ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಿಂಗಾಯತರೆನಿಸಿಕೊಂಡ ಕೆಲವರು ಇತ್ತೀಚೆಗೆ ಪ್ರಯಾಗರಾಜದ ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ.

ಇಮೇಜ್
  ರಾಷ್ಟ್ರೀಯ ಬಸವದಳಗಳ ಜೊತೆ ಗುರುತಿಸಿಕೊಂಡು ಲಿಂಗಾಯತರೆನಿಸಿಕೊಂಡ ಕೆಲವರು  ಇತ್ತೀಚೆಗೆ ಪ್ರಯಾಗರಾಜದ  ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ. ಇಂಥವರಿಗೆ   ಗುರು ಬಸವಣ್ಣನವರು ಅರ್ಥವಾಗುವ ಭಾಷೆಯಲ್ಲಿಯೇ ತಿಳಿ ಹೇಳುತ್ತಾರೆ * ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ* *ಕೂಸಿಂಗಲ್ಲ, ಬೊಜಗಂಗಲ್ಲ.* *ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.* *ಧನದಾಸೆ ಬಿಡದು ಲಿಂಗದೇವಾ.* ಈ ಮೇಲಿನ ವಚನದ ತೋರು ಅರ್ಥ ಅತ್ಯಂತ ಸ್ಪಷ್ಟವಾಗಿದೆ ಅದಕ್ಕೆ ವಿವರಣೆ ಬೇಕಿಲ್ಲ ಎನಿಸುತ್ತದೆ.   ಇದರ ಒಳ ಅರ್ಥ ಹೀಗಿದೆ: * ಕೂಸುಳ್ಳ ಸೂಳೆ:* ಇಷ್ಟಲಿಂಗವೆಂಬ ಕೂಸುಳ್ಳ ಅಳಿಮನದ ಭಕ್ತ *ಧನದಾಸೆಗೆ*-ಪ್ರಯಾಗರಾಜದ ನೀರಿನಲ್ಲಿ ಮುಳುಗಿದರೆ ಪುಣ್ಯ ಬರುತ್ತದೆ ಎನ್ನುವ ಆಸೆಗೆ)  *ಒತ್ತೆಯ ಕೊಂಡರೆ : ಆ ನೀರಿನಲ್ಲಿ ಮುಳುಗಿದರೆ, ಅನ್ಯದೈವ ಪೂಜೆ ಭಜನೆ ದೇವಾಲಯಗಳ ಸುತ್ತುವಿಕೆ ಇಂಥ ಆಚರಣೆ ಮಾಡಿದರೆ,   *ಕೂಸಿಂಗಲ್ಲ ಬೊಜಗಂಗಲ್ಲ:* ಇಷ್ಟಲಿಂಗಕ್ಕೂ ಸಂಪೂರ್ಣ ಭಕ್ತಿ  ಅರ್ಪಣೆ ಆಗುವುದಿಲ್ಲ, ನೀರಿನಲ್ಲಿ ಮುಳುಗೆದ್ದಿರುವುದಕ್ಕೂ ಸಂಪೂರ್ಣ ತ್ರಪ್ತಿಸಿಗುವುದಿಲ್ಲ.  ಸ್ಥಾವರಗಳಿಗೆರಗಲಿಕ್ಕೆ ಸುತ್ತಾಡಿ ಅಥವಾ ಮನೆಯಲ್ಲೇ ಅನ್ಯ ಪೂಜೆ ಭಜನೆಗಳನ್ನು ಮಾಡಿದರೆ ಅಲ್ಲಿಯೂ ಅಳಿಮನದ ಭಕ್ತನಿಗೆ ತೃಪ್ತಿ ಸಿಗುವುದಿಲ್ಲ ಏಕೆಂದರೆ ಇಂಥದನ್ನು ಕಂಡಾಗ ಗುರ...

