ಲೋಕದ ಡೊಂಕ ತಿದ್ದಬಾರದೇ? (ಭಾಗ-7/7)

ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ?
ನಿಮ್ಮ ನಿಮ್ಮತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ಗುರು ಶಿಷ್ಯ ಪರಂಪರೆಯಲ್ಲಿ ಉತ್ತರಾಧಿಕಾರಿ ತಪ್ಪು ಮಾಡಿದಾಗ, ಗುರುವಿನ ಮುಂದೆ ತಪ್ಪು ಪ್ರಸ್ತಾವನೆ(Proposal)ಗಳನ್ನು, ಬೇಡಿಕೆಗಳನ್ನು ಇಟ್ಟಾಗ, ಪೀಠಾಧಿಕಾರಿ ಉತ್ತರಾಧಿಕಾರಿಯನ್ನು ತಿದ್ದಬೇಕು. ನಿಜ ಧರ್ಮ ಉಪದೇಶ ಮಾಡಬೇಕು, ಮೌಲ್ಯಗಳನ್ನು ಕಲಿಸಬೇಕು. ಸಾಧಕ ಜೀವನದ ಉಪದೇಶವನ್ನು ಮಾಡಬೇಕು. ಧರ್ಮದ, ಸಾಧನೆಯ, ನೈತಿಕತೆಯ ಎಲ್ಲಾ ಆಯಾಮಗಳನ್ನು ಉಪದೇಶ ಮಾಡಿ. ಈ ಉಪದೇಶಗಳು ಅಳವಟ್ಟಿವಿಯೇ ಇಲ್ಲವೇ ಎನ್ನುವುದನ್ನು ಪರೀಕ್ಷೆ ಮಾಡಬೇಕು.

ಇಲ್ಲದಿದ್ದರೆ ಏನೂ ಅರಿಯದ ಅಜ್ಞಾನಿಗಳನ್ನು ತಂದು ಪೀಠಾಧಿಕಾರಿ ಉತ್ತರಾಧಿಕಾರಿ ಮಾಡಿದರೆ ಬಹುದೊಡ್ಡ ತಪ್ಪಾಗುತ್ತದೆ. 

ಉತ್ತಮ ಮೌಲ್ಯಗಳನ್ನು ಧರ್ಮ ಮಾರ್ಗವನ್ನು ಧರ್ಮದ ಸೂಕ್ಷಮತೆಗಳನ್ನು ಬೋದಿಸದೇ ಹೋಗುವುದು ಎರಡನೇ ತಪ್ಪಾಗುತ್ತದೆ. ಬೋಧಿಸಿದರೂ ಅದನ್ನು ಪರೀಕ್ಷಿಸದೇ ಧರ್ಮ ಪ್ರತಿನಿಧಿಗಳನ್ನಾಗಿ, ಪೀಠಾಧಿಕಾರಿ, ಉತ್ತರಾಧಿಕಾರಿಗಳನ್ನಾಗಿ ಮಾಡುವುದು ಪ್ರಮಾದವಾಗುತ್ತದೆ.

ಇಂತಹ ತಪ್ಪುಗಳನ್ನೇ ಮಾಡಿದಾಗ, ತಪ್ಪು ತಪ್ಪನ್ನೇ ಬಿತ್ತಿ ತಪ್ಪನ್ನೇ ಬೆಳೆದು, ತಪ್ಪು ತಪ್ಪಾಗಿ ತಪ್ಪಾಗುವುದರಲ್ಲಿ ಸಂದೇಹವೇ ಇಲ್ಲ. ತಪ್ಪು ಭಾವನೆ ತಪ್ಪು ವರ್ತನೆಯಿಂದ, ಧರ್ಮಪೀಠವನ್ನು ತಪ್ಪಾದ ದಾರಿಯಲ್ಲಿ ಕೊಂಡೊಯ್ಯುತ್ತಾರೆ.

