ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಸ್ಕಾರ ಮತ್ತು ಸಂಘಟನೆ

ಇಮೇಜ್
(ಸಂಘಟನೆಗಳ ಸಮಾವೇಶ ಮಾಡುವವರಿಗೆ ಕೈದೀವಿಗೆ) ನಾವು  ಶ್ರೇಷ್ಠವಾದ ಲಿಂಗಾಯತ ಧರ್ಮದ ಅನುಯಾಯಿಗಳು. ಶರಣ ಪರಂಪರೆಯ ಮಕ್ಕಳು. ನಾವು ಒಂದು ವಿಶಿಷ್ಟವಾದ ತತ್ವ  ಸಿದ್ಧಾಂತಗಳಿಗೆ ಒಳಪಟ್ಟವರು. ನಾವು ಒಂದು ಸತ್ಪಥದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ; ನಮ್ಮ  ಆಚರಣೆಗಳು ಇತರರಿಗಿಂತ ಭಿನ್ನವಾಗಿವೆ ಎನ್ನುವುದಕ್ಕೆ ಯಾವುದು ಸಾಕ್ಷಿ  ಏನು ಪ್ರಮಾಣ? * ಗುರು ಶಿಷ್ಯ ಸಂಬಂಧವಾದುದಕ್ಕಿದು ಚಿಹ್ನೆ,*  *ಹಿಂದೆ  ಬಿಟ್ಟು  ಮುಂದೆ ಹಿಡಿಯಲೇ ಬೇಕು* *ಲಿಂಗದೇವ  ಕೇಳಯ್ಯಾ ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.* ಹಿಂದೆ ಮಾಡುತ್ತಿದ್ದ ಅನೇಕ ತಪ್ಪು ಆಚರಣೆಗಳನ್ನು ಬಿಟ್ಟು , ಮುಂದೆ ಗುರು ತೋರಿದಂಥ ಆಚರಣೆಗಳನ್ನು ಮಾಡುತ್ತಿದ್ದರೆ ಅದೇ ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು, ಎಂದರೆ ಕಿಚ್ಚಿನೊಳಗೆ ಒಂದು ಮರದ ಕೋಲನಿಟ್ಟಾಗ ಅದೂ ತಾನೂ ಕಿಚ್ಚಿನ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದೇ ರೀತಿ ಧರ್ಮ  ಸಂಸ್ಕಾರಕ್ಕೆ  ಒಳಪಟ್ಟು  ಸನ್ಮಾರ್ಗದಲ್ಲಿ ನಡೆಯುತ್ತಿರುವ  ವ್ಯಕ್ತಿ  ನೋಡಲು ಮುನ್ನಿನಂತೆ ಕಂಡರೂ, ಮಾನವ ಸಹಜವಾದ ಮುನ್ನಿನ ಗುಣಗಳನ್ನು ಜ್ಞಾನದ ಕಿಚ್ಚಿನಲ್ಲಿ ಸುಟ್ಟುಕೊಂಡಿರಬೇಕು. ಧರ್ಮ ಮಾರ್ಗದಲ್ಲಿ  ನಡೆದು ಆದರ್ಶ ಶರಣರಾಗಬೇಕು. ಲಿಂಗಾಯತ ಸಮಾಜಕ್ಕೆ ಒಂದು ಕಲಂಕ ಅಂಟಿಕೊಂಡಿದ...