ಶುಭ - ಅಶುಭ ಇಲ್ಲಾ : ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ

ಇಮೇಜ್
  ಗುರು ಬಸವಣ್ಣನವರ ಹಾಗೂ ಆದಿ ಶರಣರ ಪ್ರಕಾರ ಕಾಲವು ಶುಭ ಅಥವಾ ಅಶುಭ ವಾಗಿರುವುದಿಲ್ಲಾ. ವಚನಗಳನ್ನು ಅಧ್ಯಾಯನ ಮಾಡಿದವರು ಹಾಗೂ ಪ್ರಗತಿಪರ ಚಿಂತಕರು ರಾಹುಕಾಲ ಗುಳಿಕ ಕಾಲ, ಯಮಗಂಡ ಕಾಲ ಎಂದು ಭೇದವೆಣಿಸದೆ, ತಮ್ಮ ಗುರುಗಳ ಅಥವಾ ಸೃಷ್ಟಿಕರ್ತನ ಅಥವಾ ಜಂಗಮ ಸ್ವರೂಪಿಗಳ ಸ್ಮರಿಸಿ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾರೆ.. ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ ರಾಶಿ ಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ ಚಂದ್ರ ಬಲ, ತಾರಾಬಲ ಉಂಟೆಂದು ಹೇಳಿರಯ್ಯ ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ ಲಿಂಗದೇವನ ಪೂಜಿಸಿದ ಫಲ ನಿಮ್ಮದಯ್ಯ. ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಲಿಂಗಯ್ಯಾ? ದೋಷವೆಲ್ಲಿಯದೋ ದುರಿತವೆಲ್ಲಿಯದೋ? ಲಿಂಗದೇವಯ್ಯ, ನಿಮ್ಮ ಮಾಣದೆ ನೆನೆವಂಗೆ ಭವ ಕರ್ಮವೆಲ್ಲಿಯದೋ? - ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು

"ಸರ್ವ ಶರಣರ ದಿನಾಚರಣೆ" : ಶಿವನ ತಪಸ್ಸಿನ ದಿನವಾದ “ಶಿವರಾತ್ರಿಯಂದು” ಸರ್ವ ಶರಣರ ಸಂಸ್ಮರಣೆಯನ್ನು ಒಟ್ಟಾಗಿ ಮಾಡೋಣ.

ಇಮೇಜ್
ಸರ್ವ ಶರಣರ ದಿನಾಚರಣೆ  (ಮಾತಾಜಿಯವರ ಸಂದೇಶ) ಒಂದು ತತ್ತ್ವಜ್ಞಾನವಾಗಲೀ, ಧರ್ಮವಾಗಲೀ ಜೀವಂತವಾಗಿರಬೇಕಾದರೆ ಅದು ಪರಂಪರೆಯಾಗಿ (heritage) ಸಾಗಿಬರಬೇಕು.  ಶ್ರೀ ಗುರು ಬಸವಣ್ಣನವರೇ ಆದಿ ಪ್ರಮಥರಾಗಿ ಆರಂಭವಾದ ಲಿಂಗಾಯತ ಧರ್ಮದ ಪರಂಪರೆಯು ಶೂನ್ಯ ಪೀಠಾಧೀಶ ಅಲ್ಲಮಪ್ರಭು, ಚಿನ್ಮಯಜ್ಞಾನಿ ಚೆನ್ನಬಸವಣ್ಣ ಬಸವಯೋಗಿ ಸಿದ್ಧರಾಮೇಶ್ವರ, ವೀರವಿರಾಗಿಣಿ ಅಕ್ಕಮಹಾದೇವಿ, ವೀರಶರಣ ಮಡಿವಾಳ ಮಾಚಿದೇವ, ವೀರ ಮಾತೆ ಅಕ್ಕನಾಗಲಾಂಬಿಕೆ ಎಂಬ ಸಪ್ತಗಣಾಧೀಶರನ್ನೊಡಗೂಡಿ ಅವ್ಯಾಹ ಹತವಾಗಿ ಸಾಗಿ ಬಂದಿದೆ. ಗುರು ಬಸವಣ್ಣನವರ ಕಾಲದ ಆದಿ ಪ್ರಮಥರಿಂದ ಈವರೆಗೆ ಆಗಿ ಹೋಗಿರುವ ಲಿಂಗಾಂಗಯೋಗಿಗಳು, ಶರಣರು ಅಸಂಖ್ಯಾತರು. ಅವರ ಜಯಂತಿ -ಲಿಂಗೈಕ್ಯ ದಿನ ಆಚರಿಸಲು ವರ್ಷದ 365 ದಿನಗಳು ಸಾಕಾಗವು. ಅಂಥ ಸಮೃದ್ಧ ಪರಂಪರೆಯ ವಾರಸುದಾರರು ನಾವು. ಆದ್ದರಿಂದ ಜಗತ್ತಿನ ಮೊಟ್ಟಮೊದಲ ಯೋಗಿಯೂ, ಓಂಕಾರದ ದ್ರಷ್ಟಾರನೂ, ಭಾರತೀಯ ಧಾರ್ಮಿಕ ಪರಂಪರೆಯ ಮೂಲಿಗನಾದ ವೇದಪೂರ್ವ ಪ್ರವಾದಿ “ಯೋಗಿರಾಜ ಶಿವನ ತಪಸ್ಸಿನ ದಿನವಾದ “ಶಿವರಾತ್ರಿಯಂದು” ಸರ್ವ ಶರಣರ ಸಂಸ್ಮರಣೆಯನ್ನು ಒಟ್ಟಾಗಿ ಮಾಡೋಣ.

