ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏಕೆ ?

ಇಮೇಜ್
  ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏ ಕೆ? ಕೆಲವು ದಿನಗಳ ಹಿಂದೆ *ಬೆಂಗಳೂರಿನ* ಬಸವ ಮಂಟಪದಲ್ಲಿ ಓರ್ವ ಶರಣರು ಪ್ರವಚನ ಮಾಡುತ್ತಾ,  " ವಚನ ಸಂಪುಟಗಳಲ್ಲಿ ಇರುವ ವಚನಗಳ *ಸಾರಾಂಶ*  ನಮಗೆ ಸಿಗಬೇಕು ಅಂದ್ರೆ ಪರಮ ಪೂಜ್ಯ ಮಾತೆಮಹಾದೇವಿಯವರ  ಸಾಹಿತ್ಯದಿಂದ ಅದು ಸಾಧ್ಯ ಆಗುತ್ತೆ. ಬಸವ ವಚನಾಮೃತ  ಗ್ರಂಥವನ್ನು ಓದಿದ್ರೆ  ಗುರು ಬಸವಣ್ಣನವರ *ತತ್ವ ಸಿದ್ಧಾಂತಗಳು* ಅರ್ಥ ಆಗುತ್ತವೆ.  ಬಸವ ತತ್ವ ಮತ್ತು ಲಿಂಗಾಯತ ಧರ್ಮವನ್ನು *ಸರಳವಾಗಿ* ಅಷ್ಟೇ *ಸ್ಪಷ್ಟವಾಗಿ* ಅರ್ಥ ಮಾಡಿಕೊಳ್ಳಬೇಕೆಂದರೆ ಮಾತಾಜಿ ಸಾಹಿತ್ಯವನ್ನು ಓದಬೇಕು."  ಈ ರೀತಿ ತಮ್ಮ ಪ್ರವಚನದಲ್ಲಿ ಈ ಮೇಲಿನ ಮಾತುಗಳನ್ನು ಅವರು ಹೇಳ್ತಾ ಇರುವಾಗ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗೆ ಸಂಬಂಧಪಟ್ಟ ಓರ್ವ ವ್ಯಕ್ತಿ ಎದ್ದುನಿಂತು ಅವರ ಮಾತನ್ನು ಮಧ್ಯದಲ್ಲಿ ತಡೆದು, "ಮಾತಾಜಿ ಸಾಹಿತ್ಯವನ್ನೇ ಏಕೆ ಓದಬೇಕು? ವಚನಗಳಿಗೆ ಮಾತಾಜಿ ಅವರು ಬರೆದಿರುವ ಅರ್ಥವನ್ನೇ ಏಕೆ ಓದಬೇಕು?" ಎಂದು ಪ್ರಶ್ನೆ ಮಾಡಿದರಂತೆ.  ವಚನಗಳು ಹೇಗೆಂದರೆ, *ದವಸ ಧಾನ್ಯಗಳು* ಇದ್ದ ಹಾಗೆ. ಅವುಗಳನ್ನು ನೇರವಾಗಿ ತಿನ್ನಲಿಕ್ಕೆ ಬರುವುದಿಲ್ಲ. ಅದನ್ನು ತೊಳೆದು, ಕಸ ಕಡ್ಡಿಗಳನ್ನು ಬೇರ್ಪಡಿಸಿ, ಅಡುಗೆ ಮಾಡಿ ನಂತರ ಊಟ ಮಾಡಬೇಕಾಗುತ್ತದೆ.   ಪೂಜ್ಯ ಮಾತೆಮಹಾದೇವಿಯವರು ಶ್ರೇಷ್ಠ *ಸಾಹಿತಿಗಳು, ತತ್ವಜ್ಞಾನಿಗಳು, ಅನುಭಾವಿಗಳು, ದಾರ್ಶನಿಕರು ಹಾಗೂ ಸ...