ಸಂಸತ್ ಭವನದಲ್ಲಿ "ಬಸವ ಜಯಂತಿ" ಇದೇ ಮೊದಲ ಬಾರಿಗೆ

ಇಮೇಜ್
  ನವದೆಹಲಿ, ಏ. 21- ವಿಶ್ವಕ್ಕೆ ಸಂಸತ್ ಪರಿಚಯಿಸಿದ ಬಸವೇಶ್ವರರ ಜಯಂತಿಯನ್ನು ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಆಚರಿಸಲು ನಿರ್ಧರಿಸ ಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂಸತ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣನವರು, ಸಂಸತ್ ಆವರಣ ದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ಸಿಕ್ಕಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಬಸವ ಜಯಂತಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬರಲಿದ್ದಾರೆ. ಏ.30ರಂದು ಬಸವ ಜಯಂತಿ ಆಯೋಜಿಸಲಾಗಿದೆ. ಕರ್ನಾಟಕದ ಬಸವ ಅಭಿಮಾನಿಗಳು, ಮಠಾಧಿಪತಿ ಗಳು ಬರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಏ.25ರ ಒಳಗಾಗಿ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಆಧಾರ ಕಾರ್ಡ್ ನೀಡಬೇಕು ಎಂದು ಹೇಳಿದರು. ಸಂಸತ್ ಭವನದೊಳಗೆ ಬಸವಣ್ಣರ ವಚನ:  2023ರಲ್ಲಿ ಲೋಕಾರ್ಪಣೆ ಗೊಂಡ ನೂತನ ಸಂಸತ್ ಭವನ ವೈಭವೋಪೇತವಾಗಿದೆ. ಈ ಸಂಸತ್ ಭವನ ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆ ಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾ ವರಣಗೊಂಡಿದ್ದು, ಕನ್ನಡ ಕಂಪು ಪಸರಿಸಿದೆ. ಸಂಸತ್ ಭವನದ ಗೋಡೆಯ ಮೇಲೆ ಹಂಪಿಯ ಕಲ್ಲಿನ ರಥವನ್ನು ಕೆತ್ತಲಾಗಿದೆ. ಇದರ ಪಕ್ಕದಲ್ಲೇ ಗೋಡೆಯ “ಕಳಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡ ಬೇಡ ತನ್ನ ಬಣ್ಣಿಸಬೇಡ ಇದಿರ ಹಳಿ ಯಲು ಬೇಡ, ಇದ...

ಶರಣರ ಪರಿಚಯ : ತುರುಗಾಹಿ ರಾಮಣ್ಣನವರು

ಇಮೇಜ್
ಶರಣ ತುರುಗಾಹಿ ರಾಮಣ್ಣನವರು ಅಂಕಿತ: ಗೋಪತಿನಾಥ ವಿಶ್ವೇಶ್ವರಲಿಂಗ ಕಾಯಕ: ಪಶುಪಾಲಕ ಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಇವರ ಕಾಲ ೧೧೬೦ ‘ಗೋಪತಿನಾಥ ವಿಶ್ವೇಶ್ವರಲಿಂಗ’ ಅಂಕಿತದಲ್ಲಿ ರಚಿಸಿದ ೪೬ ವಚನಗಳು ದೊರೆತಿವೆ. ತನ್ನ ವೃತ್ತಿ ವಲಯದ ಅನುಭವವನ್ನು ಆಧ್ಯಾತ್ಮಾನುಭವದ ಜೊತೆ ಸಮೀಕರಿಸಿ ಹೇಳಿದ ರೀತಿ ತುಂಬ ಅರ್ಥಪೂರ್ಣವೆನಿಸಿದೆ. ಕೆಲವು ಬೆಡಗಿನ ವಚನಗಳಲ್ಲಿ ತಾತ್ವಿಕ ವಿವೇಚನೆಯಿದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ ಮತ್ತು ಇತರ ಶರಣರು ಎಲ್ಲಿ ಹೋಗಿ ಐಕ್ಯರಾದರು ಎಂಬುದನ್ನು ತಿಳಿಸುವ ವಚನ ಐತಿಹಾಸಿಕ ಮಹತ್ವವನ್ನು ಪಡಿದಿದೆ. ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮ ಬೋಧೆ ಮಾಡಿರುವರು. ಹಾಗೆಯೇ ತನ್ನ ಕಾಯಕದ ಬಗೆಗೂ ಹೇಳಿಕೊಂಡಿರುವರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ – ಇವರು ಬಯಲಾದ ವಿವರ ನೀಡಿರುವರು. ಶರಣ ತುರುಗಾಹಿ ರಾಮಣ್ಣನವರ ವಚನ : ಬಂದಿತ್ತು ದಿನ ಬಸವಣ್ಣ ಕಲ್ಲಿಗೆ,  ಚನ್ನಬಸವಣ್ಣ ಉಳುವೆಯಲ್ಲಿಗೆ,  ಪ್ರಭು ಅಕ್ಕ ಕದಳಿದ್ವಾರಕ್ಕೆ,  ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ್ಯಕ್ಕೆ,  ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ,  ಅಡಗಿಹರೆಲ್ಲರು ಅಡಗಿದುದ ಕೇಳಿ ನಾ  ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು 🙏🙏ಶರಣು🙏🙏ಶರಣಾರ್ಥಿಗಳು🙏🙏 ಮಹಾದೇವ ದಾ ಸಂಖ ಅಧ್ಯಕ್ಷರು ಕರ್ನಾಟಕವಚನ ಸಾಹಿತ್ಯ ಪರಿ...

