ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಆದಿ ಗುರು

ಇಮೇಜ್
ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿಕೊಂಡು, ಕಡ್ಡಾಯವಾದ ಧರ್ಮ ಸಂಸ್ಕಾರ ಪಡೆದು, ಜಾತಿವರ್ಣ ವರ್ಗಗಳನ್ನೊಪ್ಪದ ವಿಚಾರ- ಆಚಾರ ಸಂಹಿತೆ ಪ್ರಾರಂಭವಾದುದು ಬಸವಣ್ಣನವರಿಂದಲೇ ! ಅವರಿಗಿಂತ ಮೊದಲಿಗೆ ಇದ್ದುದು ಶೈವ ಧರ್ಮ. ಇದು ವೇದಪೂರ್ವಕಾಲದ, ಹರಪ್ಪ ಮೊಹೆಂಜೊದಾರೊ ಸಂಸ್ಕೃತಿಯ ಕಾಲದಿಂದ ಪ್ರಚಲಿತವಿದೆ. ಸಂಪೂರ್ಣ ಹೊಸ ಅರ್ಥ, ತತ್ತ್ವಜ್ಞಾನ, ಧೋರಣೆಯನ್ನು ಒಳಗೊಂಡ ಇಷ್ಟ ಲಿಂಗಧಾರಣೆಯ ಸಂವಿಧಾನ ಆರಂಭವಾದುದು ಬಸವಣ್ಣನವರಿಂದ ! ಅವರು ಆದ್ಯರಾದುದರಿಂದಲೇ ಅವರ ಹೆಸರು ಮಂತ್ರವಾಯಿತು . - ಪೂಜ್ಯ ಶ್ರೀ ಮಾಹಾ ಜಗದ್ಗುರು ಮಾತೆ ಮಹಾದೇವಿಯವರು Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

25 May 2025 ರಂದು (ಹುಬ್ಬಳ್ಳಿಯಲ್ಲಿ ಸಾಮೂಹಿಕ ಲಿಂಗಾಯತ ಧರ್ಮ ದೀಕ್ಷೆ ಕಾರ್ಯಕ್ರಮ*

ಇಮೇಜ್
ಶರಣ ಸಾಹಿತಿಗಳಾದ ಶರಣ ಸಚ್ಚಿದಾನಂದ ಚಟ್ನಳ್ಳಿ ಯವರು ತಮ್ಮ ಮಗ ಸರ್ವಜ್ಞ ಲಿಂಗಾಯತ ಇವರಿಗೆ 8ನೇ ವಯಸ್ಸಿಗೆ ಕೊಡುವ ಧರ್ಮ ಸಂಸ್ಕಾರವಾದ ಇಷ್ಟಲಿಂಗದೀಕ್ಷೆ ಕಾರ್ಯಕ್ರಮ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಆಯೋಜಿಸಿದ್ದಾರೆ. ಈ ನಿಮಿತ್ತವಾಗಿ ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಯರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ಮನುಗುಂಡಿಯ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ, ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ ಸ್ವಾಮೀಜಿ, ಉಡುಪಿಯ ಅಲ್ಲಮ ಪ್ರಭು ಅನುಭಾವ ಪೀಠದ ಪೀಠಾಧಿಪತಿಗಳಾದ ಶರಣ ಜಗನ್ನಾಥ ಪನಸಾಲೆಯವರು , ಮಂಡ್ಯದ ಪೂಜ್ಯ ಶ್ರೀ ಓಂಕಾರೇಶ್ವರ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನರಜನ್ಮಕ್ಕೊಮ್ಮೆ ಬಂದ ಬಳಿಕ, ಗುರುವಿನ ಕುರುಹ ಕಾಣಬೇಕು. ಗುರುವಿನ ಕುರುಹ ತಾ ಕಂಡ ಬಳಿಕ, ಶಿಷ್ಯನಾಗಿ ಗುರುಕರಜಾತನಾಗಬೇಕು. ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು, ಘಟ್ಟಿವಾಳಯ್ಯಾ ಲಿಂಗಾಯತ ಧರ್ಮದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಯಾವುದೇ ಜಾತಿ ಮತ ಪಂಥದಲ್ಲಿ ಹುಟ್ಟಿದ ವ್ಯಕ್ತಿ ಲಿಂಗಾಯತನಾಗಲಿಕ್ಕೆ ಇರುವ ಏಕೈಕ ಸಾಧನ ಇಷ್ಟಲಿಂಗ ದೀಕ್ಷೆ. ಇಷ್ಟಲಿಂಗ ದೀಕ್ಷೆಯಲ್ಲಿ ಸ್ವತಃ ವ್ಯಕ್ತಿಯೇ ಗುರುವಿನಿಂದ ಇಷ್ಟಲಿಂಗವನ್ನು ಪಡೆದು ಗುರುವಿನ ಹಸ್ತದಲ್ಲಿ ಹುಟ್ಟನ್ನ...

ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ

ಇಮೇಜ್
  ವಚನ :  ವಾಯುಗುಣವ ಸರ್ಪಬಲ್ಲುದು, ಮಧುರಗುಣವ ಇರುವೆ ಬಲ್ಲುದು, ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆಯ ಗುಣವ ಕೋಳಿ ಬಲ್ಲುದು, ಮಾನವನಾಗಿ ಹುಟ್ಟಿದ ಬಳಿಕ ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ ಕಾಣಾ ಕಲಿದೇವರ ದೇವಾ.” ವಾಯುವನ್ನೇ ಆಹಾರವನ್ನಾಗಿಸಿಕೊಂಡು ಜೀವನ ನಿರ್ವಹಣೆ ಮಾಡಬಲ್ಲ ವಿಶಿಷ್ಟ ಶಕ್ತಿ ಸರ್ಪಕ್ಕಿದೆಯೆಂದು ಪ್ರತೀತಿಯಿದೆ. ಮಧುರ ಗುಣವನ್ನು ದೂರದಿಂದಾದರೂ ಅರಿಯಬಲ್ಲ ವಿಶಿಷ್ಟವಾದ ಶಕ್ತಿ ಇರುವೆಗಿದೆಯೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರಲು ಸಾಕು, ಎಲ್ಲಿಯಾದರೂ ಸಿಹಿ ಪದಾರ್ಥವನ್ನಿಟ್ಟರೆ ಆಗಲೇ ಇರುವ ಗಳು ಬಂದು ಆಮಂತ್ರಿಸಿದವರಂತೆ ಮುಕುರುವವು. ಅಷ್ಟೇ ಏಕೆ, ಗಿಡದಲ್ಲಿರುವ ಹಲಸಿನಕಾಯಿ ಹಣ್ಣಾಗಿವೆಯೋ ಇಲ್ಲವೋ ಎಂಬುದನ್ನು ಗಿಡದ ಬೊಡ್ಡೆ ಮೂಸಿನೋ ಡಿಯೇ ಇರುವೆ ತಿಳಿಯುತ್ತದೆಯಂತೆ! ಹಣ್ಣಿದ್ದರೆ ಏರಿ ಹೋಗುತ್ತದಂತೆ. ಇಲ್ಲವಾದರೆ ಇರುವೆ ಗಿಡವನ್ನು ವ್ಯರ್ಥವಾಗಿ ಏರಲಾರದು ! ಕಾಗೆಯ ಬಳಗವೆಂದು ಸಾಮಾನ್ಯವಾಗಿ ಬಳಸುವರು. ಅದಕ್ಕೆ ತನ್ನ ಗೋತ್ರದ ಜ್ಞಾನ ತುಂಬಾ ಜಾಗ್ರತವಾಗಿರುತ್ತದಂತೆ. ಕೋಳಿಗೆ ಸಮಯ ಜ್ಞಾನವಿರುತ್ತದೆಂಬುದನ್ನು ಸಾಮಾನ್ಯವಾಗಿ ಹಳ್ಳಿಗರೆಲ್ಲರೂ ಬಲ್ಲವ ರಾಗಿದ್ದಾರೆ. ಕೋಳಿ ಕೂಗಿದಾಗ ಎದ್ದು ಹೊಲದ ಕೆಲಸಕ್ಕೆ ಹಳ್ಳಿಗರು ಹೋಗುವುದು ಇಂದಿಗೂ ರೂಢಿಯಲ್ಲಿದೆ. ಹಿಂದಿನ ಕಾಲದಲ್ಲಿ ಕೋಳಿಗಳೇ ಗಡಿಯಾರಗಳಾಗಿ ಕೆಲಸ ಮಾಡುತ್ತಿದ್ದವಷ್ಟೆ. ಈ ಪ್ರಾಣಿಗಳು ಒಂದೊಂದು ವಿಶಿಷ್ಟ ಗುಣವನ್ನು...

