ಯತ್ನಾಳ್ ಉಚ್ಛಾಟನೆ: ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರ ಹೋರಾಟಕ್ಕೆ ಸಿಕ್ಕ ಪ್ರತಿಫಲ
ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಭಾರತೀಯ ಜನತಾ ಪಕ್ಷವು 06 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದು ಸ್ವಾಗತಾರ್ಹ. ಮೂರು ತಿಂಗಳುಗಳ ಹಿಂದೆ ಶಾಸಕ ಯತ್ನಾಳ, ಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡಿ ಸಾರ್ವಜನಿಕವಾಗಿ ವಿಶ್ವಗುರು ಬಸವಣ್ಣನವರ ಅಪಹಾಸ್ಯ ಮಾಡಿದ್ದರು. ಈ ರೀತಿ ಮಾಡಿ ಕರ್ನಾಟಕ ಸಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಅಪಚಾರ ಮಾಡಿದ್ದರು. ಹಾಗೂ ಕ್ಷಮೆಯನ್ನು ಕೇಳುವುದಕ್ಕೂ ಕೂಡ ನಿರಾಕರಿಸಿದ್ದರು. ಅವಾಗ ಬೀದರ, ಬೆಳಗಾವಿ ಹಾಗೂ ಗಂಗಾವತಿಯಲ್ಲಿ ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರು, ಪೂಜ್ಯ ಮಾತೆ ಮಹಾದೇವಿಯವರ ಅನುಯಾಯಿಗಳು ಉಳಿದ ಬಸವಪರ ಸಂಘಟನೆಗಳ ಸಹಕಾರ ಪಡೆದು ರಸ್ತೆಗೆ ಇಳಿದು ಯತ್ನಾಳ್ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡಿದ್ದರು. ಯತ್ನಾಳರನ್ನು ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹ ಮಾಡಿ, ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇವಾಗ ಭಾರತೀಯ ಜನತಾ ಪಕ್ಷವು ಯತ್ನಾಳರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕ್ರಮವೂ ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರು ಮಾಡಿದ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಡಿಸೆಂಬರ್ ನಲ್ಲಿ ನಡೆದ ಹೋರಾಟದ ಛಾಯಾಚಿತ್ರಗಳು. - ರಾಷ್ಟ್ರೀಯ ಬಸವ ದಳ