ಕೇವಲ ಹೇಳಿಕೆಗಳಿಗೆ ಸೀಮಿತವಾಗಿರುವ ಮಠ/ಪೀಠಗಳ ಕಾವಿಧಾರಿಗಳು ಹಾಗೂ ಲಿಂಗಾಯತ ಸಂಘಟನೆಗಳ ಮುಖಂಡರು

ಇಮೇಜ್
ಧರ್ಮಗುರು ಬಸವಣ್ಣನವರ ಮೇಲೆ ಅಥವಾ ಲಿಂಗಾಯತ ಧರ್ಮದ ಮೇಲೆ ಯಾವುದೇ ಅಪಚಾರ ಅಥವಾ ಚ್ಯುತಿ ಆದಾಗ ಬಸವಪರ ಸಂಘಟನೆಗಳ ಮುಖ್ಯಸ್ಥರು, ಮತ್ತು ಬಸವ ತತ್ವ ಹೇಳುವ ಮಠಾಧೀಶರು/ಪೀಠಾಧ್ಯಕ್ಷರು ಗಳು ಕೇವಲ ಖಂಡನೆ ಹೇಳಿಕೆಗಳನ್ನು ಕೊಟ್ಟು ಕುಳಿತು ಬಿಡುತ್ತಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಧರಣಿ ಸತ್ಯಾಗ್ರಹ ಅಥವಾ ಹೋರಾಟ ಅಥವಾ ರ್ಯಾಲಿ ಮಾಡುತ್ತಿಲ್ಲ. *ವಚನದರ್ಶನ* ಪುಸ್ತಕದ ಮೂಲಕ ವೈದಿಕವಾದಿಗಳು ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಕೈ ಹಾಕಿದಾಗ ಕೂಡ ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತರು. ರಸ್ತೆಗೆ ಇಳಿದು ಈ ಪುಸ್ತಕವನ್ನು ಬ್ಯಾನ್ ಮಾಡುವಂತೆ ಯಾವುದೇ ಪ್ರತಿಭಟನೆ ಮಾಡಲಿಲ್ಲ. ಶಾಸಕ *ಯತ್ನಾಳ* ಧರ್ಮಗುರು ಬಸವಣ್ಣನವರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ (ಅಪಹಾಸ್ಯ) ಮಾತನಾಡಿದಾಗ, ಮತ್ತು ಗುರು ಬಸವಣ್ಣನವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುಳ್ಳನ್ನು ವಿಧಾನಸಭೆಯಲ್ಲಿ ಹೇಳಿದಾಗ ಕೂಡ, ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತಿರು. (ಪೂಜ್ಯ ಮಾತೆಮಹಾದೇವಿಯವರ ನಿಷ್ಠಾವಂತ ಅನುಯಾಯಿಗಳು ಮಾತ್ರ ರಸ್ತೆಗೆ ಇಳಿದು ಪ್ರತಿಭಟಿಸಿದರು) ಇವಾಗ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ *ಶಂಕರ್ ಬಿದರಿ*  ಲಿಂಗಾಯತ ಧರ್ಮಕ್ಕೆ ಸಂಬಂಧವೇ ಇಲ್ಲದ, ರೇಣುಕಾಚಾರ್ಯರ ಜಯಂತಿಯನ್ನು ತಂದು ಬಸವ ಜಯಂತಿಯ ದಿನದಂದು ಆಚರಿಸುವಂತೆ ಹಾಗೂ ರೇಣುಕಾಚಾರ್ಯರ ಫೋಟೋವನ್ನು ಗುರು ಬಸವಣ್ಣನವರ ಫೋಟೋ ಜೊತೆ  ಇಡುವಂತೆ *ಸುತ್ತೋಲ...