ಗುರು ಬಸವಣ್ಣನವರಿಗೆ ಗುರುವಿಲ್ಲ (ದೈಹಿಕವಾಗಿ)

ಇಮೇಜ್
    Guru Basavanna does not have Guru (Physically) ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು ಎನಗೆ ಗುರು ಪಥವ ತೋರಿದವರಾರು? ಲಿಂಗ ಪಥವ ತೋರಿದವರಾರು? ಜಂಗಮ ಪಥವ ತೋರಿದವರಾರು? ಪಾದೋದಕ ಪ್ರಸಾದ ಪಥವ ತೋರಿದವರಾರು? ತೋರುವ ಮನವೆ ನೀವೆಂದರಿತೆ, ಎನ್ನಗಿನ್ನಾವ ಭವವಿಲ್ಲ, ಕೂಡಲಸಂಗಮದೇವ.  - ಸ. ವ. ಸಂ.-೧ ವಚನ ಸಂಖ್ಯೆ: ೮೩೩ ಈ ವಚನದಲ್ಲಿ ಬಸವಣ್ಣ ವರು ಸ್ಪಷ್ಟವಾಗಿ "ತೋರುವ ಮನವೆ" ಎಂದು ಹೇಳಿದ್ದಾರೆ, ಇದನ್ನು ಗಮನಿಸಿದರೆ, ಬಸವಣ್ಣ ವರಿಗೆ, ಬೇರೆ ಯಾವುದೆ ಗುರುಗಳು, ಋಷಿಗಳು ಅಥವಾ ಇನ್ಯಾರೂ ಕೊಟ್ಟಿಲ್ಲವಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಬಸವಣ್ಣ ನವರು ಅವರ ಹೆಸರನ್ನು ಇಲ್ಲಿ ಬಳಸುತ್ತಿದ್ದರು. ತೋರುವ ಮನವೇ ಎಂದು ಬಳಸುತ್ತಿರಲಿಲ್ಲ. ಬ ಸವಣ್ಣ ನವರಲ್ಲದೆ ಈಗ ನಾವು ಬೇರೆ ಶರಣರ ವಚನಗಳನ್ನು ಗಮನಿಸೋಣ ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು ಇರೇಳು ಲೋಕವಾಯಿತ್ತು ಬಸವಣ್ಣ ನಿಂದ ಕಲಿದೇವಯ್ಯಾ . - ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫ ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣ ನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಬೇರೆ ಯಾರಾ...

ಶರಣರ ಮೂಲ ತತ್ವ ಸಿದ್ಧಾಂತಕ್ಕೆ ಪೂರಕವಾದ ಬದಲಾವಣೆಗಳನ್ನು ನಾವು ಸ್ವಾಗತಿಸಬೇಕು.

