ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ರೇಣುಕಾಚಾರ್ಯರ ಜಯಂತಿ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸೇರಿಸಿ ಮಾಡುತ್ತಿರುವುದು ಏಕೆ ?
ಈ ಆಮಂತ್ರಣ ಪತ್ರಿಕೆಯಲ್ಲಿ ರೇಣುಕಾಚಾರ್ಯರ ಹೆಸರಿನ ಜೊತೆ "ಜಗದ್ಗುರು" ಪದವನ್ನು ಬಳಸಲಾಗಿದೆ ಆದರೆ ಬಸವಣ್ಣನವರ ಹೆಸರಿನ ಜೊತೆ "ಭಕ್ತಿ ಭಂಡಾರಿ" ಎಂಬ ಪದವನ್ನ ಮಾತ್ರ ಬಳಸಲಾಗಿದೆ. "ಗುರು" ಅಥವಾ "ವಿಶ್ವಗುರು" ಪದವನ್ನು ಬಳಸಿಲ್ಲ.
ರೇಣುಕಾಚಾರ್ಯರು ಮಾತ್ರ ಗುರು ಆದರೆ ಬಸವಣ್ಣನವರು ಕೇವಲ ಭಕ್ತರು ಎನ್ನುವ ಅರ್ಥದಲ್ಲಿ ಪರೋಕ್ಷವಾಗಿ ಬಿಂಬಿಸಲಾಗಿದೆ. ಈ ರೀತಿ ಮಾಡಿ ಗುರು ಬಸವಣ್ಣನವರನ್ನು ರೇಣುಕಾಚಾರ್ಯರ ಹೆಸರಿನ ಕೆಳಗಡೆ ತೋರಿಸಿ ಅಳಿಸಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
*ಏಪ್ರಿಲ್ 2* ರಂದು ವೀರಶೈವ ಮಹಾಸಭಾದವರು ಬಸವ ಜಯಂತಿಯ ದಿನದಂದು ರೇಣುಕಾಚಾರ್ಯ ಜಯಂತಿ ಸೇರಿಸಿ ಎರಡು ಫೋಟೋ ಇಟ್ಟು ಆಚರಣೆ ಮಾಡಬೇಕೆಂದು ಒಂದು ಸುತ್ತೋಲೆ (Circular) ಹೊರಡಿಸಿದ್ದರು. ಬಸವ ಪರ ಸಂಘಟನೆಗಳ ಬಸವಭಕ್ತರ ಪ್ರತಿಭಟನೆಯಿಂದಾಗಿ *ಎಪ್ರಿಲ್ 27* ರಂದು ಈ ಸುತ್ತೋಲೆಯನ್ನು ವೀರಶೈವ ಮಹಾಸಭಾ ಹಿಂಪಡೆದುಕೊಂಡಿತು.
ಇವಾಗ *ಜೂನ್ 13* ರಂದು ರಂಭಾಪುರಿ ಶ್ರೀಗಳು ಮತ್ತೆ ಅದನ್ನೇ ಮಾಡುತ್ತಿರುವುದನ್ನು ನೋಡಿದರೆ ವೀರಶೈವ ಮಹಾಸಭಾದವರು ಅವಾಗ ಹೊರಡಿಸಿದ್ದ ಸುತ್ತೋಲೆ ಹಿಂದೆ ಇವರ ಕೈ ಇತ್ತೇ ? ಎಂಬ ಸಂಶಯ ಮೂಡುತ್ತಿದೆ.
ತಾವು ರೇಣುಕಾಚಾರ್ಯ ಜಯಂತಿಯನ್ನು ವರ್ಷದಲ್ಲಿ 100 ಸಲ ಆದರೂ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ ಆದರೆ ಗುರು ಬಸವಣ್ಣನವರ ಜಯಂತಿಯನ್ನು ಮಾತ್ರ ಅದರ ಜೊತೆ ಸೇರಿಸಬೇಡಿ. ಅದಕ್ಕೆ ಮಾತ್ರ ನಮ್ಮ ವಿರೋಧವಿದೆ.
*"ಎನಗೆಯೂ ಗುರು, ನಿನಗೆಯು ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರ"* ಎಂದು ಶೂನ್ಯಪೀಠಾಧೀಶ ಅಲ್ಲಮಪ್ರಭುಗಳು ಹೇಳಿರುವಂತೆ ಗುರು ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಮಾತ್ರ ಅಲ್ಲ, ಭಾರತಕ್ಕೆ ಮಾತ್ರ ಅಲ್ಲ, ಇಡೀ ವಿಶ್ವಕ್ಕೆ ಗುರುವಾಗುವಂತಹ ವ್ಯಕ್ತಿತ್ವ ಮತ್ತು ಸಾಧನೆ ಉಳ್ಳವರು. ಆದ್ದರಿಂದ ಇವರು "ವಿಶ್ವಗುರು".
(~ ಸಿದ್ದವೀರ ಸಂಗಮದ)
Please Comment Your Thought on this article
ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

💐
ಪ್ರತ್ಯುತ್ತರಅಳಿಸಿ