ಗುರು ಬಸವಣ್ಣನವರ ಜನ್ಮದಿನದಿಂದ ಐಕ್ಯವಾಗುವರೆಗಿನ ಜೀವನದ ಪ್ರಮುಖ ಮಹತ್ವದ ಜೀವನಾಧಾರಿತ ಪ್ರಸಂಗವನ್ನು ಬಿಂಬಿಸುವ 124 ಕಲಾಕೃತಿ ಒಳಗೊಂಡ "ಶ್ರೀಗುರುಬಸವ ಚಿತ್ರ ಚರಿತ " ಗ್ರಂಥ.

ಇಮೇಜ್
 ಕಲಾಸಂತ  ಶ್ರೀ ಚಂದ್ರಶೇಖರ ಸೋಮಶೆಟ್ಟಿ ಯವರು  ಬಸವ ಧರ್ಮದ ಬಗ್ಗೆ ಮತ್ತು ವಿಶ್ವಗುರು ಬಸವಣ್ಣನವರ ಕುರಿತು ಆಳವಾದ ಅಧ್ಯಯನ ಮಾಡಿ, ಬಸವಣ್ಣನವರ ಜನ್ಮದಿನದಿಂದ ಐಕ್ಯವಾಗುವರೆಗಿನ ಜೀವನದ ಪ್ರಮುಖ ಮಹತ್ವದ ಜೀವನಾಧಾರಿತ ಪ್ರಸಂಗವನ್ನು ಬಿಂಬಿಸುವ 124 ಕಲಾಕೃತಿ ಒಳಗೊಂಡ " ಶ್ರೀಗುರುಬಸವ ಚಿತ್ರ ಚರಿತ " ಗ್ರಂಥ ರಚಿಸಿರುತ್ತಾರೆ .  ವಿಭಿನ್ನವಾಗಿ ಚರಿತ್ರೆ ಸೃಷ್ಟಿಸಿರುವ ಈ ಗ್ರಂಥವು ಬಸವ ಧರ್ಮಿಯರ ಮನೆಗಳಲ್ಲಿ ಇರಬೇಕಾಗಿರುವದು ಅನಿವಾರ್ಯ ಹಾಗು ಅತಂತ್ಯ ಅಗತ್ಯವಾದದ್ದು .  ಬೀದರ'ನ ತಮ್ಮ ನಿವಾಸದಲ್ಲಿ ಈ ಚಿತ್ರಗಳ ಪ್ರರ್ಧಶನ ಗೊಸ್ಕರ ಒಂದು ಗ್ಯಾಲರಿ ಯನ್ನು ನಿರ್ಮಿಸಿ, ಗುರು ಬಸವಣ್ಣನವರ ಜಿವನ ಅನುಸಾರವಾಗಿ ಚಿತ್ರಗಳನ್ನು ಜೊಡಿಸಲಾಗಿದೆ. ಶ್ರೀ ಚಂದ್ರಶೇಖರ ಸೋಮಶೆಟ್ಟಿ ಇಂಥಹ ಗ್ರಂಥವನ್ನು ನಿರ್ಮಿಸುವ ಹಿಂದೆ, 17 ವರ್ಷಗಳ ಶ್ರಮವಿದೆ, ಲಿಂಗಾಯತದ ಇತಿಹಾಸದಲ್ಲಿ ಒಂದು ಮೈಲುಗಲ್ಲು ನಿರ್ಮಿಸಿದ್ದಾರೆ ಮುಂಬರುವ ಪೀಳಿಗೆಗೆ ಪುಸ್ತಕ ಓದುವ ಹಂಬಲವೇನು ಇಲ್ಲದಂತಾಗುತ್ತದೆ, ಚಿತ್ರಗಳ ಮೂಲಕವಾದುರು ಬಸವಧರ್ಮದ ಅಭಿಮಾನ ಮತ್ತು ಜಾಗ್ರತಿಯನ್ನು ಈ ಗ್ರಂಥದ ಮೂಲಕ ಉಳಿಯಲಿ ಎಂಬುದೇ ನಮ್ಮ ಆಶಯ. ಇ ಗ್ರಂಥ ನಿಮಗೆ ಬೆಕಾಗಿದ್ದಲ್ಲಿ *ನೇರ ಸಂಪರ್ಕ* ₹1500 + 100 Post changes.. Send address and Phone Pay to 9964205723 Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ...

"ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ"

ಇಮೇಜ್
" ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ " -  ರಂಗನಾಥ ದೀವಾಕರ ಉನ್ನತ ಸಂಸ್ಕೃತ ವಿದ್ವಾಂಸರು (ವೈದಿಕ ಸಾಹಿತ್ಯ ಪಂಡಿತರು) ಹಾಗೂ ಪ್ರಖ್ಯಾತ ಲೇಖಕರು " Everything that is in the Upanishads is in the Vachana Sahitya, but everything that is in the Vachana Sahitya is not in the Upanishads" -  Ranganatha Diwakara Eminent Sanskrit Scholars (Vedic Literature Scholars) and eminent authors. Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಸಂಪಾದಕರ ನುಡಿ ✍️ ಕುರಿತು ವಿಮರ್ಶೆ

ಇಮೇಜ್
ಮಾಸ: ಏಪ್ರಿಲ್ 2025,  ಪತ್ರಿಕೆ : ಕಲ್ಯಾಣ ಕಿರಣ ಸಂಪಾದಕರು :  ಪೂಜ್ಯ ಮಾತೆ ಗಂಗಾದೇವಿಯವರು ಎಪ್ರಿಲ್ ಮಾಸದ, ಕಲ್ಯಾಣ ಕಿರಣದ 'ಸಂಪಾದಕರ ನುಡಿ ' ವಿಭಾಗದಲ್ಲಿ  ಪೂಜ್ಯ ಮಾತೆ ಗಂಗಾದೇವಿಯವರು  ತಮ್ಮ ಗುರುಗಳಾದ ಪರಮಪೂಜ್ಯ ಮಾತೆ ಮಹಾದೇವಿಯವರ ಕುರಿತು " ಬಾವನ್ನ ವೃಕ್ಷವು ಎಲ್ಲಿದ್ದರೇನು, ಪರಿಮಳ ಒಂದೇ " ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಕೆಲವು ಸಾಲುಗಳು ಈ ರೀತಿ ಇವೆ.  *" ಗುರು ಬಸವ ತಂದೆಯವರ ಆಶೋತ್ತರವನ್ನು ಪೂರೈಸಲೆಂದೆ ಜನ್ಮ ತಳೆದು ಬಸವಾತ್ಮಜೆ ಎಂಬ ನಾಮಾಂಕಿತದಿಂದ ಶೋಭಿತರಾದ ಪರಮಪೂಜ್ಯ ಮಾತಾಜಿಯವರ ಜೀವನ, ಸಾಧನೆ, ಸಂದೇಶಗಳಿಗೆ ಈ ವಚನ ಧ್ವನಿಯಾಗಿರುವುದು ಒಂದು ಸುಕೃತ ವಿಶೇಷ ಅಂದರೆ ತಪ್ಪಲ್ಲ"* ಪೂಜ್ಯ ಮಾತೆ ಗಂಗಾದೇವಿಯವರೇ ತಾವು ಬರೆದಿರುವ ಈ ಸಾಲುಗಳ ಪ್ರಕಾರ, ಪರಮಪೂಜ್ಯ ಮಾತೆ ಮಹಾದೇವಿಯವರು ಗುರು ಬಸವಣ್ಣನವರ ಆಶೋತ್ತರವನ್ನು ಪೂರೈಸಲೆಂದೇ ಜನ್ಮ ತಳೆದು ಹುಟ್ಟಿ ಬಂದಿದ್ದಾರೆ ಎಂದು ಹೇಳಿದ್ದೀರಿ. ತಮ್ಮ ಪ್ರಕಾರ ಪೂಜ್ಯ ಮಾತೆ ಮಹಾದೇವಿಯವರು ಪ್ರತಿಯೊಂದು ಕಾರ್ಯವು ಕೂಡ *ಗುರುಬಸವಣ್ಣನವರ ಆಶಯದ* ಪ್ರಕಾರ ಮಾಡಿ ಹೋಗಿದ್ದಾರೆ.  ಅಂದಮೇಲೆ ಅವರು ಪ್ರತಿಷ್ಠಾಪನೆ ಮಾಡಿ ಹೋಗಿರುವ "ಲಿಂಗದೇವ ವಚನಾಂಕಿತ" ಕಾರ್ಯವು ಕೂಡ ಗುರುಬಸವಣ್ಣನವರ ಆಶೋತ್ತರವಾಗಿತ್ತು ಎಂಬುದು ತಮ್ಮ ಮಾತಿನ ಪ್ರಕಾರ ಸ್ಪಷ್ಟವಾಗುತ್ತದೆ.  ಹಾಗಾದರೆ ತಮ್ಮ ಮಾತಿನ ಪ್ರಕಾರ ಪೂಜ್ಯ ಮಾತಾಜಿಯವರು ಪ್ರತಿ...