ಸುಪ್ರೀಂ ಕೋರ್ಟ್ ತೀರ್ಪು

ಇಮೇಜ್
  ಸುಪ್ರೀಂ ಕೋರ್ಟ್ ತೀರ್ಪು 👉 *ಸುಪ್ರೀಂ ಕೋರ್ಟ್ ತೀರ್ಪು* ಇದು ಪೂಜ್ಯ ಚನ್ನಬಸವಾನಂದ ಸ್ವಾಮೀಜಿಗಳಿಗೆ ಮಾತ್ರ ಸಿಕ್ಕ ಜಯ ಅಲ್ಲ,  ಇದು ಪರಮಪೂಜ್ಯ ಮಾತೆಮಹಾದೇವಿ ತಾಯಿಯವರ *ಆದೇಶಕ್ಕೆ* ಸಿಕ್ಕ ಜಯ..  ಏಕೆಂದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯ ಆಗುವ ಮುಂಚೆ ತಮ್ಮ ಕೊನೆಯ ಶರಣ ಮೇಳದಲ್ಲಿ "ಯಾವ ಕಾವಿಧಾರಿಗಳನ್ನು ಕೂಡ ಸಂಸ್ಥೆಯಿಂದ ಹೊರಗೆ ಹಾಕಬೇಡಿ, ಏನೇ ಭಿನ್ನಅಭಿಪ್ರಾಯಗಳು ಬಂದರೂ ಕೂಡ ಎಲ್ಲರೂ *ಹೊಂದಿಕೊಂಡು* ಹೋಗಬೇಕು,"  ಎಂದು ಆದೇಶ ಮಾಡಿ ಹೋಗಿದ್ದರು.  ಆದರೆ ಅವರ ಲಿಂಗೈಕ್ಯದ ನಂತರ ಈಗಿನ ಪೀಠಾಧ್ಯಕ್ಷರು ಕೆಲವು *ಸ್ವಾರ್ಥ ಶಕ್ತಿಗಳ ಕೈಗೊಂಬೆಯಾಗಿ*  ಕೆಲವು ಕಾವಿಧಾರಿಗಳನ್ನು ಹಾಗೂ ಕೆಲವು ಶರಣರನ್ನ ಸಂಸ್ಥೆಯಿಂದ ಹೊರಗೆ ಹಾಕಿ ತಮ್ಮ ಗುರುಗಳ *ಆದೇಶದ ಉಲ್ಲಂಘನೆ* ಮಾಡಿದರು.  "ಸ್ವಾಮೀಜಿಯವರು ಲಿಂಗದೇವ ವಚನಾಂಕಿತ ವನ್ನು ಬಳಸಿ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದ್ದಾರೆ ಅದಕ್ಕಾಗಿ ನಾವು ಅವರನ್ನು ಉಚ್ಚಾಟನೆ ಮಾಡಿದ್ದೇವೆ" ಎಂದು ಪೀಠಾಧ್ಯಕ್ಷರು ಹಾಗು ಹಿಂದಿನ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಸೇರಿ *ಪತ್ರಿಕೆ ಹೇಳಿಕೆ* ಯನ್ನು ಕೊಟ್ಟಿದ್ದರು. ಸಮಾಜವು ಕೂಡ ಇದನ್ನೇ ನಿಜ ಎಂದು ನಂಬಿಕೊಂಡಿತ್ತು.  ಒಂದು ವೇಳೆ ಸ್ವಾಮೀಜಿ ಅವರು ಆವಾಗ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದ್ದರೆ ಇವಾಗ ಸುಪ್ರೀಂಕೋರ್ಟ್ ಅವರಿಗೆ ಶಿಕ್ಷೆ ಕೊಡಬೇಕಿತ್ತು, ಅಥವಾ ಮಾತೆಗಂಗಾದೇವಿ ಅವರ ನಿರ...