ಇಮೇಜ್
 " ಗುರು ಬಸವಣ್ಣನವರು ಬರೆದಿರುವ ವಚನಗಳಲ್ಲಿ ಏನನ್ನೂ ಕೂಡ ತಿದ್ದಬಾರದು. ಹಳೆಯದು ಹೇಗೆ ಇದೆಯೋ ಹಾಗೆ ಇರಬೇಕು. ತಿದ್ದುವುದು  ಅಪರಾಧ" ಎಂದು ಹೇಳುವ ಬುದ್ಧಿವಂತರು ಇವಾಗ ಉತ್ತರಿಸಬೇಕು. ಬಸವಾದಿ ಶರಣರ ಮೂಲ ತತ್ವ ಸಿದ್ಧಾಂತಕ್ಕೆ ಪೂರಕವಾದ ಬದಲಾವಣೆಗಳನ್ನು ನಾವು ಸ್ವಾಗತಿಸಬೇಕು.  ಪೂಜ್ಯ ಮಾತಾಜಿ ಅವರ ಸಂಶೋಧನೆಗಳನ್ನು ಕೂಡ ಇದೆ ದೃಷ್ಟಿಯಲ್ಲಿ ವಿಚಾರ ಮಾಡಿ ನೋಡಿದರೆ ನಮಗೆ ಅರ್ಥವಾಗುತ್ತವೆ .

ಹಿಂದು ಧರ್ಮ ಮತ್ತು ಲಿಂಗಾಯತ ಧರ್ಮಕ್ಕೆ ಇರುವ ವ್ಯತ್ಯಾಸಗಳು

ಇಮೇಜ್
  Difference between Hindu and Lingayat  ಹಿಂದು ಧರ್ಮ ಮತ್ತು ಲಿಂಗಾಯತ ಧರ್ಮಕ್ಕೆ ಇರುವ ವ್ಯತ್ಯಾಸಗಳು

ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದು

ಇಮೇಜ್
         ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದು, ಇಷ್ಟಲಿಂಗ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು. ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು. ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು, ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು. ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು, ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು, ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು, ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು, ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು, ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು, ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು. ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು. ~:  ಸದ್ಗುರು ಸ್ವಾಮಿ ಲಿಂಗಾನಂದರು  :~ Contact :  Lingayat.kalyankirana@gmail.com

ಲಿಂಗವಂತರಿಗೆ ಕುಂಕುಮಧಾರಣೆ ನಿಷಿದ್ಧ

ಇಮೇಜ್
ಕುಂಕುಮ ಧಾರಣ ನಿರಸನ ಸ್ಥಲ -   ಶ್ರೀ ಗುರು ಮಾಚಿದೇವರ ವಚನಗಳು ಕೊಂಬನೂದುವ ಹೊಲೆಯಂಗೆ ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ? ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ, ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ, ಮರಳಿ ಗುರುನಿಂದಕನಾಗಿ, ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ, ಕಲಿದೇವಯ್ಯ. ಲಿಂಗವಂತ ಸ್ತ್ರೀಯರಿಗೂ ಕುಂಕುಮ ಧಾರಣೆ ನಿಷಿದ್ಧ  ಬಸವ ಮೊದಲಾದ ಮಹಾಪ್ರಮಥಗಣಂಗಳ ಸಮೂಹಕ್ಕೆ ಕಾರಣರಾದ, ಮರ್ತ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ, ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ *ಕ್ರಿಯಾಶಕ್ತಿಯರು* ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು. ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ, ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ, ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ. ಈ ಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು, ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವು ಪ್ರಸಂಗ. ಭವಿಜನ್ಮಾತ್ಮರು ತೊಳೆದ ಹೊದಿಕೆ, ಅವರ ಸಂಸರ್ಗ ಮೊದಲಾದ ದುಷ್ಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು. ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡು(ಡಿಸು)ವದು. ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು. ಈ ಮಾರ್ಗವನಾಚರಿಸದಿರ್ದಂಥ ಭಕ್ತನ...

ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗೆ ತಕ್ಕ ಉತ್ತರ ನಿಡಿದ ರಾಷ್ಟ್ರಿಯ ಬಸವದಳ