ಬಂಧನದಿಂದ ಮುಕ್ತವಾಗಲಿದೆ : ಗುರು ಬಸವಣ್ಣನವರ ಮೂರ್ತಿ

ಇಮೇಜ್
 ಈ ರೀತಿ ವಿಡಿಯೋ ಮೂಲಕ ಬೆಂಗಳೂರಿನ ಬಸವಗಂಗೋತ್ರಿ ಯಲ್ಲಿ ಗುರುಬಸವಣ್ಣನವರ ಮೂರ್ತಿ ನಿರ್ಮಾಣಕ್ಕಾಗಿ ಕಾಣಿಕೆ ಕೊಟ್ಟವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ. ಆದರೆ "ಹಣದ ಕೊರತೆಯಿಂದ ಮೂರ್ತಿ ಕೆಲಸ ಅರ್ಧಕ್ಕೆ ನಿಂತಿತ್ತು" ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಎಷ್ಟು *ಸೂಕ್ತ?* ಇದರಿಂದ ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತಾ ಇದ್ದೀರಿ? ಪರಮಪೂಜ್ಯ ಮಾತೆಮಹಾದೇವಿಯವರು ಪ್ರಾರಂಭಿಸಿ ಹೋಗಿರುವ ಒಂದು ಮೂರ್ತಿಯ ನಿರ್ಮಾಣವನ್ನು ಪೂರ್ಣಗೊಳಿಸುವ *ಶಕ್ತಿ, ಸಾಮರ್ಥ್ಯ* ಅವರ ಅನುಯಾಯಿಗಳಲ್ಲಿ ಇಲ್ಲವೇ? ಎಂಬ ಪ್ರಶ್ನೆ/ಅನುಮಾನ ಸಮಾಜದ ಜನರಲ್ಲಿ ಮೂಡುತ್ತದೆ.  ಹಾಗಾದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯ ಆದಮೇಲೆ ಮೊದಲಿನ ಹಾಗೆ *ಕಾಣಿಕೆ* ಬರುವುದು ನಿಂತುಬಿಟ್ಟಿದೆಯೇ? ಒಂದು ವೇಳೆ ಕಾಣಿಕೆ ಬರುವುದು ನಿಂತುಬಿಟ್ಟಿದ್ದರೆ ಇದಕ್ಕೆ *ಕಾರಣಗಳೇನು?* ಅಥವಾ ಕಾಣಿಕೆ ಬರುತಿದ್ದರೆ ಅನಾವಶ್ಯಕ ಚಟುವಟಿಕೆಗಳಿಗೆ *ವ್ಯರ್ಥ* (ಐಷಾರಾಮಿ ಕಾರುಗಳು, ಕೋರ್ಟ್, ಕಚೇರಿ, ಕೇಸ್ etc) ಮಾಡಲಾಗುತ್ತಿದೆಯೇ? ಈ ರೀತಿಯ ಪ್ರಶ್ನೆಗಳು ಸಮಾಜದ ಜನರಲ್ಲಿ ಮೂಡುತ್ತವೆ.  ಪೂಜ್ಯ ಮಾತೆಮಹಾದೇವಿಯವರು ಬೆಳೆಸಿ ಹೋಗಿರುವ *ಒಬ್ಬೊಬ್ಬ* ನಿಷ್ಠಾವಂತ ಶರಣರಲ್ಲಿ ಕನಿಷ್ಠ ಒಂದು ಲಕ್ಷ ಕಾಣಿಕೆಯನ್ನು *ಸಂಗ್ರಹ* ಮಾಡುವ *ಸಾಮರ್ಥ್ಯ* ಇದೆ. ಇಂತಹ ಸಾವಿರಾರು ನಿಷ್ಠಾವಂತ ಶರಣರನ್ನು  ಪೂಜ್ಯ ಮಾತಾಜಿ ಅವರು ಬೆಳೆಸಿ ಹೋಗಿದ್ದಾರೆ. ಆದರೆ ಅಂತಹ ನ...