ಸಂವಿಧಾನ ಕಾಯ್ದೆ ಕಾನೂನುಗಳು ರಚನೆಯಾಗಿದ್ದು ಲೋಕದ ಡೊಂಕು ತಿದ್ದಲಿಕ್ಕೆಯೇ. ಒಂದು ವೇಳೆ ಲೋಕದ ಡೊಂಕ ಯಾರೂ ತಿದ್ದದೇ ಹೋದರೆ ಭೂಮಿಯ ಮೇಲೆ ಮನುಕುಲ ಅಳಿದುಹೋಗುತ್ತದೆ. ಕರ್ತಾರನ ಕಮ್ಮಟವಾದ ಈ ಮರ್ತ್ಯಲೋಕ ಹಾಳು ಬೀಳುತ್ತದೆ. ಇದು ಕರ್ತಾರನಾದ ಲಿಂಗದೇವನಿಗಿ ಇಷ್ಟವಾಗದ ವಿಚಾರ. ಅದಕ್ಕಾಗಿಯೇ ಕಾಲ ಕಾಲಕ್ಕೆ ಲೋಕದ ಡೊಂಕನ್ನು ತಿದ್ದಲು ಗುರು ಬಸವಣ್ಣನವರಂತಹ ಗುರುವನ್ನು, ಲಿಂಗಾನಂದ ಗುರುದೇವರಂತಹ ಮಾತೆ ಮಹಾದೇವಿಯವರಂತಹ ಜಂಗಮರನ್ನು, ಗುರು ಬಸವಣ್ಣನವರ ಈ ವಚನ ವಿವರಿಸಿ ತನ್ನ ಡೊಂಕನ್ನು ತಿದ್ದಿಕೊಳ್ಳುವ ನನ್ನಂತಹವರನ್ನು, ಇದನ್ನು ಓದಿ ತಮ್ಮ ಡೊಂಕನ್ನು ತಿದ್ದಿಕೊಳ್ಳುತ್ತಿರುವ ನಿಮ್ಮಂತಹವರನ್ನು ಈ ಮರ್ತ್ಯಲೋಕ್ಕೆ ಕಳುಹಿಸಿ ಇದನ್ನು ಸುಂದರಗೊಳಿಸುತ್ತಾನೆ. ಅಂತಹ ಕರ್ತಾರ ಲಿಂಗದೇವನಿಗೆ, ಗುರು ಬಸವಣ್ಣನವರಿಗೆ, ಅವರ ಪರಂಪರೆಯ ನಿಜ ಶರಣರಿಗೆ ಅನಂತ ಕೋಟಿ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.


-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

  1. ಶರಣರೇ , ಈ ವಚನ ಈಗ ಅದರ ನಿಜ ಅರ್ಥಕ್ಕೆ ಬಂತು , ಇಲ್ಲಾ ದ್ದಿದರೆ , ಈ ಸಮಾಜದಲ್ಲಿ ಸ್ವಾರ್ಥಿಗಳು ಕೆಟ್ಟ ಕೆಟ್ಟ ಕೆಲಸಕ್ಕೂ ತಮಗೆ ತಕ್ಕಂತೆ ಬಳಸಿಕೊಂಡು , ಮೇಲಿಂದ ಗುರು ಬಸವಣ್ಣನವರೆ ಈ ವಚನ ದಲ್ಲಿ ಲೋಕದ ಡೊಂಕ ನೀವೇಕೆ ತಿದ್ದುವಿರಿ ಅಂತ ಹೇಳಿಲವೇ ಎಂದು ಪ್ರಶ್ನೆ ಮಾಡುತ್ತಾರೆ , ಕಾರಣ ಈಗ ನೀವು ಸತ್ಯದ ವರಿಗಲ್ಲಿಗೆ ಹಚ್ಚಿದಿರಿ, ತುಂಬಾ ಸಂತೋಷ ಧನ್ಯವಾದಗಳು ಶರಣು ಶರಣಾರ್ಥಿ, ಮಲ್ಲಿಕಾರ್ಜುನ ನಾಗಶೆಟ್ಟಿ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೂಗನೂರ್ ಗ್ರಾಮದವರು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…