ಇಮೇಜ್
  ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಯ ಹೆಳಿಕೆಗಳನ್ನು ಕೇಳಿ ಈ ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿ ದೃಶ್ಯ ಮಾಧ್ಯಮದಲ್ಲಿ ಕುಳಿತು ಬಸವಣ್ಣನವರ ಕುರಿತು ಸಮಾಜಕ್ಕೆ ತಿರುಚಿ ಸಂದೇಶ ನೀಡಿ, ಬಸವತತ್ವ ಲಿಂಗಾಯತ ಮಠದ ಸ್ವಾಮಿಗಳಗೆ, ಬಸವತತ್ವ ಆಚರಿಸುವವರಿಗೆ ಹಾಗೂ ಬಸವಾಭಿಮಾನಿಗಳಿಗೆ ಅವಮಾನಕರ ಮಾತುಗಳನ್ನಾಡಿರುವ ಬಗ್ಗೆ ಬಸವಾಭಿಮಾನಿಗಳು,  ವೀರೇಶ್  ಗಂಗಾವತಿ, ರಾಜ್ಯ ಅಧ್ಯಕ್ಷರು ಗಣಚಾರ ದಳ ಕರ್ನಾಟಕ, ರಾ ಬ ದಳ. ತಕ್ಕ ಉತ್ತರ ನಿಡಿದ್ದಾರೆ. ಅನುಭಾವಿಗಳು ಭಹಿರಂಗವಾಗಿ ಈತನನ್ನು ಕರೆದು ತಕ್ಕ ಉತ್ತರ ನೀಡಿ ಈ ಸ್ವಾಮಿಗೆ ಬಸವತತ್ವದ ಪಾಠ ಹೇಳುವಂತೆ ಈ ಮೂಲಕ ಈತನಿಗೆ ಬಸವತತ್ವ ಅರಿವು ಮುಡಿಸಬೇಕೆಂದು ಮತ್ತು ಲಿಂಗಾಯತ ಬಸವತತ್ವ ಸ್ವಾಮಿಗಳಗೆ ಕ್ಷಮೆ ಕೇಳುವವರೆಗೆ ಈತನ ವಿರುಧ್ಧ ಹೋರಾಟಗಳು ಜರುಗಬೇಕೆಂದು ಆಶೀಸುತ್ತಾ ತಿಳಿಪಡಿಸುತ್ತೇವೆ. ಪೂಜ್ಯ ಶ್ರೀ ಸದ್ಗುರು ಸತ್ತಾದೇವಿ  ಮಾತಾಜಿ ಬಸವ ಮಂಟಪ ಬೀದರ್. ತಕ್ಕ ಉತ್ತರ.. ಬಸವ ತತ್ವದ ಗಂಧವೇ ಗೊತ್ತಿಲ್ಲದ ಹಿಂದುತ್ವದ ತಾಲಿಬಾನ್ ಕುಂಕುಮದ ಮೂರ್ತಿ ಕನ್ನೇರಿ ಮಠದ ಸ್ವಾಮೀಗೆ ಎಚ್ಚರಿಕೆ  ತಾನು ಹೇಗಿರುವನೋ ಹಾಗೇ ಎಲ್ಲರೂ ಇರುವರು ಎನ್ನುವುದು ಸಹಜ ಮಾನವನ ಕೀಳು ಮಟ್ಟದ ಲಕ್ಷಣ.  ಹಾಗೆಯೇ  ಕನ್ನೈರಿ ಮಠದ ಶ್ರೀಗಳು ಸುವರ್ಣ ನ್ಯೂಸ್ ಡಿಬೇಟ್ ಒಂದರಲ್ಲಿ ಬಸವ ತತ್ವದವರನ್ನು ತಾಲಿಬಾನಿಗಳಿಗೆ ಹೋಲಿಸಿ ಮಾತನಾಡಿದ್ದಾರೆ.ದೃ...

ಲಿಂಗಾಯತ ಧರ್ಮದ ಷಟಸೂತ್ರಗಳು

ಇಮೇಜ್
  ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು ಲಿಂಗಾಯತ ಧರ್ಮದ ಷಟಸೂತ್ರಗಳು ,  ಧರ್ಮ ಗುರು - ವಿಶ್ವಗುರು ಬಸವಣ್ಣನವರು ಧರ್ಮ ಸಂಹಿತೆ - ವಚನ ಸಾಹಿತ್ಯ ಧರ್ಮ ಲಾಂಛನ - ಸೃಷ್ಟಿ ಕರ್ತನ ಕುರುಹು ಆದ ಇಷ್ಟ ಲಿಂಗ ಧರ್ಮ ಕ್ಷೇತ್ರ - ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮ ಧರ್ಮ ದ್ವಜ - ಷಟ್ಕೋನ ಇಷ್ಟಲಿಂಗ ಸಹಿತ ಬಸವ ದ್ವಜ ನಮ್ಮ ಧರ್ಮದ ಧ್ಯೇಯ - ಜಾತಿ ವರ್ಣ ವರ್ಗ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣ

ರಾ.ಬ.ದಳವನ್ನು ನಿರ್ಲಕ್ಷಿಸಬೇಡಿ ಎಂದು ಅನುಕಂಪ ತೋರಿಸುವ ಸ್ಥಿತಿ ಏಕೆ ಬಂತು ??