ನಂದಿ / ಆಕಳು / ಬಹು ಉಪಯೋಗಿ ಪ್ರಾಣಿ

ಇಮೇಜ್
  ನಂದಿ / ಆಕಳು / ಬಹುಒಪಯೊಗಿ ಪ್ರಾಣಿ     ಪೌರಾಣಿಕ ಕಥೆಗಳು ಪ್ರತಿಯೊಂದು ಪುರಾಣಗಳಲ್ಲಿ/ಕಥೆಗಳಲ್ಲಿ ಆಯಾ ವ್ಯಕ್ತಿಗಳನ್ನು ಒಬ್ಬ ಕಲ್ಪಾನಿಕ ದೆವತೆಯ ಅವತಾರವೆಂದು ಬಿಂಬಿಸುವುದು ರೂಢಿಯಲ್ಲಿ ಇದೆ. ಇಂದಿಗು ಕುಂಕುಮ ಧಾರಿಗಳು ಗುರುಬಸವಣ್ಣನವರ ವಿಚಾರಗಳನ್ನು ಜನರಿಗೆ ತಲುಪದ ಹಾಗೆ ದಾರಿತಪ್ಪಿಸುವ ಪ್ರಯತ್ನ  ಪುಸ್ತಕಗಳಲ್ಲಿ ತಪ್ಪು ಮಾಹಿತಿ ನೀಡಿ ಮುದ್ರಿಸಿ (ವಚನ ದರ್ಶನ) ಮಾಡುತಿದ್ದಾರೆ, ಇನ್ನು ಕೆಲವು ರಾಜಕಾರಣಿಗಳು (ಯತ್ನಾಳ) ವಚನಗಳ ಗಾಳಿ ಗಂಧ ಅರಿಯದೆ, ಮನ ಬಂದಂತೆ ಅರ್ಥಿಸಿ ದಾರಿತಪ್ಪಿಸುತಿದ್ದಾರೆ.. ವಚನಗಳ ಆಧಾರಿತವಾಗಿ, ಗುರು ಬಸವಣ್ಣನವರು ಸೃಷ್ಟಿಕರ್ತನ ಮಣಿಹ ಹೊತ್ತು ಜನಿಸಿದ ಪ್ರವಾದಿಯಾಗಿದ್ದರು ಎನ್ನುವುದರಲ್ಲಿ ಯಾವುದೆ ಸಂದೇಹ ವಿಲ್ಲಾ. ಮೆಲಿನ ವಿಚಾರವನ್ನು ತಿಳಿದುಕೊಂಡು, ಗುರು ಬಸವಣ್ಣನವರು ದೇವರ ಮಣಿಹ ಹೊತ್ತಿ ಜನಿಸಿ, ಮಾನವ ಕುಲದ ಲೆಸಿಗಾಗಿ ನವ ಸಮಾಜ ಕಟ್ಟಿ, ಸಮಾನತೆಯ ಹರಿಕಾರರಾಗಿ ಲಿಂಗೈಕ್ಯರಾದ ಒಬ್ಬ ಮಾಹಾನ ಪ್ರವಾದಿಯಾಗಿದ್ದಾರೆ. ಅವರು ಜನಿಸುವ ಮೊದಲು ಸಮಾಜದಲ್ಲಿ ರೂಢಿಯಿದ್ದ ಜಿವನ ಪದ್ಧತಿಯನ್ನು ದೃಷ್ಟಿಸುವ ಚಿತ್ರವಿದು. ಕಲಾವಿದ ಸೊಮಶಟ್ಟಿ ಶರಣರಿಗೆ ಧನ್ಯವಾದಗಳು. - ವಿಕೋ

