ್ತಾರೆ. "ನೀವೆ ಕರೆದುಕೊಂಡು ಬನ್ನಿ ನಾನೀಗ ಇಷ್ಟಲಿಂಗ ಪೂಜೆ ಮಾಡಬೇಕು" ಎಂದು ಗುರು ಬಸವಣ್ಣನವರು ಹೇಳುತ್ತಾರೆ. ಆಗ ಶರಣ ಹಡಪದ ಅಪ್ಪಣ್ಣನವರು ಗುರು ಅಲ್ಲಮಪ್ರಭುದೇವರನ್ನು ಸ್ವಾಗತಿಸಲು ಹೋಗುತ್ತಾರೆ. ಆಗ ಗುರು ಅಲ್ಲಮಪ್ರಭುದೇವರು ಬರುವುದಿಲ್ಲ. ಗುರು ಬಸವಣ್ಣನವರೇ ನನ್ನನ್ನು ಆಹ್ವಾನಿಸಲು ಬರಬೇಕು ಎನ್ನುತ್ತಾರೆ. ಆಗ ಗುರು ಬಸವಣ್ಣನವರು : ವಚನ: ಕಾಯದ ಕೈಯಲ್ಲಿ ಕರಸ...

ಗುರು ಬಸವಣ್ಣನವರ ಬೋಧನೆಗಳ ಕುರಿತು

ಇಮೇಜ್
12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಇಂದಿನ ಪ್ರಸ್ತುತತೆಯನ್ನು ಅನುಮೋದಿಸುವ ಸಲುವಾಗಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE), ತಾಂತ್ರಿಕ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು AICTE-ಅನುಮೋದಿತ ಸಂಸ್ಥೆಗಳ ಉಪಕುಲಪತಿಗಳಿಗೆ ಅವರ ತತ್ವಶಾಸ್ತ್ರ, ಆಡಳಿತ ಮಾದರಿಗಳು ಮತ್ತು ಕ್ರಾಂತಿಕಾರಿ ಚಿಂತಕರ ಸಾಮಾಜಿಕ ಸುಧಾರಣಾ ಕಾರ್ಯಸೂಚಿಯನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ಸಂಶೋಧಿಸಲು ನಿರ್ದೇಶನ ನೀಡಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಬಂದಿರುವ ಸಂವಹನದಲ್ಲಿ, AI-CTE ಶೈಕ್ಷಣಿಕ ಜಗತ್ತು ಆಧುನಿಕ ಭಾರತಕ್ಕಾಗಿ ಗುರು ಬಸವೇಶ್ವರರ ಬೋಧನೆಗಳನ್ನು ಎತ್ತಿ ತೋರಿಸಬೇಕೆಂದು ಒತ್ತಾಯಿಸಿದೆ. ಭಾರತವು ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಕೇಂದ್ರೀಕೃತ ಆಡಳಿತದ ಹೊಸ ಮಾದರಿಗಳನ್ನು ಹುಡುಕುತ್ತಿರುವ ಸಮಯದಲ್ಲಿ, ನವ ಸಮಾಜ ನಿರ್ಮಾಪಕ ಗುರು ಬಸವೇಶ್ವರರ ಆಮೂಲಾಗ್ರ ವಿಚಾರಗಳನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಪುನರುಜ್ಜೀವನಗೊಳಿಸುತ್ತಿವೆ. ಬಸವೇಶ್ವರರ ತತ್ವಶಾಸ್ತ್ರದ ಕುರಿತು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಸಂಶೋಧನಾ ಯೋಜನೆಗಳು, ಅವರ ಅನುಭವ ಮಂಟಪ' ಭಾಗವಹಿಸುವ ಸ್ಥಳೀಯ ಆಡಳಿತದ ಅನುಭವ ಪರಿಶೋಧನೆ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ ಮತ್ತು ಜಾತಿ ಆಧಾರಿತ ತಾರತಮ್ಯ ಮತ್ತು ದೌರ್ಜನ್ಯಗಳು ನಿರ್ಮೂಲನೆಗಾಗಿ ಅವರ ಹೋರಾಟದ ಅಧ್ಯಯನಗಳು ಮತ್...

ಗುರು ಬಸವಣ್ಣನವರ ಜಿವನ ಆಧಾರಿತ ಚಿತ್ರಗಳ ಆರ್ಟ ಗ್ಯಾಲರಿ ಲೋಕಾರ್ಪಣೆ : ಜುಲೈ 6, 2025 ರಂದು

ಇಮೇಜ್
  ಬಸವ ಗುರುವಿನ ತತ್ವ ಲೋಕದಿ ಹಬ್ಬಲಿ, ಮನುಜ ಕಲ್ಪಿತ ಜಾತಿ ಹೆರೆ ತೊಲಗಿ ಹೊಗಲಿ. - ಮಾತಾಜಿ ಆರ್ಟ ಗ್ಯಾಲರಿ ವಿಳಾಸ : ಸಿ.ಬಿ ಸೊಮಶಟ್ಟಿ ಚಿತ್ರಾಲಯ, ವಾಸು ಆಸ್ಪತ್ರೆ ಹತ್ತರ, ಬಸವ ನಗರ, ಬೀದರ್. : https://maps.app.goo.gl/4Zoa11Ghj5d26h146 Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