ಇಮೇಜ್
 ✍️ *ಪ್ರೊಫೆಸರ್ ವೀರಭದ್ರಯ್ಯ* (ಅಧ್ಯಕ್ಷರು ಜಾ.ಲಿ.ಮ. ಬೆಂಗಳೂರು ಘಟಕ) ಇವರು *ಬಸವ ಮೀಡಿಯಾ* ದಲ್ಲಿ "ಲಿಂಗಾಯತ ಧರ್ಮ ಅಭಿಯಾನಕ್ಕೆ ರಾಷ್ಟ್ರೀಯ ಬಸವದಳದ ಬೆಂಬಲ ಅವಶ್ಯವಿದೆ" ಲೇಖನವನ್ನು ಬರೆದಿದ್ದಾರೆ. ಜಾ.ಲಿ.ಮ. ಮತ್ತು ಕೆಲವು ಮಠಾಧೀಶರ ನೇತೃತ್ವದಲ್ಲಿ ಲಿಂಗಾಯತ ಧರ್ಮ ಅಭಿಯಾನ ಪ್ರಾರಂಭ ಮಾಡುವ ಸಲುವಾಗಿ ನೇಮಿಸಿದ ಸಮಿತಿಯಲ್ಲಿ ರಾಷ್ಟ್ರೀಯ ಬಸವ ದಳದವರನ್ನು ತೆಗೆದುಕೊಳ್ಳದೆ ಇರುವುದು  ಆಶ್ಚರ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ರಾ.ಬ.ದಳವು ಕರ್ನಾಟಕದಲ್ಲಿಯೇ *ದೊಡ್ಡ* ಮತ್ತು *ಬಲಿಷ್ಠ ಸಂಘಟನೆ* ಆಗಿದೆ ಎಂಬ ಸತ್ಯವನ್ನು ಬರೆದಿದ್ದಾರೆ. ಈ ಸಂಘಟನೆಯ ಬೆಂಬಲ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.   ಒಬ್ಬ ಜಾಲಿಮ ಜಿಲ್ಲಾಧ್ಯಕ್ಷ ಆದ ವ್ಯಕ್ತಿಯೋರ್ವರು ಈ ರೀತಿ ರಾ.ಬ.ದಳವನ್ನು ನಿರ್ಲಕ್ಷಿಸಬೇಡಿ ಎಂದು ಅನುಕಂಪ ತೋರಿಸುವ ಸ್ಥಿತಿ ಏಕೆ ಬಂತು ಎಂಬುದರ ಬಗ್ಗೆ  ವಿಚಾರ ಮಾಡಬೇಕು.  ಪ್ರೊಫೆಸರ್ ವೀರಭದ್ರಯ್ಯನವರೇ ರಾಷ್ಟ್ರೀಯ ಬಸವದಳದ ಬಗ್ಗೆ ಅಷ್ಟೊಂದು ಮೆಚ್ಚುಗೆಯ ಮಾತುಗಳನ್ನು ಆಡಿರುವ ತಾವು "ಲಿಂಗಾಯತ ಧರ್ಮ ಅಭಿಯಾನಕ್ಕೇ ರಾಷ್ಟ್ರೀಯ ಬಸವ ದಳ ಸಂಘಟನೆಯ ಬೆಂಬಲದ ಅವಶ್ಯಕತೆ ಇದೆ" ಎಂದು ಹೇಳುವ ಬದಲು "ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಬಸವ ದಳದ ಮುಂದಾಳತ್ವದಲ್ಲಿಯೆ ಲಿಂಗಾಯತ ಧರ್ಮ ಅಭಿಯಾನ ಮಾಡಬೇಕು ಅದಕ್ಕೆ ನಾವು (ಉಳಿದ ಸಂಘಟನೆಗಳು)  ಬೆಂಬಲ ಕೊಡಬೇಕು" ಎಂದು ತಾವು ...