ಅರಿಯದ ಮಂದಮತಿಗಳು

ಇಮೇಜ್
 ➖ ಕೆಲವು ಮಠಾಧೀಶರು, ಕೆಲವು ಸಂಘಟನೆಗಳ ಮುಖಂಡರು, ಹಾಗೂ ಕೆಲವು ಅರಿಯದ ಮಂದಮತಿಗಳ ಮುಂದೆ ಹೀರೋ (ನಾಯಕ ) ಆಗಲಿಕ್ಕೆ ಹೋಗಿ ವಚನಾಂಕಿತ ವಿಷಯವನ್ನು *ನೆಪ* ಮಾಡಿ ಇಡೀ ಲಿಂಗಾಯತ ಸಮುದಾಯದ *ಬಲಿಷ್ಠ* ಸಂಘಟನೆಯಾಗಿದ್ದ ರಾಷ್ಟ್ರೀಯ ಬಸವದಳವನ್ನು ಒಡೆದ *ಅಪಕೀರ್ತಿ* ಧನ್ನೂರ್ ಅವರಿಗೆ ಸಲ್ಲುತ್ತದೆ.  ಒಂದು ವೇಳೆ ರಾ. ಬ.ದಳ ಸಂಘಟನೆ ಒಡೆಯದಿದ್ದರೆ ಲಿಂಗಾಯತ ಧರ್ಮದ ಮೇಲೆ *ದಾಳಿ* ಮಾಡುತ್ತಿರುವ *ವಚನದರ್ಶನ* ಪುಸ್ತಕದ ವಿರುದ್ಧ ದೊಡ್ಡ ಹೋರಾಟಗಳು ನಡೆಯುತ್ತಿತ್ತು.  ಗುರುಬಸವಣ್ಣನವರ ಬಗ್ಗೆ ಅವಮಾನ ಮಾಡಿ ಅವರ *ಲಿಂಗೈಕ್ಯದ* ಬಗ್ಗೆ ತಪ್ಪು ಸಂದೇಶ ನೀಡಿರುವ ಶಾಸಕ *ಯತ್ನಾಳ್* ವಿರುದ್ಧ ಪ್ರಭಲ ಹೋರಾಟ ಪ್ರತಿಭಟನೆ ಈ ಸಂಘಟನೆ ವತಿಯಿಂದ ನಡೆಯುತ್ತಿತ್ತು.  ಹಾಗೂ ಲಿಂಗಾಯತ ಧರ್ಮ *ಸಂವಿಧಾನಿಕ ಮಾನ್ಯತೆ* ಸಲುವಾಗಿ ಇಲ್ಲಿಯವರೆಗೆ ಅನೇಕ *ರ್ಯಾಲಿಗಳು* ಈ ಸಂಘಟನೆಯ ಮುಂದಾಳತ್ವದಲ್ಲಿ ನಡೆಯುತ್ತಿದ್ದವು. ಇಂತಹ ಸಂಸ್ಥೆ ಹಾಗೂ ಸಂಘಟನೆಯನ್ನು ಒಡೆದಿರುವ ಮನೆಹಾಳು ಕೆಲಸವನ್ನು "ಬಸವಕಾರ್ಯ" ಎಂದು ಹೇಳಿಕೊಳ್ಳುತ್ತಿರುವುದು ನಿಮ್ಮ *ಅಜ್ಞಾನದ ಪರಮಾವಧಿ* ಯನ್ನು ಎತ್ತಿ ತೋರಿಸುತ್ತದೆ.  ನಮ್ಮ ಬಸವ ಧರ್ಮಪೀಠದ ಪೀಠಾಧ್ಯಕ್ಷರು ಹಾಗು ಕೆಲವು ಜಂಗಮೂರ್ತಿಗಳು ಕೂಡ ಇಂಥವರ *ಒತ್ತಡಕ್ಕೆ* ಹಾಗೂ *ಆಮಿಷಕ್ಕೆ* ಬಲಿಯಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಗುರುಗಳ *ಆದೇಶಕ್ಕೆ* ವಿರುದ್ಧವಾಗಿ ಹೋಗಿ ತಮ್ಮ ಮನೆಯನ್ನು ತಾವೇ ...