ಆದ್ಯ ವಚನಕಾರರು, ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ.

ಇಮೇಜ್
ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ನೇಯ್ಗೆ ಕಾಯಕ ಮಾಡುತ್ತಿದ್ದ ಒಬ್ಬ ಪರಮ ಶಿವಭಕ್ತ ಇವರು ವಚನಗಳನ್ನು ಬರೆದಿಲ್ಲ. ಆದರೆ ಜೇಡರ ದಾಸಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ದೇವರದಾಸಿಮಯ್ಯ ನವರ ಪತ್ನಿಯ ಹೆಸರು ದುಗ್ಗಳೆ ಮತ್ತು ಜೇಡರ ದಾಸಯ್ಯನವರ ಪತ್ನಿಯ ಹೆಸರೂ ದುಗ್ಗಳೆಯೇ ಆಗಿತ್ತು. ಇದರಿಂದಾಗಿ ಅನೇಕರಿಗೆ ಈ ವಿಚಾರದಲ್ಲಿ ದ್ವಂದ್ವವುಂಟಾಗಿದೆ.  ಜೇಡರ ದಾಸಯ್ಯ ಮತ್ತು ದುಗ್ಗಳೆಯವರು ಗುರು ಬಸವಣ್ಣನವರಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಗುರು ಬಸವಣ್ಣನರು ಹಾಗು ಅನುಭವ ಮಂಟಪದ ಶರಣರಿಂದ ಸ್ಫೂರ್ತಿಗೊಂಡು ದಂಪತಿಗಳಿಬ್ಬರೂ ವಚನಗಳನ್ನು ರಚಿಸಿದ್ದಾರೆ. ದುಗ್ಗಳೆಯವರ ಎರಡು ವಚನಗಳು ಹೀಗಿವೆ: ವಚನ:  ಬಸವಣ್ಣನಿಂದ ಗುರುಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು. ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ ದಾಸಯ್ಯಪ್ರಿಯ ರಾಮನಾಥ. ವಚನ: ಭಕ್ತನಾದಡೆ ಬಸವಣ್ಣನಂತಾಗಬೇಕು. ಜಂಗಮವಾದಡೆ ಪ್ರಭುದೇವರಂತಾಗಬೇಕು. ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು. ಐಕ್ಯನಾದಡೆ ಅಜಗಣ್ಣನಂತಾಗಬೇಕು. ಇಂತಿವರ ಕಾರುಣ್ಯಪ್ರಸಾದವ ಕೊಂಡು ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ ದಾಸಯ್ಯಪ್ರಿಯ ರಾಮನಾಥ ಒಂದು ವೇಳೆ ಜೇಡರ ದಾಸಯ್ಯ ಹಾಗು ದುಗ್ಗ...