ಲೋಕದ ಡೊಂಕ ತಿದ್ದಬಾರದೇ? (ಭಾಗ-7/7)
ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ? ನಿಮ್ಮ ನಿಮ್ಮತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. ಗುರು ಶಿಷ್ಯ ಪರಂಪರೆಯಲ್ಲಿ ಉತ್ತರಾಧಿಕಾರಿ ತಪ್ಪು ಮಾಡಿದಾಗ, ಗುರುವಿನ ಮುಂದೆ ತಪ್ಪು ಪ್ರಸ್ತಾವನೆ(Proposal)ಗಳನ್ನು, ಬೇಡಿಕೆಗಳನ್ನು ಇಟ್ಟಾಗ, ಪೀಠಾಧಿಕಾರಿ ಉತ್ತರಾಧಿಕಾರಿಯನ್ನು ತಿದ್ದಬೇಕು. ನಿಜ ಧರ್ಮ ಉಪದೇಶ ಮಾಡಬೇಕು, ಮೌಲ್ಯಗಳನ್ನು ಕಲಿಸಬೇಕು. ಸಾಧಕ ಜೀವನದ ಉಪದೇಶವನ್ನು ಮಾಡಬೇಕು. ಧರ್ಮದ, ಸಾಧನೆಯ, ನೈತಿಕತೆಯ ಎಲ್ಲಾ ಆಯಾಮಗಳನ್ನು ಉಪದೇಶ ಮಾಡಿ. ಈ ಉಪದೇಶಗಳು ಅಳವಟ್ಟಿವಿಯೇ ಇಲ್ಲವೇ ಎನ್ನುವುದನ್ನು ಪರೀಕ್ಷೆ ಮಾಡಬೇಕು. ಇಲ್ಲದಿದ್ದರೆ ಏನೂ ಅರಿಯದ ಅಜ್ಞಾನಿಗಳನ್ನು ತಂದು ಪೀಠಾಧಿಕಾರಿ ಉತ್ತರಾಧಿಕಾರಿ ಮಾಡಿದರೆ ಬಹುದೊಡ್ಡ ತಪ್ಪಾಗುತ್ತದೆ. ಉತ್ತಮ ಮೌಲ್ಯಗಳನ್ನು ಧರ್ಮ ಮಾರ್ಗವನ್ನು ಧರ್ಮದ ಸೂಕ್ಷಮತೆಗಳನ್ನು ಬೋದಿಸದೇ ಹೋಗುವುದು ಎರಡನೇ ತಪ್ಪಾಗುತ್ತದೆ. ಬೋಧಿಸಿದರೂ ಅದನ್ನು ಪರೀಕ್ಷಿಸದೇ ಧರ್ಮ ಪ್ರತಿನಿಧಿಗಳನ್ನಾಗಿ, ಪೀಠಾಧಿಕಾರಿ, ಉತ್ತರಾಧಿಕಾರಿಗಳನ್ನಾಗಿ ಮಾಡುವುದು ಪ್ರಮಾದವಾಗುತ್ತದೆ. ಇಂತಹ ತಪ್ಪುಗಳನ್ನೇ ಮಾಡಿದಾಗ, ತಪ್ಪು ತಪ್ಪನ್ನೇ ಬಿತ್ತಿ ತಪ್ಪನ್ನೇ ಬೆಳೆದು, ತಪ್ಪು ತಪ್ಪಾಗಿ ತಪ್ಪಾಗುವುದರಲ್ಲಿ ಸಂದೇಹವೇ ಇಲ್ಲ. ತಪ್ಪು ಭಾವನೆ ತಪ್ಪು ವರ್ತನೆಯಿಂದ, ಧರ್ಮಪೀಠವನ್ನು ತಪ್ಪಾದ ದಾರಿಯಲ್ಲಿ ಕೊಂಡೊಯ್ಯುತ್ತಾರೆ. ಸಂವಿಧಾನ ಕಾಯ್ದೆ ಕಾನೂನುಗ...