ಬಸವ ಧರ್ಮದ ಗತ್ತು ಬೇರೆನೇ ಇತ್ತು…
ಇಂದು ಬೆಳಗ್ಗೆ ಟಿಫನ್ ಮಾಡ್ತಾ ಇರುವಾಗ ನಮ್ಮ ಮಾಮ ಕೇಳಿದ್ರು. ಮಾಮ: ಏನ್ರಿ ವಿಶ್ವನಾಥ, ಕೆನ್ನೇರಿ ಸ್ವಾಮಿ ಏನೋ ಬಹಳ ಹಗುರವಾಗಿ ಮಾತಾಡಿದ್ರಂತೆ. ಏನದು? ವಿಶ್ವನಾಥ : ಏನ್ ಹೇಳೋದ್ರಿ ಮಾಮ, ಇಂಥ ಸ್ವಾಮಿಗಳು ಒಬ್ಬರಲ್ಲ. ತುಂಬ ಜನ ಇದ್ದಾರೆ. ಒಬ್ಬ ಕೆನ್ನೇರಿ, ಒಬ್ಬ ಸದಾಶಿವಾನಂದ ಸ್ವಾಮಿ, ಮತ್ತೊಬ್ಬ ಯತ್ನಾಳ. ಮನಸ್ಸಿಗೆ ಬಂದಹಾಗೆ ಮಾತಾಡ್ತಾರೆ. ಮಾಮ : ಅಲ್ಲಾ ವಿಶ್ವನಾಥ, ಇಷ್ಟ ದೊಡ್ಡ ಲಿಂಗಾಯತ ಒಗ್ಗೂಟ ಇದೆ, ದೊಡ್ಡ ದೊಡ್ಡ ಮಠದ ಸ್ವಾಮಿಗಳು ಇದ್ದಾರೆ. ಅಂದ್ಮೇಲೆ ಇಂಥ ಟೀಕೆ–ಟಿಪ್ಪಣಿ ಬರೋದಾ? ವಿಶ್ವನಾಥ : ನಾವು ಒಗ್ಗಟ್ಟಿಲ್ಲಾ ಅಂದ್ರೆ, ಇಂಥ ಗುದ್ದಾಟ ಸಹಜ. ಇವತ್ತು ಈ ಸ್ವಾಮಿ ಹೇಳ್ತಾನೆ, ನಾಳೆ ಮತ್ತೊಬ್ಬ ಹೇಳ್ತಾನೆ. ಮಾವ : ಅಂದ್ರೆ ಮತ್ತೆ ಏನ್ ಮಾಡ್ತೀರಿ? ವಿಶ್ವನಾಥ : ನಾವು ಉತ್ತರ ಕೊಡ್ತಾ ಇರ್ತೀವಿ ಮಾಮ. ನಮ್ಮಂಥವರು ಇರೋವರೆಗೂ ಕೊಡ್ತೀವಿ. ನಾವಿಲ್ಲ ಅಂದ್ರೆ ನಮ್ಮ ಮಕ್ಕಳು ಕೊಡ್ತಾರೆ, ಅವರ ಮಕ್ಕಳು ಮುಂದಕ್ಕೆ ಕೊಡ್ತಾರೆ. ಮಾಮ : ಮಕ್ಕಳೇನು ಉತ್ತರ ಕೊಡ್ತಾರೆ ರಿ? ಎಲ್ಲಾ ಬಸವಪರ ಸಂಘಟನೆಗಳಲ್ಲಿ ಬರೀ ಬಿಳಿ ಕೂದಲವರು, ತಲೆಗೋಳಿ ಜನರೇ ತುಂಬಿರ್ತಾರೆ. ರಾಷ್ಟ್ರೀಯ ಬಸವದಳದಲಗಲ್ಲಿ ಅಲ್ಲಿ ಇಲ್ಲಿ ಕೆಲ ಹುಡುಗರು ಕಾಣಿಸ್ತಾರೆ ಅಷ್ಟೇ. ಅದನ್ನ ಬಿಟ್ಟರೆ ಯಾವ ಸಂಘಟನೆಯಲ್ಲಿ ಯುವಕರು ಇದ್ದಾರೆ ಹೇಳ್ರಿ? ವಿಶ್ವನಾಥ : ಅದು ನಿಜ ಮಾತು ಮಾಮ. ಚೆನ್ನಾಗಿರೋ ಸಂಘಟನೆಗಳನ್ನು ಒಡೆದವರು ಯಾರು? ನಮ್ಮ ಲಿಂಗಾಯತ ಕಾವಿಧಾರಿಗಳೇ ತಾನೆ....